ವಿಡಿಯೋಗಳಲ್ಲಿ ನೋಡಿ ಇಂಡೋನೇಷಿಯಾ ಭೂಕಂಪದ ಭೀಕರತೆ
ಇಂಡೋನೇಶಿಯಾ, ಆಗಸ್ಟ್ 07: ಭಾನುವಾರ ರಾತ್ರಿ ಇಂಡೋನೇಷ್ಯಾದಲ್ಲಿ ಸಂಭವಿಸಿದ ಭಾರಿ ಭೂಕಂಪ ನೂರಕ್ಕೂ ಹೆಚ್ಚು ಜನರ ಪ್ರಾಣ ತೆಗೆದಿದ್ದು, ಹಲವರು ಇನ್ನೂ ಕಣ್ಮರೆಯಾಗಿದ್ದಾರೆ.
ಭೂಕಂಪದ ತೀವ್ರತೆ 7.1 ರಿಕ್ಟರ್ ತೀವ್ರೆತೆಯ ಈ ವಿನಾಶಕಾರಿ ಭೂಕಂಪ ಕೋಟ್ಯಂತರ ರೂಪಾಯಿ ಹಾನಿಯನ್ನೂ ಮಾಡಿದೆ. ಬಾಲಿ ದ್ವೀಪವು ಭೂಕಂಪದ ಕೇಂದ್ರವೆಂದು ಗುರುತಿಸಲಾಗಿದ್ದು, ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿದೆ.
ಭೂಕಂಪದ ತೀವ್ರತೆಯನ್ನು ರಿಕ್ಟರ್ಗಳಲ್ಲಿ ಹೇಳಿದರೆ ಸಾಮಾನ್ಯರಿಗೆ ಅರ್ಥವಾಗುವುದು ಕಷ್ಟ ಅದೇ ಚಿತ್ರಗಳಲ್ಲಿ, ವಿಡಿಯೋಗಳಲ್ಲಿ ನೋಡಿದರೆಯೇ ಎಂತಹಾ ವಿನಾಶಕಾರಿ ಭೂಕಂಪ ಅದಾಗಿತ್ತು ಎಂಬುದು ಗೊತ್ತಾಗುವುದು.
ನಿನ್ನೆ ಇಂಡೋನೇಷಿಯಾದಲ್ಲಿ ನಡೆದ ಭೂಕಂಪದ ಕೆಲವು ವಿಡಿಯೋಗಳು ದೊರೆತಿದ್ದು, ವಿಡಿಯೋ ನೋಡಿದರೆ ಗೊತ್ತಾಗುತ್ತದೆ ಅದರ ತೀವ್ರತೆ ಎಷ್ಟಿತ್ತು ಎಂದು.
|
ಭೂಮಿಯೇ ಗಡ-ಗಡ
ಪ್ರಾರ್ಥನೆಗಾಗಿ ಸಾಲುಗಟ್ಟಿ ನಿಂತಿದ್ದ ಜನ ಭೂಮಿ ನಡುಗುತ್ತಲೇ ಅಲ್ಲಿಂದ ಓಡಿ ಹೊರಗೆ ಹೋಗುತ್ತಾರೆ, ಅರೆ ಸೆಕೆಂಡ್ ತಡ ಮಾಡಿದ್ದರೂ ಅವರ ಮೇಲೆ ಗೋಡೆಯೇ ಕುಸಿಯುತ್ತಿತ್ತು. ವಿಡಿಯೋ ನೋಡಿ ನೀವು ಅಲ್ಲಿದ್ದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು ಕಲ್ಪಿಸಿಕೊಳ್ಳಿ...
|
ತುಂಬಿದ ಆಸ್ಪತ್ರೆಗಳು
ಇಂಡೋನೇಷಿಯಾ ಭೂಕಂಪದ ನಂತರ ತುಂಬಿ ತುಳುಕುತ್ತಿರುವ ಆಸ್ಪತ್ರೆಗಳನ್ನು ನೋಡಿ. ಭೂಕಂಪದ ಸಮಯದಲ್ಲಿ ಜನರಲ್ಲಿ ಇರುವ ಆತಂಕವನ್ನು ನೋಡಿ...
|
ಪ್ರಾರ್ಥನೆ ಬಿಡದ ಜನ
ಭೂಕಂಪನ ಆಗುತ್ತಿದ್ದರೂ ಪ್ರಾರ್ಥನೆಯನ್ನು ನಿಲ್ಲಿಸದ ಇವರ ಭಕ್ತಿಯನ್ನು ಮೆಚ್ಚಲೇ ಬೇಕು. ತಾನು ನಿಂತ ನೆಲ ನಡುಗುತ್ತಿದ್ದರು, ಮೇಲಿನ ಛಾವಣಿ ಯಾವಾಗ ಬೇಕಾದರೂ ತನ್ನ ಮೇಲೆ ಬೀಳಬಹುದು ಎಂದು ಗೊತ್ತಿದ್ದರೂ ಇವರು ಪ್ರಾರ್ಥನೆಯನ್ನು ನಿಲ್ಲಿಸಲಿಲ್ಲ.
|
ಭಯಾನಕ ಚಿತ್ರಣ
ಭೂಕಂಪದಿಂದ ಆಗಿರುವ ಹಾನಿ, ಗಾಯಾಳುಗಳು, ಸೂರು ಕಳೆದುಕೊಂಡವರ ನೋವುಗಳನ್ನು ತೋರಿಸುವ ಈ ವಿಡಿಯೋ ಮನಕಲಕುತ್ತದೆ.

ಸೂರು ಕಳೆದುಕೊಂಡವರು
ಕೆಲ ಹೊತ್ತಿನ ಮುಂಚೆ ಇವರೆಲ್ಲಾ ನೆಮ್ಮದಿಯಾಗಿ ಮನೆಯಲ್ಲಿದ್ದರು ಆದರೆ ಪ್ರಕೃತಿಯ ಒಂದು ಸಣ್ಣ ವರ್ತನೆ ಇವರನ್ನೆಲ್ಲಾ ಸೂರಿಲ್ಲದವರನ್ನಾಗಿಸಿತು. ಸಾವಿರಾರು ಜನ ಭೂಕಂಪದಿಂದಾಗಿ ಮನೆಗಳನ್ನು ಕಳೆದುಕೊಂಡಿದ್ದಾರೆ.

ಅವಶೇಷಗಳ ಅಡಿ
ಇಂಡೋನೇಷ್ಯಾದಲ್ಲಿ ಈಗ ಎಲ್ಲಿ ನೋಡಿದರೂ ಧೂಳು. ಅವಶೇಷಗಳ ಅಡಿಗಳಲ್ಲಿ ಇನ್ನೂ ಉಸಿರಾಡುತ್ತಿರಬಹುದಾದ ಜೀವಗಳಿಗಾಗಿ ಅಗ್ನಿಶಾಮಕ ಸಿಬ್ಬಂದಿ, ವಿಪತ್ತು ರಕ್ಷಣೆ ಸಿಬ್ಬಂದಿ ಹುಡುಕಾಡುತ್ತಿದ್ದಾರೆ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications