ಗೂಗಲ್ 'ದಂಪತಿ' ಸ್ಮೃತಿ-ಶ್ವೇತಾ ಕಂಗ್ರಾಟ್ಸ್!
ಹೈದರಾಬಾದ್, ಮೇ.26: ಸ್ಮೃತಿ-ಶ್ವೇತಾ ಇಬ್ಬರಿಗೆ ದಂಪತಿ ಎನ್ನಬೇಕೇ? ದಂಪತ್ನಿ ಎನ್ನಬೇಕೇ? ಎಂಬ ಚರ್ಚೆ ಆಮೇಲೆ ಇರಲಿ, ಭಾರತೀಯ ಮೂಲದ ಯುವತಿಯರಿಬ್ಬರು 2005ರಲ್ಲಿ ಮೊದಲ ಭೇಟಿಯಾಗಿ 2015ರಲ್ಲಿ ಮದುವೆಯಾಗಿದ್ದಾರೆ. ಇಲ್ಲಿನ ಗೂಗಲ್ ಕಚೇರಿ ಸಿಬ್ಬಂದಿಯಾಗಿದ್ದ ಇಬ್ಬರು ತಂತ್ರಜ್ಞರು ಭಾರತದ ಕಟ್ಟು ಪಾಡು, ಸಮಾಜದ ನಿಯಮಾವಳಿಗಳಿಗೆ ಬೇಸತ್ತು ಅಮೆರಿಕಕ್ಕೆ ಹಾರಿ ವಿವಾಹ ಬಂಧನಕ್ಕೊಳಪಟ್ಟಿದ್ದಾರೆ.
ಅವರಿಬ್ಬರ ಪ್ರೇಮಕ್ಕೆ ಅವರ ಕುಟುಂಬದವರಿಂದಲೇ ಅನುಮತಿ ಸಿಗಲಿಲ್ಲ. ಕೆಲವು ಗೆಳೆಯ-ಗೆಳತಿಯರ ಬೆಂಬಲ ಬಿಟ್ಟರೆ ಮಿಕ್ಕವರು ಅನ್ಯಗ್ರಹ ಜೀವಿಗಳಂತೆ ಇವರನ್ನು ಕಂಡಿದರು. ಭಾರತದಲ್ಲೇ ಮದುವೆಯಾಗಲು ಶತಪ್ರಯತ್ನ ಮಾಡಿದರೂ ಆಗಲಿಲ್ಲ. ನೋಂದಣಿ ಕಚೇರಿಗೆ ಅಲೆದಾಟ ತಪ್ಪಲಿಲ್ಲ. [ಸಲಿಂಗಿ ಅಯ್ಯರ್ ಮದ್ವೆಗೆ ಗಂಡು ಬೇಕಿದೆ]

ಕೊನೆಗೂ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಸಿಟಿ ಹಾಲ್ ನಲ್ಲಿ ಸ್ಮೃತಿ ನಾರಾಯಣ್ ಹಾಗೂ ಶ್ವೇತಾ ಪೈ ಅವರಿಗೆ ಕಲ್ಯಾಣ ಯೋಗ ಕೂಡಿ ಬಂದಿದೆ. ಗೂಗಲ್ ಉದ್ಯೋಗಿಗಳಾದ ಶ್ವೇತಾ ಮತ್ತು ಸ್ಮೃತಿ ಸಲಿಂಗ ಹಕ್ಕುಗಳಿಗಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಬೆಂಗಳೂರಿನಲ್ಲೂ ಎಲ್ ಜಿಬಿಟಿಗಳ ಹೋರಾಟದಲ್ಲಿ ಪಾಲ್ಗೊಂಡಿದ್ದರು. [ಸಲಿಂಗರತಿ ಕಾನೂನು ಬಾಹಿರವಲ್ಲ, ದಿಲ್ಲಿ ಕೋರ್ಟ್]
ಬೆಂಗಳೂರಿನ ಎಲ್ ಜಿಬಿಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ನಮ್ಮಿಬ್ಬರ ಸಂಬಂಧದ ಬಗ್ಗೆ ಸ್ಥಳೀಯ ಕಾರ್ಯಕರ್ತರಿಬ್ಬರಲ್ಲಿ ಹೇಳಿಕೊಂಡಿದ್ದೆವು. ಅವರಿಬ್ಬರು ನಮಗೆ ಬೆಂಬಲ ನೀಡಿದ್ದರಿಂದ ನಾವು ಇಂದು ಮದುವೆಯಾಗಲು ಧೈರ್ಯ ಮೂಡಿತು ಎಂದು ಶ್ವೇತಾ ಪೈ ಹೇಳಿದ್ದಾರೆ.
ಮುಂಬೈನ ಸಲಿಂಗ ಹೋರಾಟಗಾರ ಹರೀಶ್ ಅಯ್ಯರ್ ತನ್ನ 'ಮದುವೆಗೆ ಗಂಡು ಬೇಕಿದೆ' ಎಂದು ಜಾಹೀರಾತು ನೀಡಿ ಸುದ್ದಿಯಾಗಿದ್ದರು. ಈ ಜಾಹೀರಾತಿಗೆ ಅರ್ಧ ಡಜನ್ ರಿಪ್ಲೇ ಕೂಡಾ ಬಂದಿತ್ತು. ಅದರೆ, ಇನ್ನೂ ಮದುವೆ ಮಾತುಕತೆ ತನಕ ವಿಷಯ ಮುಂದುವರೆದಿಲ್ಲ. ಭಾರತದಲ್ಲಿ ಸಲಿಂಗಿಗಳ ಮದುವೆಗೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಐರ್ಲೆಂಡ್ ನಲ್ಲಿ ಇತ್ತೀಚೆಗೆ ಸಲಿಂಗಿಗಳ ಮದುವೆಗೆ ಕಾನೂನು ಜಾರಿಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ












Click it and Unblock the Notifications