ತನ್ನ ಮಗನನ್ನು ಕೊಂದ 10 ಭಾರತೀಯರನ್ನು ಕ್ಷಮಿಸಿದ ಪಾಕಿಸ್ತಾನಿ
2015ರಲ್ಲಿ ನಡೆದಿದ್ದ ದೊಂಬಿಯೊಂದರಲ್ಲಿ ಇವರು ಫರ್ಹಾನ್ ಎಂಬ ಯುವಕನನ್ನು ಹತ್ಯೆಗೈದಿದ್ದ ಆರೋಪ 10 ಭಾರತೀಯರ ಮೇಲಿದೆ. ಬ್ಲಡ್ ಮನಿ ಹಾಗೂ ಸಂಧಾನಗಳಿಂದಾಗಿ ಭಾರತೀಯರ ಶಿಕ್ಷೆಯ ಭೀತಿ ದೂರಾಗಿದೆ ಎಂದು ಹೇಳಲಾಗಿದೆ.
ಅಬುಧಾಬಿ, ಮಾರ್ಚ್ 27: 2015ರಲ್ಲಿ ಯುಎಇಯಲ್ಲಿ ನಡೆದಿದ್ದ ಗಲಭೆಯೊಂದರಲ್ಲಿ ತನ್ನ ಮಗನನ್ನು ಕೊಂದಿದ್ದ 10 ಭಾರತೀಯರನ್ನು ಮೃತ ವ್ಯಕ್ತಿಯ ತಂದೆ ಹಾಗೂ ಆತನ ಕುಟುಂಬ ಕ್ಷಮಿಸಿದೆ ಎಂದು ಗಲ್ಫ್ ನ್ಯೂಸ್ ಪ್ರಕಟಿಸಿದೆ.
ಗಲಭೆಯಲ್ಲಿ ಮೃತ ಫರ್ಹಾನ್ ತಂದೆ ಮೊಹಮ್ಮದ್ ಫರ್ಹಾನ್ ಹಾಗೂ ಅವರ ಕುಟುಂಬ ಸದಸ್ಯರು ಇಲ್ಲಿ ಅಲ್ ಏನ್ (ನ್ಯಾಯಾಲಯ) ನಲ್ಲಿ ಆರೋಪಿಗಳನ್ನು ಕ್ಷಮಿಸಿರುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಭಾರತೀಯರಿಗೆ ಈ ಪ್ರಕರಣದಿಂದ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಪಂಜಾಬ್ ಮೂಲದವರಾದ ಭಾರತ ಮೂಲದ ಈ ಹತ್ತು ಯುವಕರೂ 20 ವರ್ಷ ವಯಸ್ಸಿನ ಆಸುಪಾಸಿನವರು. ಇವರೆಲ್ಲರೂ ಯುಎಇಗೆ ಕೆಲಸಕ್ಕಾಗಿ ಬಂದಿದ್ದು, ಎಲೆಕ್ಟ್ರಿಷಿಯನ್, ಕಾರ್ಪೆಂಟರ್ ಮುಂತಾದ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಆದರೆ, 2015ರಲ್ಲಿ ನಡೆದಿದ್ದ ದೊಂಬಿಯೊಂದರಲ್ಲಿ ಇವರು ಫರ್ಹಾನ್ ಎಂಬ ಯುವಕನನ್ನು ಹತ್ಯೆಗೈದಿದ್ದರೆಂದು ಹೇಳಲಾಗಿದೆ.
ಕ್ಷಮೆಗೆ
ಕಾರಣವಾಯ್ತೇ
ನಿಧಿ
ಹಾಗೂ
ಸಂಧಾನ?
ಮೂಲಗಳ
ಪ್ರಕಾರ,
ದುಬೈನಲ್ಲಿರುವ
ಸರ್ಬಾತ್
ಭಾಲಾ
ಚಾರಿಟಬಲ್
ಟ್ರಸ್ಟ್
ಭಾರತೀಯ
ಯುವಕರ
ನೆರವಿಗೆ
ಬಂದಿದೆ.
ಟ್ರಸ್ಟ್
ನ
ಅಧ್ಯಕ್ಷ
ಎಸ್.
ಪಿಎಸ್.
ಓಬೆರಾಯ್
ಅವರ
ಪ್ರಕಾರ,
ಟ್ರಸ್ಟ್
ವತಿಯಿಂದ
ಭಾರತೀಯರನ್ನು
ಬಚಾವ್
ಮಾಡಲೆಂದೇ
ಹೇರಳವಾಗಿ
ಬ್ಲಡ್
ಮನಿ
(ಪರಿಹಾರ
ನಿಧಿ)
ಸಂಗ್ರಹಿಸಲಾಯಿತು.
ಆನಂತರ
ಟ್ರಸ್ಟ್
ನ
ಪ್ರತಿನಿಧಿಯೊಬ್ಬರು
ಪಾಕಿಸ್ತಾನಕ್ಕೆ
ತೆರಳಿ,
ಫರ್ಹಾನ್
ಅವರ
ಕುಟುಂಬ
ಹಾಗೂ
ಸಂಬಂಧಿಕರನ್ನು
ಭೇಟಿಯಾಗಿ
ಅವರಿಗೆ
ಪರಿಹಾರ
ಮೊತ್ತ
ಸಿಗುವುದಾಗಿ
ಹೇಳಿದ್ದಲ್ಲದೆ,
ಉದ್ದೇಶಪೂರ್ವಕವಲ್ಲದ
ತಪ್ಪು
ನಡೆದು
ಹೋಗಿದೆ.
ಆದರೂ,
ಭಾರತೀಯರ
ಜೀವನವನ್ನು
ಕತ್ತಲಾಗಿಸದೇ
ದೊಡ್ಡ
ಮನಸ್ಸು
ಮಾಡಿ
ಅವರನ್ನು
ಶಿಕ್ಷೆಯಿಂದ
ತಪ್ಪಿಸಬೇಕೆಂದು
ಮನವಿ
ಮಾಡಿದ್ದರು.
ಅವರ ಸಂಧಾನ ಸಫಲವಾಗಿದ್ದು, ಆನಂತರ ಟ್ರಸ್ಟ್ ಹಾಗೂ ಅಬುಧಾಬಿಯಲ್ಲಿರುವ ಭಾರತೀಯ ಧೂತಾವಾಸದ ನೆರವಿನಿಂದ ಹಣವನ್ನು ಮೃತನ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಹಾಗಾಗಿ, ಮೊಹಮ್ಮದ್ ಫರ್ಹಾನ್ ಅವರು ತಮ್ಮ ಮನಸ್ಸು ಬದಲಿಗೆ ತಾವೇ ಖುದ್ದಾಗಿ ಬಂದು ಕ್ಷಮಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.