8 ಗ್ರಹಗಳಿರುವ ಮತ್ತೊಂದು ಸೌರ ವ್ಯೂಹ ಪತ್ತೆ ಹಚ್ಚಿದ ನಾಸಾ
ಲಂಡನ್, ಡಿಸೆಂಬರ್ 15: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ರೋಚಕ ಸುದ್ದಿಯೊಂದನ್ನು ಹೊರ ಹಾಕಿದೆ. ಸತತ ಸಂಶೋಧನೆಗಳ ನಂತರ ಇದೇ ಮೊದಲ ಬಾರಿಗೆ 8 ಗ್ರಹಗಳಿರುವ ನಮ್ಮದೇ ಸೌರ ವ್ಯೂಹದ ಮಾದರಿಯ ಹೊಸ ಸೌರ ಮಂಡಲವನ್ನು ಪತ್ತೆ ಹಚ್ಚಿದೆ.
ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ ಸಹಾಯದಿಂದ ಈ ಮಹತ್ವದ ಅನ್ವೇಷಣೆ ನಡೆಸಲಾಗಿದೆ. ಈ ಸೌರ ಮಂಡಲದಲ್ಲಿ ನಮ್ಮ ಸೌರ ವ್ಯೂಹದಂತೆಯೇ ಒಂದು ಸೂರ್ಯ ಮತ್ತು ಅದರ ಸುತ್ತ ಸುತ್ತುವ 8 ಗ್ರಹಗಳಿವೆ. ಜತೆಗೆ ಗ್ರಹಗಳ ಸುತ್ತ ಸುತ್ತುತ್ತಿರುವ ಹಲವು ಉಪಗ್ರಹಗಳಿವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಈ ಸಂಶೋಧನೆಗೆ ಗೂಗಲ್ ನ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಟೆಕ್ನಾಲಜಿಯ ಸಹಾಯವನ್ನು ಪಡೆಯಲಾಗಿದೆ. ಇದೀಗ ಕೆಪ್ಲರ್ ಟೆಲಿಸ್ಕೋಪ್ ನೀಡಿದ ಮಾಹಿತಿಗಳನ್ನು ವಿಶ್ಲೇಷಿಸುತ್ತಿದ್ದೇವೆ ಎಂದು ನಾಸಾದ ವಿಜ್ಞಾನಿಗಳು ಹೇಳಿದ್ದಾರೆ.
ಕೆಪ್ಲರ್ 90i ಈ ಸೌರ ವ್ಯೂಹದಲ್ಲಿರುವ ಅತೀ ಸಣ್ಣ ಗ್ರಹವಾಗಿದ್ದು ಭೂಮಿಗಿಂತ ಶೇ. 30 ರಷ್ಟು ಹೆಚ್ಚಿನ ಗಾತ್ರವನ್ನು ಹೊಂದಿದೆ. ಆದರೆ ಈ ಗ್ರಹಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಕೆಪ್ಲರ್ ಸ್ಪೇಸ್ ಟೆಲಿಸ್ಕೋಪನ್ನು 2009ರಲ್ಲಿ ಸ್ಥಾಪಿಸಲಾಗಿದ್ದು ನಮ್ಮ ಸೌರ ವ್ಯೂಹದ ಹೊರಗಿನ ಗ್ರಹಗಳ ಬಗ್ಗೆ ನಿರಂತರ ಮಾಹಿತಿಗಳನ್ನು ರವಾನಿಸುತ್ತಿದೆ. ಇಲ್ಲಿಯವರೆಗೆ ಇದು 4,034 ಗ್ರಹಗಳನ್ನು ಪತ್ತೆ ಹಚ್ಚಿದೆ. ಇವುಗಳಲ್ಲಿ 30 ಗ್ರಹಗಳು ಭೂಮಿಯ ಗಾತ್ರದವೇ ಆಗಿದ್ದು ಇವುಗಳು ಸೂರ್ಯನಿಂದ ಹ್ಯಾಬಿಟೇಬಲ್ ಝೋನ್ ಅಂತರದಲ್ಲಿವೆ. ಹ್ಯಾಬಿಟೇಬಲ್ ಝೋನ್ ನಲ್ಲಿ ಗ್ರಹಗಳಲ್ಲಿನ ವಾತಾವರಣವು ಸಾಮಾನ್ಯವಾಗಿ ನೀರಿನಂಥ ದ್ರವ ಪದಾರ್ಥಗಳು ಸೃಷ್ಟಿಗೆ ಪೂರಕವಾಗಿರುತ್ತದೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications