ಗೂಗಲ್ 'ದಂಪತಿ' ಸ್ಮೃತಿ-ಶ್ವೇತಾ ಕಂಗ್ರಾಟ್ಸ್!
ಹೈದರಾಬಾದ್, ಮೇ.26: ಸ್ಮೃತಿ-ಶ್ವೇತಾ ಇಬ್ಬರಿಗೆ ದಂಪತಿ ಎನ್ನಬೇಕೇ? ದಂಪತ್ನಿ ಎನ್ನಬೇಕೇ? ಎಂಬ ಚರ್ಚೆ ಆಮೇಲೆ ಇರಲಿ, ಭಾರತೀಯ ಮೂಲದ ಯುವತಿಯರಿಬ್ಬರು 2005ರಲ್ಲಿ ಮೊದಲ ಭೇಟಿಯಾಗಿ 2015ರಲ್ಲಿ ಮದುವೆಯಾಗಿದ್ದಾರೆ. ಇಲ್ಲಿನ ಗೂಗಲ್ ಕಚೇರಿ ಸಿಬ್ಬಂದಿಯಾಗಿದ್ದ ಇಬ್ಬರು ತಂತ್ರಜ್ಞರು ಭಾರತದ ಕಟ್ಟು ಪಾಡು, ಸಮಾಜದ ನಿಯಮಾವಳಿಗಳಿಗೆ ಬೇಸತ್ತು ಅಮೆರಿಕಕ್ಕೆ ಹಾರಿ ವಿವಾಹ ಬಂಧನಕ್ಕೊಳಪಟ್ಟಿದ್ದಾರೆ.
ಅವರಿಬ್ಬರ ಪ್ರೇಮಕ್ಕೆ ಅವರ ಕುಟುಂಬದವರಿಂದಲೇ ಅನುಮತಿ ಸಿಗಲಿಲ್ಲ. ಕೆಲವು ಗೆಳೆಯ-ಗೆಳತಿಯರ ಬೆಂಬಲ ಬಿಟ್ಟರೆ ಮಿಕ್ಕವರು ಅನ್ಯಗ್ರಹ ಜೀವಿಗಳಂತೆ ಇವರನ್ನು ಕಂಡಿದರು. ಭಾರತದಲ್ಲೇ ಮದುವೆಯಾಗಲು ಶತಪ್ರಯತ್ನ ಮಾಡಿದರೂ ಆಗಲಿಲ್ಲ. ನೋಂದಣಿ ಕಚೇರಿಗೆ ಅಲೆದಾಟ ತಪ್ಪಲಿಲ್ಲ. [ಸಲಿಂಗಿ ಅಯ್ಯರ್ ಮದ್ವೆಗೆ ಗಂಡು ಬೇಕಿದೆ]

ಕೊನೆಗೂ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಸಿಟಿ ಹಾಲ್ ನಲ್ಲಿ ಸ್ಮೃತಿ ನಾರಾಯಣ್ ಹಾಗೂ ಶ್ವೇತಾ ಪೈ ಅವರಿಗೆ ಕಲ್ಯಾಣ ಯೋಗ ಕೂಡಿ ಬಂದಿದೆ. ಗೂಗಲ್ ಉದ್ಯೋಗಿಗಳಾದ ಶ್ವೇತಾ ಮತ್ತು ಸ್ಮೃತಿ ಸಲಿಂಗ ಹಕ್ಕುಗಳಿಗಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಬೆಂಗಳೂರಿನಲ್ಲೂ ಎಲ್ ಜಿಬಿಟಿಗಳ ಹೋರಾಟದಲ್ಲಿ ಪಾಲ್ಗೊಂಡಿದ್ದರು. [ಸಲಿಂಗರತಿ ಕಾನೂನು ಬಾಹಿರವಲ್ಲ, ದಿಲ್ಲಿ ಕೋರ್ಟ್]
ಬೆಂಗಳೂರಿನ ಎಲ್ ಜಿಬಿಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ನಮ್ಮಿಬ್ಬರ ಸಂಬಂಧದ ಬಗ್ಗೆ ಸ್ಥಳೀಯ ಕಾರ್ಯಕರ್ತರಿಬ್ಬರಲ್ಲಿ ಹೇಳಿಕೊಂಡಿದ್ದೆವು. ಅವರಿಬ್ಬರು ನಮಗೆ ಬೆಂಬಲ ನೀಡಿದ್ದರಿಂದ ನಾವು ಇಂದು ಮದುವೆಯಾಗಲು ಧೈರ್ಯ ಮೂಡಿತು ಎಂದು ಶ್ವೇತಾ ಪೈ ಹೇಳಿದ್ದಾರೆ.
ಮುಂಬೈನ ಸಲಿಂಗ ಹೋರಾಟಗಾರ ಹರೀಶ್ ಅಯ್ಯರ್ ತನ್ನ 'ಮದುವೆಗೆ ಗಂಡು ಬೇಕಿದೆ' ಎಂದು ಜಾಹೀರಾತು ನೀಡಿ ಸುದ್ದಿಯಾಗಿದ್ದರು. ಈ ಜಾಹೀರಾತಿಗೆ ಅರ್ಧ ಡಜನ್ ರಿಪ್ಲೇ ಕೂಡಾ ಬಂದಿತ್ತು. ಅದರೆ, ಇನ್ನೂ ಮದುವೆ ಮಾತುಕತೆ ತನಕ ವಿಷಯ ಮುಂದುವರೆದಿಲ್ಲ. ಭಾರತದಲ್ಲಿ ಸಲಿಂಗಿಗಳ ಮದುವೆಗೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಐರ್ಲೆಂಡ್ ನಲ್ಲಿ ಇತ್ತೀಚೆಗೆ ಸಲಿಂಗಿಗಳ ಮದುವೆಗೆ ಕಾನೂನು ಜಾರಿಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications