ಭೂಮಿಯಲ್ಲಿ ಜೀವ ಉಗಮ ಹೇಗಾಯ್ತು? ಇಲ್ಲಿದೆ ಉತ್ತರ
ವಾಷಿಂಗ್ಟನ್, ನ.4: ಭೂಮಿಯಲ್ಲಿ ಜೀವಿಗಳು ಮೊದಲಿಗೆ ಉಗಮವಾಗಿದ್ದು ಹೇಗೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಭಾರತೀಯ ಮೂಲದ ವಿಜ್ಞಾನಿಯೊಬ್ಬರು ಉತ್ತರ ಕಂಡುಕೊಂಡಿದಾರೆ. 4 ಬಿಲಿಯನ್ ವರ್ಷಗಳ ಹಿಂದೆ ಜೀವ ಉಗಮವಾಗಿದ್ದು ಹೇಗೆ ಎಂಬುದನ್ನು ಮೂರು ತಾಣಗಳ ಅವಶೇಷಗಳನ್ನು ಅಭ್ಯಸಿಸಿ ಈ ಉತ್ತರ ಕಂಡು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೋಲ್ಕತ್ತಾದಲ್ಲಿ ಜನಿಸಿರುವ ಡಾ. ಚಟರ್ಜಿ ಅವರು ಲಕ್ಷಾಂತರ ವರ್ಷಗಳಿಂದ ಕಾಡುತ್ತಿರುವ ಪ್ರಶ್ನೆಗೆ ಸರಿ ಉತ್ತರ ಕಂಡುಕೊಂಡಿರುವುದಾಗಿ ಪ್ರತಿಪಾದಿಸಿದ್ದಾರೆ. ನಮ್ಮ ಗ್ರಹದ ಆರಂಭಿಕ ಭೂಪದರ, ರಾಸಾಯನಿಕಗಳ ಉಗಮಗಳನ್ನು ಅಧ್ಯಯನ ನಡೆಸಿ ನೀಡಿರುವ ಸಿದ್ಧಾಂತ ಡೈನೋಸರಸ್ ಅವಿಷ್ಕಾರಕ್ಕಿಂತ ದೊಡ್ಡದು ಎಂದು ಚಟರ್ಜಿ ಹೇಳಿದ್ದಾರೆ.
ಮೊದಲಿಗೆ ಭೂಮಿ ಉಗಮ ಆಗಿದ್ದು ಹೇಗೆ ಎಂಬುದಕ್ಕೆ ಉತ್ತರ ನೀಡಿರುವ ಡಾ. ಚಟರ್ಜಿ, 'ಬೃಹತ್ ಆಕಾಶಕಾಯಗಳು ಭೂಮಿಯ ಮೇಲ್ಪದರ ಮೇಲೆ ಬಿಲಿಯನ್ ವರ್ಷಗಳ ಹಿಂದೆ ಅಪ್ಪಳಿಸಿತ್ತು. ಇದರ ಪರಿಣಾಮ ಬೃಹತ್ ಕುಳಿಗಳು ರಚನೆಯಾಯಿತು. ಇದರಲ್ಲಿ ನೀರು ಹಾಗೂ ಜೀವ ಉಗಮಕ್ಕೆ ಬೇಕಾದ ಅಗತ್ಯ ರಾಸಾಯನಿಕಗಳು ಇದ್ದವು. ಇವೇ ಮುಂದೆ ಜೀವ ಉಗಮಕ್ಕೆ ಕಾರಣವಾಯಿತು ಎಂದು ಚಟರ್ಜಿ ವಿವರಿಸಿದ್ದಾರೆ.

ಭೂಮಿಯ ಮೇಲೆ ಅಪ್ಪಳಿಸಿದ ಆಕಾಶಕಾಯ, ಧೂಮಕೇತುಗಳು ಜೀವ ಉಗಮ ಹಾಗೂ ಜೀವನಾಶ ಎಲ್ಲಕ್ಕೂ ಕಾರಣವಾಗಿದೆ. ಈ ಅಂಶ ಜಗತ್ತಿನ ಅತಿ ಪ್ರಾಚೀನ ಅವಶೇಷಗಳನ್ನು ಒಳಗೊಂಡಿರುವ ಮೂರು ತಾಣಗಳಲ್ಲಿ ಸಂಶೋಧನೆ ನಡೆಸಿದಾಗ ತಿಳಿದು ಬಂದಿದೆ. ಏಕಕೋಶ ಜೀವಿಗಳು ಜಲಉಷ್ಣ ಕ್ರೇಟರ್ ಗಳಲ್ಲಿ ಉಗಮಗೊಂಡಿದೆ ಎಂದು ಚಟರ್ಜಿ ಹೇಳಿದ್ದಾರೆ.
4.5 ಬಿಲಿಯನ್ ವರ್ಷಗಳ ಹಿಂದೆ ಭೂಮಿ ಉಗಮವಾದಾಗ ಜೀವಮಾರಕ ಮಾರುತಗಳನ್ನು ಹೊಂದಿದ್ದ ವಾತಾವರಣ ಹೊಂದಿತ್ತು. ಅನೇಕ ಕಡೆ ಅಗ್ನಿ ಪರ್ವತಗಳು, ಆಸಿಡ್ ಮಳೆಗಳು ಮಾಮೂಲಿಯಾಗಿತ್ತು ಒಂದು ಬಿಲಿಯನ್ ವರ್ಷಗಳ ನಂತರ ಜಲ ಸಸ್ಯಗಳು ಮೈಕ್ರೋ ಏಕ ಕೋಶ ಜೀವಿಗಳ ಉಗಮ ಕಾಣಲಾಯಿತು ಎಂದು ಡೆನ್ ವರ್ ನಲ್ಲಿ ನಡೆದ ಜಿಯೋಲಾಜಿಕಲ್ ಸೊಸೈಟಿ ಆಫ್ ಅಮೆರಿಕದ ವಾರ್ಷಿಕ ಸಭೆಯಲ್ಲಿ ಡಾ. ಚಟರ್ಜಿ ತಮ್ಮ ಸಂಶೋಧನೆಯನ್ನು ವಿವರಿಸಿದ್ದಾರೆ.(ಪಿಟಿಐ)
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications