ನೇಪಾಳದಲ್ಲಿ ಯೇತಿ ಏರ್ಲೈನ್ಸ್ ಪತನಗೊಂಡು 72 ಸಾವುಗಳಾಗಲು ಇಂಜಿನ್ ಸಮಸ್ಯೆ ಕಾರಣ: ವರದಿ
ಐವರು ಭಾರತೀಯರು ಸೇರಿದಂತೆ 72 ಮಂದಿಯನ್ನು ಬಲಿ ಪಡೆದ ನೇಪಾಳದಲ್ಲಿ ಯೇತಿ ಏರ್ಲೈನ್ಸ್ ಪತನಕ್ಕೆ ಕಾರಣವೇನು ಗೊತ್ತೆ...ಮುಂದೆ ಓದಿ.
ಕಠ್ಮಂಡು, ಫೆಬ್ರವರಿ 6: ಕಳೆದ ತಿಂಗಳು ನೇಪಾಳದಲ್ಲಿ ಯೇತಿ ಏರ್ಲೈನ್ಸ್ ವಿಮಾನ ಪತನಗೊಂಡು 72 ಮಂದಿ ಮೃತಪಟ್ಟಿದ್ದರು. ಈಗ ಪ್ರಕರಣದ ವರದಿ ಬಹಿರಂಗವಾಗಿದ್ದು, ಇಷ್ಟೊಂದು ಮಂದಿ ಮೃತಪಡಲು ವಿಮಾನದ ಇಂಜಿನ್ ಸಮಸ್ಯೆ ಕಾರಣ ಎನ್ನಲಾಗಿದೆ.
ವಿಮಾನದ ಅಂತಿಮ ಹಂತದಲ್ಲಿ ಅದರ ಎಂಜಿನ್ಗಳಲ್ಲಿ ಯಾವುದೇ ಥ್ರಸ್ಟ್ ಮೋಷನ್ ಇರಲಿಲ್ಲ ಎಂದು ಅಪಘಾತದ ತನಿಖೆಗಾಗಿ ಸರ್ಕಾರ ನೇಮಿಸಿದ ಸಮಿತಿ ಸೋಮವಾರ ತಿಳಿಸಿದೆ.
30 ವರ್ಷಗಳಲ್ಲಿಯೇ ನೇಪಾಳ ಕಂಡ ಅತ್ಯಂತ ಭೀಕರ ವಿಮಾನ ಅಪಘಾತಗಳಲ್ಲಿ ಒಂದಾದ ಯೇತಿ ಏರ್ಲೈನ್ಸ್ ಪತನ, ಜನವರಿ 15 ರಂದು ಪ್ರವಾಸಿ ನಗರವಾದ ಪೋಖ್ರಾದಲ್ಲಿ ಇಳಿಯುವ ಮೊದಲು ಪತನಗೊಂಡಿತು. ವಿಮಾನದಲ್ಲಿದ್ದ ಎಲ್ಲಾ 72 ಪ್ರಯಾಣಿಕರು ಬಲಿಯಾಗಿದ್ದರು.

ನೇಪಾಳದ ಯೇತಿ ಏರ್ಲೈನ್ಸ್ ನಿರ್ವಹಿಸುತ್ತಿದ್ದ ಅವಳಿ ಎಂಜಿನ್ ಎಟಿಆರ್ 72 ವಿಮಾನದಲ್ಲಿ ಇಬ್ಬರು ಮಕ್ಕಳು, ನಾಲ್ವರು ಸಿಬ್ಬಂದಿ ಮತ್ತು 10 ವಿದೇಶಿ ಪ್ರಜೆಗಳು ಸೇರಿದಂತೆ 72 ಪ್ರಯಾಣಿಕರಿದ್ದರು. ಇದರಲ್ಲಿ ಐದು ಮಂದಿ ಭಾರತೀಯರಾಗಿದ್ದರು.
ಒಟ್ಟು 53 ನೇಪಾಳಿಗಳು, 5 ಮಂದಿ ಭಾರತೀಯರು, 4 ಮಂದಿ ರಷ್ಯನ್ನರು, ಒಬ್ಬ ಐರಿಶ್, ಇಬ್ಬರು ಕೊರಿಯನ್ನರು, ಒರ್ವ ಅರ್ಜೆಂಟೀನಾದ ಪ್ರಜೆ ಮತ್ತು ಒಬ್ಬ ಫ್ರೆಂಚ್ ಪ್ರಜೆ ವಿಮಾನದಲ್ಲಿದ್ದರು ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿತ್ತು.
ಈ ಯೇತಿ ಏರ್ಲೈನ್ಸ್ ATR-72 ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್ಪಿಟ್ ಧ್ವನಿ ರೆಕಾರ್ಡರ್ ಅನ್ನು ತನಿಖಾ ಸಮಿತಿಯು ಪತ್ತೆಹಚ್ಚಿದೆ. ಇದರಲ್ಲಿ ಎಂಜಿನ್ನಲ್ಲಿ ಸಮಸ್ಯೆ ಇತ್ತು ಎಂಬುದು ಬಹಿರಂಗವಾಗಿದೆ.

ಪೋಖ್ರಾದಲ್ಲಿ ಇಳಿಯಬೇಕಿದ್ದ ವಿಮಾನ ಕೆಲವೇ ನಿಮಿಷಗಳಲ್ಲಿ ಸ್ಫೋಟವಾಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ ಎಂದು ನೇಪಾಳ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದರು.
ಘಟನೆಯ ಬಗ್ಗೆ ತನಿಖೆ ನಡೆಸಲು ಸರ್ಕಾರ ಐವರು ಸದಸ್ಯರ ತನಿಖಾ ಆಯೋಗವನ್ನು ರಚಿಸಿತ್ತು. ಯೇತಿ ಏರ್ಲೈನ್ಸ್ ವಿಮಾನದ ಬ್ಲಾಕ್ ಬಾಕ್ಸ್ಅನ್ನು (ವಿಮಾನ ಡೇಟಾ ರೆಕಾರ್ಡರ್) ನೇಪಾಳ ಸೇನೆಯು ನಾಗರಿಕ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳಿಗೆ ಹಸ್ತಾಂತರಿಸಿತ್ತು. ಇದರಿಂದಲೇ ಇಂಜಿನ್ ಸಮಸ್ಯೆ ಬಗ್ಗೆ ಮಾಹಿತಿ ದೊರೆತಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications