ಅಲಿ ಖಮೇನಿ ಸಾವಿಗೆ ಸೇಡು, ಇರಾನ್ನ ನೂತನ ಸರ್ವಾಧಿಕಾರಿಗೆ ಜನರ ಆಗ್ರಹ | Operation Roaring Lion
ಇಸ್ರೇಲ್ ಸೇನೆ ಪಕ್ಕಾ ಪ್ಲಾನ್ ಮಾಡಿ ನಡೆಸಿದ ಭೀಕರ ದಾಳಿಯಲ್ಲಿ ಇರಾನ್ ಸರ್ವಾಧಿಕಾರಿ ಖಮೇನಿ ಕಥೆ ಮುಗಿದು ಹೋಗಿದೆ. ಗುಟ್ಟಾದ ಸ್ಥಳದಲ್ಲಿ ಇದ್ದರೂ ಅಲಿ ಖಮೇನಿ ಮಾತ್ರ ಜೀವ ಉಳಿಸಿಕೊಳ್ಳಲು ಆಗಿಲ್ಲ, ಹಲವು ತಿಂಗಳಿಂದ ಪಕ್ಕಾ ಪ್ಲಾನ್ ಮಾಡಿದ್ದ ಇಸ್ರೇಲ್ ಸೇನೆ ದಿಢೀರ್ ನುಗ್ಗಿ ದಾಳಿ ನಡೆಸಿದೆ. ಪರಿಣಾಮ ಸುಮಾರು 3 ದಶಕ ಎಂದರೆ 30 ವರ್ಷಗಳಿಂದ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳ ಪಾಲಿಗೆ ವಿಲನ್ ಆಗಿದ್ದ ಅಲಿ ಖಮೇನಿ ಕಥೆ ಮುಗಿದು ಹೋಗಿದೆ. ಆದರೆ ಇದೇ ಸಮಯದಲ್ಲಿ ಇರಾನ್ ನೆಲದಲ್ಲಿ ಜನರಿಂದ ಆಕ್ರೋಶ ಕೂಡ ಸ್ಫೋಟವಾಗಿದ್ದು, ಸೇಡಿಗೆ ಸೇಡು ಎಂದು ತೊಡೆ ತಟ್ಟಿದ್ದಾರೆ ಇರಾನ್ ಜನ.
ಖಮೇನಿ ಇರಾನ್ ಸರ್ವಾಧಿಕಾರಿಯಾಗಿ, ಎಲ್ಲಾ ಹಿಡಿತವನ್ನೂ ತನ್ನ ಬಳಿಯೇ ಇಟ್ಟುಕೊಂಡಿದ್ದ ವ್ಯಕ್ತಿ. 1939ರಲ್ಲಿ ಇರಾನ್ನ ಮಶ್ಹದ್ ನಗರದಲ್ಲಿ ಜನಿಸಿದ ಖಮೇನಿ, ಸ್ಥಳೀಯ ಧಾರ್ಮಿಕ ನಾಯಕ ಜವಾದ್ ಖಮೇನಿಯ 2ನೇ ಪುತ್ರ. ಹೀಗಿದ್ಧಾಗ 1989ರ ನಂತರ ಇರಾನ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ಇದೇ ಖಮೇನಿ, ಮುಂದೆ ನೋಡ ನೋಡುತ್ತಲೇ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳನ್ನು ಎದುರು ಹಾಕಿಕೊಂಡು ಶತ್ರು ಪಡೆಯನ್ನೇ ಹುಟ್ಟು ಹಾಕಿದ್ದು ಘರ್ಷಣೆಗೆ ಕಾರಣ ಆಗಿತ್ತು. ಅಮೆರಿಕ ಕೂಡ ಈ ವಿಚಾರದಲ್ಲಿ ಪದೇ ಪದೇ ಪ್ರಯತ್ನ ಮಾಡುತ್ತಾ, ಖಮೇನಿ ಹತ್ಯೆಗೆ ಯತ್ನಿಸಿತ್ತು. ಆದರೆ ಈ ವಿಚಾರದಲ್ಲಿ ಈಗ ಇಸ್ರೇಲ್ ಯಶಸ್ಸು ಕಂಡಿದೆ.

ಖಮೇನಿ ಸಾವಿಗೆ ಸೇಡು ಗ್ಯಾರಂಟಿ?
ಇರಾನ್ ಇದೀಗ ನಡೆಸುತ್ತಿರುವ ದಾಳಿ ಬಗ್ಗೆ ಅಲ್ಲಿನ ಪ್ರಜೆಗಳಿಗೆ ತೃಪ್ತಿ ಇಲ್ಲ, ಬದಲಾಗಿ ಇನ್ನೂ ದೊಡ್ಡ ಮಟ್ಟದಲ್ಲಿ ದಾಳಿ ಮಾಡಿ ಹಾಗೂ ಸೇಡಿ ಸೇಡು ತೀರಿಸಿಕೊಳ್ಳಿ ಎಂದು ಇರಾನ್ನಲ್ಲಿ ಒಂದು ಬಣವು ಆಗ್ರಹ ಮಾಡುತ್ತಿದೆ. ಇದೇ ಸಮಯದಲ್ಲಿ ಅದೇ ಇರಾನ್ ದೇಶದ ಮತ್ತಷ್ಟು ಪ್ರಜೆಗಳು ಖಮೇನಿ ಸಾವು ಆಗಿದ್ದು ಆಯ್ತು, ಇನ್ನಾದರೂ ಶಾಂತಿ ನೆಲೆಸಲಿ ಎಂದು ಆಗ್ರಹ ಮಾಡುತ್ತಿದ್ದಾರೆ. ಹೀಗಾಗಿ ಇರಾನ್ ನೆಲದಲ್ಲೇ ಗೊಂದಲ ಮೂಡಿದ್ದು, ಆಂತರಿಕ ಪ್ರತಿಭಟನೆ ಭೀತಿ ಕೂಡ ಇದೀಗ ಆವರಿಸಿದೆ. ಇರಾನ್ ಸೇನೆ ಇದೀಗ ಕುವೈತ್, ಯುಎಇ, ಕತಾರ್ ಸೇರಿದಂತೆ ಹಲವು ದೇಶಗಳ ಮೇಲೆ ದಾಳಿ ನಡೆಸುತ್ತಿದ್ದು, ಈಗಾಗಲೇ ಅಪಾರ ಪ್ರಮಾಣದ ಹಾನಿ ಆಗಿರುವ ಬಗ್ಗೆ ವರದಿಯಾಗಿದೆ.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications