ದಂಪತಿಯ 'ಅಮರ' ಪ್ರೀತಿ ಕೊಂದ ಕೊರೊನಾ: ಶಾಪವಿಟ್ಟ ನೆಟ್ಟಿಗರು
ದೆಹಲಿ, ಮಾರ್ಚ್ 17: ಕೊರೊನಾ ವೈರಸ್ ಹರಡುವಿಕೆಯಿಂದ ಅನೇಕರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಉಳಿದವರು ಪ್ರಾಣವನ್ನು ಉಳಿಸಿಕೊಳ್ಳಲು ಪ್ರೀತಿ, ಪ್ರೇಮ, ಸಂಬಂಧಗಳನ್ನೇ ಮುರಿದುಕೊಳ್ಳುತ್ತಿದ್ದಾರೆ. ಮನೆಯವರು ಸತ್ತರೂ ಅಂತ್ಯಕ್ರಿಯೆಗೆ ಆಗಮಿಸಲು ಸಾಧ್ಯವಾಗದೇ ವಿದೇಶದಲ್ಲಿ ಸಿಲುಕಿಕೊಂಡಿರುವವರ ಸುದ್ದಿ ಕಾಣಬಹುದು.
ಕೇರಳದ ತಿರುವನಂತಪುರಂನಲ್ಲಿ ತಂದೆಯ ಅಂತ್ಯಕ್ರಿಯೆಗೆ ಹೋಗಲಾರದೆ ಐಸೋಲೇಶನ್ ವಾರ್ಡ್ನಲ್ಲಿ ಕೂತು ವಿಡಿಯೋ ಕಾಲ್ ಮೂಲಕ ಅಂತಿಮ ಕ್ಷಣ ನೋಡಿದ ಮಗನ ಕರುಣಾಜನಕ ಕಥೆ ಕಣ್ಣ ಮುಂದಿದೆ. ಹೀಗೆ, ಕೊರೊನಾ ವೈರಸ್ ಸೋಂಕು ಹರುಡವಿಕೆಯಿಂದ ಅದೇಷ್ಟೋ ಪ್ರೀತಿ, ಸಂಬಂಧ ದೂರವಾಗಿದೆ.
ಇದೀಗ, ಇಂತಹದ್ದೇ ಮನಮುಟ್ಟುವ ಪ್ರೇಮಕಥೆಯೊಂದು ಕೆನಡಾದಲ್ಲಿ ವರದಿಯಾಗಿದೆ. ಹಿರಿಯ ವೃದ್ದನೊಬ್ಬ ತನ್ನ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಲು ಸಾಧ್ಯವಾಗದೇ ಒದ್ದಾಡಿದ ಪರಿ ಮನಕುಲುಕುತ್ತಿದೆ. ಏನಾಯ್ತು ಮುಂದೆ ಓದಿ...

ಪತ್ನಿಗಾಗಿ ಕಾದು ಕುಳಿತ ವ್ಯಕ್ತಿ
ಕೆನಡಾದ ವರ್ನನ್ ಮೂಲದ ಬಾಬ್ ಶೆಲ್ಲಾರ್ಡ್ ತಮ್ಮ 67ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಇತ್ತೀಚಿಗಷ್ಟೆ ಆಚರಿಸಿಕೊಂಡಿದ್ದಾರೆ. ಆದರೆ, ಈ ಸಂಭ್ರಮ ಅವರ ಪಾಲಿಗೆ ಖುಷಿಗಿಂತ ನೋವು ಹೆಚ್ಚು ಕೊಟ್ಟಿದೆ. ಹೌದು, ಕೊರೊನಾ ವೈರಸ್ ಭೀತಿಯಿಂದ ಪತ್ನಿಯನ್ನು ಭೇಟಿ ಮಾಡಲು ಕೂಡ ಸಾಧ್ಯವಾಗಲಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ್ದಾರೆ.

ನರ್ಸಿಂಗ್ ಹೋಮ್ ಬಳಿ ನಡೆದ ಘಟನೆ
ವಿವಾಹ ವಾರ್ಷಿಕೋತ್ಸವ ಪ್ರಯುಕ್ತ, ಪತ್ನಿಯನ್ನು ಭೇಟಿ ಮಾಡಿ, ವಿಶ್ ಮಾಡಲು ಆಕೆ ಆಕೆಯನ್ನು ಇರಿಸಲಾಗಿದ್ದ ನರ್ಸಿಂಗ್ ಹೋಮ್ ಬಳಿ ಬಾಬ್ ಶೆಲ್ಲಾರ್ಡ್ ಹೋಗಿದ್ದಾರೆ. ಆದರೆ, ಕೊರೊನಾ ಭೀತಿಯಲ್ಲಿ ನರ್ಸಿಂಗ್ ಹೋಮ್ ಸಿಬ್ಬಂಧಿ ಬಾಬ್ ಶೆಲ್ಲಾರ್ಡ್ ಪತ್ನಿಯನ್ನು ಹೊರಗೆ ಬಿಡಲಿಲ್ಲವಂತೆ. ಹಾಗಾಗಿ, ನರ್ಸಿಂಗ್ ಹೋಮ್ ಮುಂದೆಯೆ ಕುಳಿತು ವಿಶೇಷವಾಗಿ ಪ್ರೀತಿಯ ಸಂದೇಶ ರವಾನಿಸಿದ್ದಾರೆ.

ಐ ಲವ್ ಯೂ ಹೇಳಿದ ಬಾಬ್
ನರ್ಸಿಂಗ್ ಹೋಮ್ ಮುಂದೆ ಕುಳಿತುಕೊಂಡ ಬಾಬ್ ಶೆಲ್ಲಾರ್ಡ್ ''67 ವರ್ಷದಿಂದ ಪ್ರೀತಿಸುತ್ತಿದ್ದೇನೆ, ಈಗಲೂ ಪ್ರೀತಿಸುತ್ತೇನೆ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು (I've loved you 67 years and still do. Happy Anniversary) ಎಂದು ಬರೆದು ಪತ್ನಿಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಅಲ್ಲಿಂದಲೇ ಮುತ್ತಿಟ್ಟ ಪತ್ನಿ
ಪತ್ನಿ ನ್ಯಾನ್ಸಿ ತಂಗಿದ್ದ ಕೋಣೆಗೆ ಕಾಣಿಸುವಂತೆ ಫಲಕ ಹಿಡಿದಿದ್ದ ಬಾಬ್ ಶೆಲ್ಲಾರ್ಡ್ ಗೆ ಪತ್ನಿ ಪ್ರತಿಕ್ರಿಯಿಸಿದ್ದಾಳೆ. ಕಿಟಕಿಯಿಂದ ಪತ್ನಿಗೆ ಶುಭಾಶಯ ತಿಳಿಸಿದ ನ್ಯಾನ್ಸಿ, ಅಲ್ಲಿಂದಲೇ ಮುತ್ತು ನೀಡಿ ಭಾವುಕರಾಗಿದ್ದಾರೆ.

ಇದು ನನಗೆ ಕೆಟ್ಟ ಅನುಭವ
ಈ ವಿಚಾರವಾಗಿ ವೆಬ್ ಸೈಟ್ ವೊಂದಕ್ಕೆ ಪ್ರತಿಕ್ರಿಯಿಸಿರುವ ಬಾಬ್ ಶೆಲ್ಲಾರ್ಡ್ ''ಇದು ನನಗೆ ಕೆಟ್ಟ ಅನುಭವ. ಆಕೆ ನನ್ನ ಜೊತೆ ಇರಲು ಬಯಸುತ್ತೇನೆ. ಆದರೆ ಅದು ಸಾಧ್ಯವಾಗಲಿಲ್ಲ. ನನಗೆ ಬೇರೆ ಯಾರು ಬೇಡ. ನನ್ನನ್ನು ಬಿಟ್ಟು ಬೇರೆಯವರನ್ನೂ ಅವಳು ಊಹಿಸುವುದಿಲ್ಲ ಎಂದು ಬೇಸರ ಹಂಚಿಕೊಂಡಿದ್ದಾರೆ. ಇನ್ನು ಆ ದಂಪತಿಯ ಮಗಳು ಹೇಳಿರುವ ಪ್ರಕಾರ, ಇದೇ ಮೊದಲ ಸಲ ಇವರಿಬ್ಬರು ವಾರ್ಷಿಕೋತ್ಸವದ ದಿನ ದೂರವಿದ್ದಾರೆ ಎಂದಿದ್ದಾರೆ.

ಈ ದಂಪತಿ ದೂರ ಮಾಡಿದ ಕೊರೊನಾಗೆ ಶಾಪ
ಈ ದಂಪತಿಯ ಈ ವೇದನೆಯ ಕಥೆ ಕೇಳಿದ ನೆಟ್ಟಿಗರು ಭಾವುಕರಾಗಿದ್ದಾರೆ. ಇವರಿಬ್ಬರದ್ದು ಅಮರ ಪ್ರೇಮ, ಪರಿಶುದ್ಧ ಪ್ರೀತಿ, ಆದರೆ ಇಂತಹ ಪ್ರೀತಿ ದೂರ ಆಗುವುದಕ್ಕೆ ಕೊರೊನಾ ಕಾರಣ ಆಯ್ತು ಎಂದು ಶಾಪ ಹಾಕಿದ್ದಾರೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications