New Orleans: ಹೊಸ ವರ್ಷದ ದಿನವೇ 15 ಜನರ ಭೀಕರ ಕೊಲೆ, ಎಲ್ಲಿ? ಯಾವಾಗ?
ಹೊಸ ವರ್ಷದ ಸಂಭ್ರಮದಲ್ಲಿ ಇಡೀ ಜಗತ್ತು ಮೈಮರೆತು ಹೋಗಿತ್ತು, ಎಲ್ಲರೂ ಫುಲ್ ಪಾರ್ಟಿ ಮಾಡುತ್ತಾ ತಮ್ಮ ತಮ್ಮ ನೋವುಗಳನ್ನ ಮರೆತು ಎಂಜಾಯ್ ಮಾಡ್ತಾ ಇದ್ದರು. ಆದರೆ ಈ ಸಮಯದಲ್ಲೇ ಘೋರ ದುರಂತ ಒಂದು ನಡೆದು ಹೋಗಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಟ್ರಕ್ ನುಗ್ಗಿಸಿ 15 ಜನರ ಹತ್ಯೆ ಮಾಡಿದ ವ್ಯಕ್ತಿ ಯಾರು ಗೊತ್ತಾ? ಘಟನೆ ನಡೆದಿದ್ದು ಎಲ್ಲಿ?
ಅಮೆರಿಕದಲ್ಲಿ ಪದೇ ಪದೇ ಹಿಂಸಾಚಾರಗಳು ನಡೆಯುತ್ತಿದ್ದು, ಇದೀಗ ಮತ್ತೊಂದು ಘೋರ ದುರಂತ ನಡೆದು ಹೋಗಿದೆ. ಅದ್ರಲ್ಲೂ, ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಟ್ರಕ್ ನುಗ್ಗಿಸಿ 15 ಜನರ ಹತ್ಯೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಅಮೆರಿಕದ ನ್ಯೂ ಓರ್ಲಿಯನ್ಸ್ ನಗರದಲ್ಲಿ ಈ ಭೀಕರ ಘಟನೆ ನಡೆದು ಹೋಗಿದೆ. ಇಡೀ ಜಗತ್ತೇ ಈ ಘಟನೆಯನ್ನು ಕಂಡು ಈಗ ಬೆಚ್ಚಿಬಿದ್ದಿದೆ.

ಭೀಕರ ಕೊಲೆ ಮಾಡಿದ್ದು ಯಾರು?
ನ್ಯೂ ಇಯರ್ ಅಂತಾ ಸಿಕ್ಕಾಪಟ್ಟೆ ಸಂಭ್ರಮ ತೋರಿಸುತ್ತಾ ಎಂಜಾಯ್ ಮಾಡುತ್ತಿದ್ದ ಜನರ ಗುಂಪಿನ ಮೇಲೆ ವಿಕೃತನೊಬ್ಬ ಟ್ರಕ್ ಹತ್ತಿಸಿ ಈ ರೀತಿ 15 ಜನರ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಮತ್ತೊಂದು ಕಡೆ, ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗಾದ್ರೆ ಈ ಘಟನೆಯ ಹಿಂದೆ ಯಾರ ಕೈವಾಡ ಇದೆ? ಕೊಲೆಯನ್ನ ಮಾಡಿದ್ದು ಯಾರು? ಎಂಬ ಪ್ರಶ್ನೆ ಮೂಡಿದೆ. ಅಮೆರಿಕದ ಎಫ್ಬಿಐ ಅಧಿಕಾರಿಗಳು ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.
20ಕ್ಕೂ ಹೆಚ್ಚು ಜನರು ಗಂಭೀರ
ಹ್ಯಾಪಿ ನ್ಯೂ ಇಯರ್ ಅಂತಾ ಸಂಭ್ರಮದಲ್ಲಿ ಮುಳುಗಿದ್ದ ಜನರ ಮೇಲೆ ಸೈಬರ್ ಟ್ರಕ್ ಹತ್ತಿಸಿ ಅನಾಮಿಕ ವ್ಯಕ್ತಿ ಸುಮಾರು 15 ಜನರ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಮತ್ತೊಂದು ಕಡೆ 20ಕ್ಕೂ ಹೆಚ್ಚು ಜನ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ನರಳುತ್ತಿದ್ದಾರೆ. ಈ ನಡುವೆ ಹಲವು ಅನುಮಾನಗಳು ಮೂಡಿರುವ ಹಿನ್ನೆಲೆ ಅಮೆರಿಕದ ಅಧಿಕಾರಿಗಳು ಈಗ ಘಟನೆ ನಡೆದಿರುವ ಪ್ರದೇಶ ಸುತ್ತುವರಿದಿದ್ದಾರೆ.
ಐಎಸ್ಐಎಸ್ ಉಗ್ರರ ಕೃತ್ಯ?
ಕೃತ್ಯ ಎಸಗಿರುವ ಟೆಕ್ಸಾಸ್ ಮೂಲದ 42 ವರ್ಷದ ವ್ಯಕ್ತಿಗೆ ಇಸ್ಲಾಮಿಕ್ ಸ್ಟೆಟ್ ಉಗ್ರ ಸಂಘಟನೆಯ ಜೊತೆಗೆ ನಂಟು ಇರುವ ಅನುಮಾನ ಮೂಡಿದೆ. ಶಂಕಿತನನ್ನ ಶಮ್ಯುದ್-ದಿನ್ ಬಹರ್ ಜಬ್ಬರ್ ಎಂದು ಗುರುತಿಸಲಾಗಿದೆ. ಮತ್ತೊಂದು ಕಡೆ ಈ ರೀತಿ ಜನರ ಮೇಲೆ ಸೈಬರ್ ಟ್ರಕ್ ಹರಿಸಿದ ಬೆನ್ನಲ್ಲೇ ಪೊಲೀಸರು ಕೂಡ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಆರೋಪಿ ಈಗ ಹತನಾಗಿದ್ದಾನೆ ಎನ್ನಲಾಗಿದೆ. ಟ್ರಕ್ನಲ್ಲಿ ಐಎಸ್ಐಎಸ್ ಸಂಘಟನೆಗೆ ಸೇರಿದ ಧ್ವಜ & ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳು ಕೂಡ ಪತ್ತೆ ಆಗಿದ್ದು, ಹೆಚ್ಚಿನ ತನಿಖೆಯು ಇದೀಗ ನಡೆಯುತ್ತಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications