Putin India Visit: ಭಾರತ - ರಷ್ಯಾ ಮಾತುಕತೆ: ನ್ಯೂಕ್ಲಿಯರ್ ವಿಚಾರದಲ್ಲಿ ಭಾರತಕ್ಕೆ ಬಂಪರ್!
Putin India Visit: ಭಾರತ ಮತ್ತು ರಷ್ಯಾ ನಡುವೆ ಹಲವು ಪ್ರಮುಖ ಒಪ್ಪಂದಗಳು ಏರ್ಪಟ್ಟಿವೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ಎರಡು ದಿನಗಳ ಕಾಲ ವಿಶೇಷ ಭೇಟಿ ನೀಡಿದ್ದಾರೆ. ಅಮೇರಿಕಾದ ವಿಪರೀತ ತೆರಿಗೆ, ಚೀನಾ ಉಪಟಳ ಹಾಗೂ ಪಾಕಿಸ್ತಾನದ ಕುತಂತ್ರಗಳ ನಡುವೆ ರಷ್ಯಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿರುವ ಹಲವು ಕಾರಣಗಳಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದರ ನಡುವೆ ಪರಮಾಣ (ನ್ಯೂಕ್ಲಿಯರ್) ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ತಮಿಳುನಾಡಿನ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಮೂರನೇ ರಿಯಾಕ್ಟರ್ನ ಆರಂಭಿಕ ಲೋಡ್ಗಾಗಿ ಪರಮಾಣು ಇಂಧನದ ಮೊದಲ ಹಂತದಲ್ಲಿ ಸರಕನ್ನು ತಲುಪಿಸಲಾಗಿದೆ ಎಂದು ರಷ್ಯಾದ ಸರ್ಕಾರಿ ಪರಮಾಣು ನಿಗಮ ಹೇಳಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಭೇಟಿಗಾಗಿ ನವದೆಹಲಿಗೆ ಆಗಮಿಸುವುದರೊಂದಿಗೆ ಪರಮಾಣು ಇಂಧನದ ವಿತರಣೆ ಒಪ್ಪಂದ ಏರ್ಪಟ್ಟಿದೆ.

ರೊಸಾಟಮ್ನ ಪರಮಾಣು ಇಂಧನ ವಿಭಾಗವು ನಿರ್ವಹಿಸುವ ಸರಕು ವಿಮಾನ ನೊವೊಸಿಬಿರ್ಸ್ಕ್ ಕೆಮಿಕಲ್ ಕಾನ್ಸೆಂಟ್ರೇಟ್ಸ್ ಪ್ಲಾಂಟ್ನಿಂದ ತಯಾರಿಸಲ್ಪಟ್ಟ ಇಂಧನ ಅಸೆಂಬ್ಲಿಗಳನ್ನು ಭಾರತದ ತಮಿಳುನಾಡಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ನಿಗಮವು ಹೇಳಿಕೆಯಲ್ಲಿ ತಿಳಿಸಿದೆ. ರಷ್ಯಾದಿಂದ ಒಟ್ಟು ಏಳು ವಿಮಾನಗಳು ಸಂಪೂರ್ಣ ರಿಯಾಕ್ಟರ್ ಕೋರ್ ಮತ್ತು ಕೆಲವು ಮೀಸಲು ಇಂಧನವನ್ನು ಪೂರೈಸಲು ಯೋಜಿಸಲಾಗಿದೆ.
2024 ರಲ್ಲಿ ಎರಡೂ ರಾಷ್ಟ್ರಗಳು ಸಹಿ ಮಾಡಿದ ಒಪ್ಪಂದದ ಅಡಿಯಲ್ಲಿ ಈಗ ಇಂಧನ ಸಾಗಾಣಿಕೆ ಆಗಿದೆ. ಇದರಲ್ಲಿ ಕೂಡಂಕುಳಂ ಸ್ಥಾವರದ ಮೂರನೇ ಮತ್ತು ನಾಲ್ಕನೇ VVER-1000 ರಿಯಾಕ್ಟರ್ಗಳಿಗೆ ಆರಂಭಿಕ ಲೋಡಿಂಗ್ನಿಂದ ಪ್ರಾರಂಭವಾಗುವ ಪೂರ್ಣ ಅವಧಿಗೆ ಇಂಧನ ಪೂರೈಕೆ ಮಾಡುವ ಒಪ್ಪಂದವೂ ಸಹ ಸೇರಿದೆ. ಕೂಡಂಕುಳಂ ಸ್ಥಾವರವು ಒಟ್ಟು 6,000 MW ಸಾಮರ್ಥ್ಯದೊಂದಿಗೆ ಆರು VVER-1000 ರಿಯಾಕ್ಟರ್ಗಳನ್ನು ಹೊಂದಿದೆ. ಕೂಡಂಕುಳಂನಲ್ಲಿರುವ ಮೊದಲ ಎರಡು ರಿಯಾಕ್ಟರ್ಗಳನ್ನು 2013 ಮತ್ತು 2016 ರಲ್ಲಿ ಭಾರತದ ವಿದ್ಯುತ್ ಗ್ರಿಡ್ಗೆ ಸಂಪರ್ಕಿಸಲಾಯಿತು. ಇನ್ನು ಇತರ ನಾಲ್ಕು ರಿಯಾಕ್ಟರ್ಗಳು ನಿರ್ಮಾಣ ಹಂತದಲ್ಲಿವೆ.
ಕೂಡಂಕುಳಂ ಸ್ಥಾವರದ ಮೊದಲ ಹಂತದಲ್ಲಿ ಈ ಎರಡು ರಿಯಾಕ್ಟರ್ಗಳ ಕಾರ್ಯಾಚರಣೆಯ ಸಮಯದಲ್ಲಿ, ರಷ್ಯಾದ ಮತ್ತು ಭಾರತೀಯ ಎಂಜಿನಿಯರ್ಗಳು ಸುಧಾರಿತ ಪರಮಾಣು ಇಂಧನ ಮತ್ತು ವಿಸ್ತೃತ ಇಂಧನ ಮಾದರಿಯನ್ನು ಪರಿಚಯಿಸುವ ಮೂಲಕ ಅವುಗಳ ದಕ್ಷತೆಯನ್ನು ಹೆಚ್ಚಿಸಲು ಗಣನೀಯ ಕೆಲಸ ಮಾಡಿದ್ದಾರೆ ಎಂದು ರೊಸಾಟಮ್ ಹೇಳಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications