ಮೂರನೇ ಮಗುವಿನ ನಿರೀಕ್ಷೆಯಲ್ಲಿ ವಿಲಿಯಂ ಮತ್ತು ಕೇಟ್
ಬೆಂಗಳೂರು, ಸೆಪ್ಟೆಂಬರ್ 04 : ಮೈಸೂರಿನ ರಾಜಮನೆತನದಲ್ಲಿರುವಂತೆಯೇ ಇಂಗ್ಲೆಂಡಿನ ರಾಜಮನೆತನದಿಂದಲೂ ಗುಡ್ ನ್ಯೂಸ್ ಸದ್ಯದಲ್ಲಿಯೇ ಬರಲಿದೆ. ಅದೇನೆಂದರೆ, ಕೇಂಬ್ರಿಜ್ನ ಡ್ಯೂಕ್ ಪ್ರಿನ್ಸ್ ವಿಲಿಯಂ ಕೈಗೆ ಕೇಟ್ ಮಿಡ್ಲ್ಟನ್ ಅವರು ಮೂರನೇ ಮಗುವನ್ನು ಇಡಲಿದ್ದಾರೆ.
ಕೇಂಬ್ರಿಜ್ನ ಡ್ಯೂಕ್ ಮತ್ತು ಡಚೆಸ್ ಮೂರನೇ ಮಗುವಿನ ನಿರೀಕ್ಷೆಯಲ್ಲಿರುವುದು ರಾಜಮನೆತನಕ್ಕೆ ಭಾರೀ ಸಂತೋಷ ತಂದಿದೆ ಎಂದು ಕೆನ್ಸಿಂಗ್ಟನ್ ಪ್ಯಾಲೇಸ್ ಪತ್ರಿಕಾ ಪ್ರಕಟಣೆಯಲ್ಲಿ ಸೋಮವಾರ ತಿಳಿಸಿದೆ. ಈ ಸುದ್ದಿ ಕೇಳಿ ರಾಣಿ ಎಲಿಜಬೆತ್ ಮತ್ತು ಎರಡೂ ಕುಟುಂಬದ ಸದಸ್ಯರು ನಲಿದಾಡುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಇಬ್ಬಿರಿಗೀಗಾಗಲೆ ನಾಲ್ಕು ವರ್ಷದ ಪ್ರಿನ್ಸ್ ಜಾರ್ಜ್ ಮತ್ತು ಎರಡು ವರ್ಷದ ಪ್ರಿನ್ಸೆಸ್ ಚಾರ್ಲೊಟ್ಟಿ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ರಾಜಮನೆತನಕ್ಕೆ ರಾಜಕುಮಾರನೋ, ರಾಜಕುಮಾರಿಯೋ ಬರುವ ಹೊತ್ತಿನಲ್ಲಿ ಕೇಂಬ್ರಿಜ್ ಡಚೆಸ್ ಆಗಿರುವ ಕೇಟ್ ಅವರು ಕೆಲವು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕೇಟ್ ಅವರು Hyperemesis Gravidarum ಎಂಬ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಲಕ್ಷಣಗಳು, ತಲೆಸುತ್ತುವುದು ಮತ್ತು ವಿಪರೀತ ವಾಂತಿಯಾಗುವುದು. ತಿಂದಿದ್ದೆಲ್ಲ ಜೀರ್ಣವಾಗದೆ ವಾಂತಿಯಾಗುವುದು, ದೇಹದ ತೂಕ ಕುಸಿಯುವುದು ಮತ್ತು ಸಕ್ಕರೆಯ ಅಂಶ ಏರುಪೇರಾಗುವುದು ಎಂದು ಸುತ್ತೋಲೆ ತಿಳಿಸಿದೆ.
ಇವೆಲ್ಲವೂ ಮಹಿಳೆ ಗರ್ಭವತಿಯಾದಾಗ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳೇ. ಆದರೆ, ವಿಪರೀತ ಸ್ಥಿತಿಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಹಾರ್ಮೋನ್ ಸ್ರವಿಕೆ ಏರುಪೇರಾಗಿರುವುದರಿಂದ ಹೀಗಾಗಿರಬಹುದು ಎಂದು ವೈದ್ಯರು ಸೂಚಿಸಿದ್ದಾರೆ.
ಇದೇ ಸಮಸ್ಯೆಯನ್ನು ಕೇಟ್ ಮಿಡ್ಲ್ಟನ್ ಅವರು ಮೊದಲೆರಡು ಮಕ್ಕಳು ಹುಟ್ಟುವ ಮೊದಲೂ ಅನುಭವಿಸಿದ್ದರು. ಈ ಕಾರಣದಿಂದಾಗಿ ಅವರು ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದು ಮಾಡಿ ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications