ಜಪಾನಿನ ಈ ವ್ಯಕ್ತಿ ದಿನಕ್ಕೆ 30 ನಿಮಿಷವಷ್ಟೇ ನಿದ್ರಿಸುವುದಂತೆ!
ಜಪಾನಿನ ಈ ವ್ಯಕ್ತಿ ದಿನಕ್ಕೆ 30 ನಿಮಿಷವಷ್ಟೇ ಮಲಗುತ್ತಾರಂತೆ, ಹೌದು, ಆಶ್ಚರ್ಯವೆನಿಸಿದರೂ ಇದು ಸತ್ಯ.
ಡೈಸುಕೆ ಹೊರಿ 36 ವರ್ಷದ ವ್ಯಕ್ತಿ ಕಳೆದ 12 ವರ್ಷಗಳಿಂದ ದಿನಕ್ಕೆ ಅರ್ಧಗಂಟೆ ಮಾತ್ರ ನಿದ್ರಿಸುತ್ತಿದ್ದಾರೆ, ಆದರೆ ಇದುವರೆಗೆ ನಿದ್ದೆಗೆಡುವುದರಿಂದ ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬಂದಿಲ್ಲ ಎಂದು ಅವರು ಖುದ್ದಾಗಿ ಹೇಳಿಕೊಂಡಿದ್ದಾರೆ.
ಅವರು 8 ಗಂಟೆಯ ನಿದ್ದೆಯನ್ನು ಕಡಿಮೆ ಮಾಡುತ್ತಾ ಇದೀಗ ಅರ್ಧಗಂಟೆಗೆ ಬಂದು ನಿಂತಿದ್ದಾರೆ. ಅವರು ಕಡಿಮೆ ನಿದ್ದೆ ಮಾಡುವ ಸಂಘದ ಅಧ್ಯಕ್ಷರೂ ಕೂಡ ಆಗಿದ್ದಾರೆ. ಅವರು ತಮ್ಮ ನಿತ್ಯದ ಜೀವನಶೈಲಿಯಿಂದ ಬೇಸತ್ತಿದ್ದರು ಹೀಗಾಗಿ ಈ ನೂತನ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಅವರು ಜನರಿಗೆ ಕಡಿಮೆ ನಿದ್ರೆ ಮಾಡುವ ತಂತ್ರವನ್ನು ಕಲಿಸುತ್ತಾರೆ.

ತಾನು ದಿನದಲ್ಲಿ ಅಂದುಕೊಂಡಿರುವ ಕೆಲಸವನ್ನು ಪೂರ್ತಿ ಮಾಡಲು 16 ತಾಸುಗಳು ಸಾಕಾಗುವುದಿಲ್ಲ ಎಂದು ಭಾವಿಸಿ ನಿದ್ರೆಯ ವೇಳಾಪಟ್ಟಿಯನ್ನು 8 ತಾಸಿನಿಂದ 30 ನಿಮಿಷಗಳಿಗೆ ತಗ್ಗಿಸುವ ವಿಧಾನವನ್ನು ಪ್ರಯೋಗಿಸಲು ಆರಂಭಿಸಿದೆ ಎನ್ನುತ್ತಾರೆ.
ನಾನು ಆರೋಗ್ಯವಾಗಿದ್ದೇನೆ ಹಾಗೂ ಶಕ್ತಿಯುತವಾಗಿದ್ದೇನೆ ಎನ್ನುತ್ತಾರೆ ಹೊರಿ, ಮೂರು ದಿನಗಳ ಕಾಲ ಈ ಕುರಿತು ಮಾಹಿತಿ ಪಡೆಯಲು ಜಪಾನ್ನ ಮಾಧ್ಯಮಗಳು ಹೊರಿ ಹಿಂದೆ ಬಿದ್ದಿದ್ದವು.
ಅವರು ಬೆಳಗ್ಗೆ 8 ಗಂಟೆಗೆ ಜಿಮ್ಗೆ ತೆರಳಿದರು, ಬಳಿಕ ಓದಿದರು ಬರೆದರು, ಬೆಳಗಿನ ಜಾವ 2 ಗಂಟೆಗೆ ಮಲಗಿ ಯಾವುದೇ ಅಲಾರಂ ಇಲ್ಲದೆ ಕೇವಲ 26 ನಿಮಿಷಕ್ಕೆ ಎದ್ದರು.
ಎಚ್ಚರವಾದ ಬಳಿಕ ಜಿಮ್ಗೆ ತೆರಳುವ ಮುನ್ನ ಸ್ನೇಹಿತರೊಂದಿಗೆ ಮಾತುಕತೆ ನಡೆಸಿದರು.
ಅವರು ವಿಡಿಯೋ ಗೇಮ್ಗಳು, ಸರ್ಫಿಂಗ್, ಹಾಗೂ ಕಡಿಮೆ ನಿದ್ದೆ ಮಾಡುವ ಸ್ನೇಹಿತರ ಜತೆ ಸುತ್ತಾಟ ಮಾಡುವುದರಲ್ಲಿ ರಾತ್ರಿ ಕಳೆಯುತ್ತಾರೆ. ಒಂದೇ ಬಾರಿಗೆ ನಿದ್ರೆ ಕಡಿಮೆ ಮಾಡಿಲ್ಲ, ಹಲವು ವರ್ಷಗಳಿಂದ ಅಷ್ಟಷ್ಟಾಗಿ ನಿದ್ರೆ ಕಡಿಮೆ ಮಾಡಿದ್ದೇನೆ ಎಂದು ಹೊರಿ ಹೇಳಿದ್ದಾರೆ.
12 ವರ್ಷಗಳಿಂದ ದಿನಕ್ಕೆ ಕೇವಲ 30 ನಿಮಿಷಗಳ ಕಾಲ ಮಲಗುತ್ತಾರೆ ಎಂಬುದನ್ನು ಒಪ್ಪಿಕೊಳ್ಳುವುದು ಜನರಿಗೆ ಸ್ವಲ್ಪ ಕಷ್ಟ ಆದರೂ ಇದು ಸತ್ಯ. ಯಾವುದೇ ಅಭ್ಯಾಸವನ್ನು ರೂಢಿಸಿಕೊಂಡರೆ ಅದು ಸಾಧ್ಯ ಎನ್ನುತ್ತಾರೆ ವೈದ್ಯರು.
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications