200 ಸತತ ದಾಳಿಗಳ ನಂತರ ಯುದ್ಧ ನಿಲ್ಲಿಸಿದ ಇಸ್ರೇಲ್!
ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಭೀಕರ ರಣಕಾಳಗ ಇದೀಗ ಗಾಜಾ ಪಟ್ಟಿಯ ಬಹುತೇಕ ಪ್ರದೇಶವನ್ನು ಹಾಳು ಮಾಡಿ ಹಾಕಿದೆ. ಅದರಲ್ಲೂ 35,000ಕ್ಕೂ ಹೆಚ್ಚು ಜನರು ಈ ಕಿತ್ತಾಟದಲ್ಲಿ ಜೀವ ಬಿಟ್ಟಿದ್ದಾರೆ. ಇಂತಹ ಪರಿಸ್ಥಿತಿ ಎದುರಾಗಿದ್ದನ್ನು ನೋಡಿದ ಜಗತ್ತೇ ಇಸ್ರೇಲ್ ವಿರುದ್ಧ ಆಕ್ರೋಶ ಹೊರ ಹಾಕುವಾಗ, ಬರೋಬ್ಬರಿ 200 ಸತತ ವೈಮಾನಿಕ ದಾಳಿಗಳ ನಂತರ ಈಗ ಇಸ್ರೇಲ್ ಸೈಲೆಂಟ್ ಆಗಿದೆ. ಯುದ್ಧಕ್ಕೆ ಒಂದು ಬ್ರೇಕ್ ಕೊಟ್ಟಿದೆ!
ಹೌದು, ಜಾಗತಿಕ ಮಟ್ಟದಲ್ಲಿ ಇಸ್ರೇಲ್ ನಡೆಯ ಬಗ್ಗೆ ಭಾರಿ ಬೇಸರ ವ್ಯಕ್ತವಾಗುತ್ತಿದೆ. ಈ ರೀತಿ ಇಸ್ರೇಲ್ ವಿರುದ್ಧ ಜಗತ್ತು ರೊಚ್ಚಿಗೇಳಲು ಸ್ವತಃ ಇಸ್ರೇಲ್ ಕಾರಣವಾಗಿದೆ ಎಂದರೂ ತಪ್ಪಾಗಲ್ಲ. ಯಾಕಂದ್ರೆ ಹಮಾಸ್ ಉಗ್ರರನ್ನು ಹೊಡೆದು ಉರುಳಿಸುವ ನೆಪದಲ್ಲಿ ಇಸ್ರೇಲ್ ಸೇನೆ, ಗಾಜಾ ಪಟ್ಟಿ ಪ್ರದೇಶದ ಸಾಮಾನ್ಯ ಜನರು ಹಾಗೂ ನಿರಾಶ್ರಿತ ಅಮಾಯಕರ ಮೇಲೆ ಕೂಡ ದಾಳಿ ಮಾಡಿ ಸಾಯಿಸಿದೆ ಎಂಬ ಆರೋಪ ಇದೆ. ಈ ಆರೋಪಗಳಿಗೆ ಬಲವಾಗಿರುವ ಸಾಕ್ಷಿಗಳನ್ನೂ ಗಾಜಾ ಆಡಳಿತಾಧಿಕಾರಿಗಳು ನೀಡುತ್ತಿದ್ದಾರೆ. ಹೀಗಿದ್ದಾಗ ಇಸ್ರೇಲ್, ಯುದ್ಧಕ್ಕೆ ಬ್ರೇಕ್ ಹಾಕುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಯುದ್ಧ ಸಂಪೂರ್ಣ ಬಂದ್?
ಅಷ್ಟಕ್ಕೂ ಇಸ್ರೇಲ್ ಈಗ ಯುದ್ಧಕ್ಕೆ ಸಣ್ಣ ಬ್ರೇಕ್ ಕೊಟ್ಟಿದೆ ನಿಜ, ಆದರೆ ಯುದ್ಧ ಪೂರ್ತಿ ನಿಲ್ಲಿಸಿಲ್ಲ. ಯಾಕಂದ್ರೆ ಯುದ್ಧವನ್ನು ಸಂಪೂರ್ಣ ನಿಲ್ಲಿಸಲು ಇಸ್ರೇಲ್ಗೆ ಇಷ್ಟವಿಲ್ಲ ಅಂತ ಕಾಣುತ್ತೆ. ಇದೀಗ ಉತ್ತರ ಗಾಜಾ ಪಟ್ಟಿ ಪ್ರದೇಶದಲ್ಲಿ ಬರುವ ಜಬಾಲಿಯಾ ಎಂಬ ಪ್ರದೇಶ ಸುತ್ತಮುತ್ತ ಸುಮಾರು 200ಕ್ಕೂ ಹೆಚ್ಚು ವಾಯುದಾಳಿ ನಂತರ ಇಸ್ರೇಲ್ ಯುದ್ಧಕ್ಕೆ ಬ್ರೇಕ್ ಹಾಕಿದೆ ಎಂಬ ವರದಿ ಬಂದಿದೆ. ಈ ಮೂಲಕ ಗಾಜಾ ಪಟ್ಟಿ ಪ್ರದೇಶದ ಒಂದು ಸಣ್ಣ ಭಾಗ ಈಗ ಶಾಂತಿಯಿಂದ ಇರುವ ಕನಸು ಕಾಣುತ್ತಿದೆ. ಆದರೆ ಇದು ಕನಸಾಗಿಯೇ ಉಳಿಯುತ್ತಾ? ಎಂಬ ಅನುಮಾನ ಕೂಡ ಕಾಡುತ್ತಿದೆ.
ಯುದ್ಧ ನಿಲ್ಲಿಸಲು ಹೇಳಿತ್ತು ಕೋರ್ಟ್
ಗಾಜಾ ಪಟ್ಟಿ ಪ್ರದೇಶದ ರಫಾ ಭಾಗದಲ್ಲಿ 3 ವಾರದಿಂದ ತಿಕ್ಕಾಟ ತೀವ್ರವಾಗಿದೆ. ಹೀಗಾಗಿ ಇಸ್ರೇಲ್ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶವು ವ್ಯಕ್ತವಾಗಿದೆ. ಹಾಗೆಯೇ ಯುದ್ಧ ತಕ್ಷಣ ನಿಲ್ಲಿಸಿ ಎಂಬ ಒತ್ತಾಯ ಕೇಳಿಬಂದಿತ್ತು. ಪ್ಯಾಲೆಸ್ತೀನ್ ಪ್ರಜೆಗಳನ್ನ ಇಸ್ರೇಲ್ ಸೇನೆ ಬಲವಂತಾಗಿ ಸ್ಥಳಾಂತರ ಮಾಡುತ್ತಿದೆ ಹೀಗಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ಕೊನೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ಬಾಗಿಲು ಕೂಡ ಬಡಿದಿತ್ತು.
ಮತ್ತೆ ಯುದ್ಧ ಶುರುವಾಗುತ್ತಾ?
ಇಂಟರ್ನ್ಯಾಷನಲ್ ಕೋರ್ಟ್ ಇಸ್ರೇಲ್ಗೆ ಆಘಾತ ನೀಡಿ, ರಫಾ ಕಾರ್ಯಾಚರಣೆ ತಕ್ಷಣ ನಿಲ್ಲಿಸಿ ಎಂದಿತ್ತು ಅಂತಾರಾಷ್ಟ್ರೀಯ ನ್ಯಾಯಾಲಯ. ಇಷ್ಟೆಲ್ಲಾ ಗೊಂದಲದ ನಡುವೆಯೂ ಇಸ್ರೇಲ್ ಮಾತ್ರ ತನ್ನ ದಾಳಿ ಮುಂದುವರಿಸಿ ಟೀಕೆಗೆ ಗುರಿಯಾಗಿತ್ತು. ಆದರೆ ಇದೀಗ ಗಾಜಾ ಪಟ್ಟಿಯಲ್ಲಿ ಒಂದು ಸಣ್ಣ ಪ್ರದೇಶದ ಮೇಲೆ ತನ್ನ ಕಾರ್ಯಾಚರಣೆ ನಿಲ್ಲಿಸಿದೆ ಇಸ್ರೇಲ್. ಆದರೆ ಇಸ್ರೇಲ್ ಸೇನೆ ಯಾವಾಗ ಬೇಕಾದರೂ ಇಲ್ಲಿ ಮತ್ತೆ ಕಾರ್ಯಾಚರಣೆ ಪುನರ್ ಆರಂಭಿಸುವ ಸಾಧ್ಯತೆ ಇದೆ ಎಂಬ ಆರೋಪವೂ ಕೇಳಿಬಂದಿದೆ.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications