ಮ್ಯಾನ್ಮಾರ್: ಸೂಕಿ ಆಪ್ತೆ ಸೇರಿ 5,744 ಯುದ್ಧ ಕೈದಿಗಳ ಬಿಡುಗಡೆ
ನವದೆಹಲಿ, ನವೆಂಬರ್ 17: ಮ್ಯಾನ್ಮಾರ್ ಜುಂಟಾ ಎಂದೂ ಕರೆಯಲ್ಪಡುವ ಮ್ಯಾನ್ಮಾರ್ ಸೇನೆಯು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ. ದೇಶದ ರಾಷ್ಟ್ರೀಯ ವಿಜಯ ದಿನದ ಸಂದರ್ಭದಲ್ಲಿ ಮ್ಯಾನ್ಮಾರ್ ಜುಂಟಾ ಕೈದಿಗಳ ಕ್ಷಮಾದಾನವನ್ನು ಘೋಷಿಸಿದೆ. 1 ಫೆಬ್ರವರಿ 2021ರಂದು ಸರ್ಕಾರದ ದಂಗೆಯಿಂದ ಮ್ಯಾನ್ಮಾರ್ನಲ್ಲಿ ಸೇನಾ ಆಡಳಿತ ಜಾರಿಯಲ್ಲಿದೆ. ಅಂದಿನಿಂದ ಅನೇಕ ಜನರು ಜೈಲು ಪಾಲಾಗಿದ್ದಾರೆ. ಆದರೆ, ಈಗ ಮ್ಯಾನ್ಮಾರ್ನ ರಾಷ್ಟ್ರೀಯ ವಿಜಯ ದಿನವನ್ನು ಗುರುತಿಸಲು ಸೇನೆಯು ಈ ದಿನದಂದು ಸುಮಾರು 6,000 ಕೈದಿಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದೆ.
ಮ್ಯಾನ್ಮಾರ್ ಸೇನೆಯು ಒಟ್ಟು 5,744 ಕೈದಿಗಳನ್ನು ಬಿಡುಗಡೆ ಮಾಡಲಿದೆ. ಈ ಕೈದಿಗಳಲ್ಲಿ ಮಾಜಿ ಯುಕೆ ರಾಯಭಾರಿ ವಿಕ್ಕಿ ಬೌಮನ್, ಆಸ್ಟ್ರೇಲಿಯಾದ ಆರ್ಥಿಕ ಸಲಹೆಗಾರ ಸೀನ್ ಟರ್ನೆಲ್ ಮತ್ತು ಜಪಾನಿನ ಪತ್ರಕರ್ತ ಟೊರು ಕುಬೊಟಾ ಕೂಡ ಸೇರಿದ್ದಾರೆ. ಈ ಕೈದಿಗಳಲ್ಲಿ 600-700 ಮಹಿಳೆಯರಿದ್ದಾರೆ. ಇನ್ನು ಈ ಮೂವರನ್ನೂ ಅವರ ದೇಶಕ್ಕೆ ವಾಪಸ್ ಕಳುಹಿಸಲಾಗುವುದು. ಆದರೆ, ಸೇನಾ ವಕ್ತಾರರು ಅದರ ಬಿಡುಗಡೆಯ ನಿಖರ ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ. ಇದರೊಂದಿಗೆ ಜೈಲು ಪಾಲಾದ ಹಿಂದಿನ ಸರ್ಕಾರದ ಅಧಿಕಾರಿಗಳನ್ನೂ ಬಿಡುಗಡೆ ಮಾಡಲಾಗುವುದು ಎಂದು ಸೈನ್ಯ ಅಧಿಕಾರಿಗಳು ಹೇಳಿದ್ದಾರೆ.
ಆಂಗ್ ಸಾನ್ ಸೂಕಿ ಅವರ ಉಚ್ಚಾಟಿತ ಸರ್ಕಾರದ ಮಾಜಿ ಬ್ರಿಟಿಷ್ ರಾಯಭಾರಿ, ಜಪಾನಿನ ಪತ್ರಕರ್ತ ಮತ್ತು ಆಸ್ಟ್ರೇಲಿಯಾದ ಸಲಹೆಗಾರ ಸೇರಿದಂತೆ 700 ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಮ್ಯಾನ್ಮಾರ್ನ ಜುಂಟಾ ಗುರುವಾರ ಹೇಳಿದೆ.

ಮಾಜಿ ಬ್ರಿಟಿಷ್ ರಾಯಭಾರಿ ವಿಕ್ಕಿ ಬೌಮನ್, ಆಸ್ಟ್ರೇಲಿಯಾದ ಅರ್ಥಶಾಸ್ತ್ರ ಸಲಹೆಗಾರ ಸೀನ್ ಟರ್ನೆಲ್ ಮತ್ತು ಜಪಾನಿನ ಪತ್ರಕರ್ತ ಟೊರು ಕುಬೋಟಾ ಅವರನ್ನು "ರಾಷ್ಟ್ರೀಯ ದಿನವನ್ನು ಗುರುತಿಸಲು ಬಿಡುಗಡೆ ಮಾಡಲಾಗುತ್ತದೆ" ಎಂದು ಮ್ಯಾನ್ಮಾರ್ ಸೇನೆಯ ಹಿರಿಯ ಅಧಿಕಾರಿ ಅಂತಾರಾಷ್ಟ್ರೀಯ ಎಎಫ್ಪಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications