ಗೆಳತಿಯನ್ನು ಅಪಹರಿಸಿ ಮುಖದ ಮೇಲೆ ತನ್ನ ಹೆಸರನ್ನು ಹಚ್ಚೆ ಹಾಕಿದ
ಬ್ರೆಸಿಲಿಯಾ, ಜೂನ್ 6: ಗೆಳೆಯನೊಬ್ಬ ತನ್ನ ಮಾಜಿ ಗೆಳತಿಯನ್ನು ಅಪಹರಿಸಿ ಆಕೆಯ ಮುಖದ ಮೇಲೆ ತನ್ನ ಹೆಸರನ್ನು ಹಚ್ಚೆ ಹಾಕಿದ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ.
ಬ್ರೆಜಿಲ್ನ ಸಾವೊ ಪಾಲೊ ರಾಜ್ಯದ 18 ವರ್ಷದ ತಯಾನೆ ಕಾಲ್ಡಾಸ್ ಕಳೆದ ಶುಕ್ರವಾರ ಶಾಲೆಗೆ ಹೋಗುತ್ತಿದ್ದಾಗ, ಆಕೆಯ ಮಾಜಿ ಗೆಳೆಯ ಗೇಬ್ರಿಯಲ್ ಕೊಯೆಲ್ಹೋ ತನ್ನ ಕಾರಿನೊಳಗೆ ಅಪಹರಿಸಿದ್ದಾನೆ. ಆತ ತಾನು ಹೇಳಿದಂತೆ ಪಾಲಿಸದಿದ್ದರೆ ಆಕೆಯ ಮೇಲೆ ಹಲ್ಲೆ ನಡೆಸಲಾಗುವುದು ಹೆದರಿಸಿದ್ದಾನೆ. ಯುವತಿಯನ್ನು ವಾಹನದಲ್ಲಿ ಹತ್ತಿಸಿಕೊಂಡು ತೌಬಟೆ ಪುರಸಭೆಯಲ್ಲಿರುವ ತನ್ನ ಹಳೆಯ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ, 20 ವರ್ಷದ ಕೊಯೆಲ್ಹೋ ತನ್ನ ಪೂರ್ಣ ಹೆಸರನ್ನು ಹುಡುಗಿಯ ಮುಖದ ಬಲಭಾಗದಲ್ಲಿ ಅವಳ ಕಿವಿಯಿಂದ ಅವಳ ಗಲ್ಲದವರೆಗೆ ಹಚ್ಚೆ ಹಾಕಿದ್ದಾನೆ.
ಮರುದಿನ ತಯಾನೆ ಅವರ ತಾಯಿ ಸ್ಥಳೀಯ ಪೊಲೀಸರಿಗೆ ಮಗಳು ಕಾಣೆಯಾದ ವ್ಯಕ್ತಿಯ ವರದಿಯನ್ನು ಸಲ್ಲಿಸಿದ್ದಾರೆ. ದೂರಿನ ಬಳಿಕ ಪೊಲೀಸರು ಕೊಯೆಲ್ಹೋ ನಿವಾಸವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಅವರು ತನ್ನ ಮಗಳನ್ನು ಮನೆಗೆ ಕರೆದೊಯ್ದಿದಾಗ ಮಗಳ ಮುಖದಲ್ಲಿ ಹಚ್ಚೆ ಕಂಡು ಬೆಚ್ಚಿಬಿದ್ದಿದ್ದಾರೆ. ಬಳಿಕ ಕೊಯೆಲ್ಹೋ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಗೇಬ್ರಿಯಲ್ ಕೊಯೆಲ್ಹೋ ಅವರನ್ನು ಶನಿವಾರ ಬಂಧಿಸಿದ್ದಾರೆ. ಗೇಬ್ರಿಯಲ್ ಕೊಯೆಲ್ಹೋ ತನ್ನ ಹೆಸರನ್ನು ಅವಳ ಮುಖದ ಮೇಲೆ ಹಚ್ಚೆ ಹಾಕಲು ಸಂತೋಷ ಪಟ್ಟಿದ್ದಾನೆ.

ಈ ಅಗ್ನಿ ಪರೀಕ್ಷೆಯನ್ನು ತಯಾನೆ ಕಾಲ್ಡಾಸ್ ಹಂಚಿಕೊಂಡಿದ್ದಾರೆ. 'ಈ ದಿನಗಳಲ್ಲಿ ಕಾನೂನು ಹೇಗಿದೆ ಎನ್ನುವುದು ತಿಳಿದಿದೆ. ಅವನು ಹೆಚ್ಚು ಕಾಲ ಜೈಲಿನಲ್ಲಿ ಉಳಿಯುವುದಿಲ್ಲ. ನಾನು ಅವನಿಗೆ ಹೆದರುತ್ತೇನೆ' ಎಂದಿದ್ದಾರೆ.
ತಯಾನೆ ಕಾಲ್ಡಾಸ್ ಅವರ ವಕೀಲರು ಆನ್ಲೈನ್ನಲ್ಲಿ ಅವಳ ಭಯಾನಕ ಅಗ್ನಿಪರೀಕ್ಷೆಯನ್ನು ಹಂಚಿಕೊಂಡಿದ್ದಾರೆ. ಹಲವಾರು ಬ್ರೆಜಿಲಿಯನ್ ಪ್ರಭಾವಿಗಳು ಹಚ್ಚೆ ಹಾಕಲು ಅವನಿಗೆ ಸಹಾಯ ಮಾಡಿದ್ದಾರೆ. ಘಟನೆ ಬಳಿಕ ಹೆಸರು ತೆಗೆದು ಹಾಕು ಯುವತಿ ತಯಾನೆ ಪ್ರಯತ್ನಿಸಿದ್ದಾಳೆ.
ಇಬ್ಬರೂ 2019 ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಮೊದಲಿಗೆ ಎಲ್ಲವೂ ಸರಿಯಾಗಿ ಇತ್ತು. ಸಂಬಂಧವು ಪ್ರಾರಂಭವಾದ ಸುಮಾರು ಒಂದು ವರ್ಷದ ನಂತರ, ಹಚ್ಚೆ ಕಲಾವಿದ ಕೊಯೆಲ್ಹೋ ಯುವತಿಯ ಮೇಲೆ ಅಸೂಯೆ ಮತ್ತು ಆಕ್ರಮಣವನ್ನು ಪ್ರಾರಂಭಿಸಿದನು. ಆ ಸಮಯದಲ್ಲಿ ಅವಳ ತಾಯಿ ಅವನನ್ನು ತೊರೆಯುವಂತೆ ಮನವೊಲಿಸಿದಳು. ಎಂಟು ತಿಂಗಳ ಕಾಲ ಇಬ್ಬರೂ ಬೇರ್ಪಟ್ಟರು. ಆದರೆ ಅವನು ಇನ್ನು ಮುಂದೆ ಅವಳನ್ನು ಹೊಡೆಯುವುದಿಲ್ಲ ಎಂದು ಭರವಸೆ ನೀಡಿ ಮತ್ತೆ ಒಟ್ಟಿಗೆ ಸೇರಿದರು. ಆದರೆ ಕೊಟ್ಟ ಭರವಸೆಯಂತೆ ಕೊಯೆಲ್ಹೋ ನಡೆದುಕೊಳ್ಳಲಿಲ್ಲ. ಕೊಯೆಲ್ಹೋ ಅವರನ್ನು ಬೇರೆ ಪಡೆಸಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಬಳಿಕ ಅವನು ಈ ರೀತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
-
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral












Click it and Unblock the Notifications