Get Updates
Get notified of breaking news, exclusive insights, and must-see stories!

ಭಾರತದಿಂದ ಶ್ರೀಲಂಕಾಗೆ 100 ಟನ್ ರಸಗೊಬ್ಬರ ರಫ್ತು

ಅಂತಾರಾಷ್ಟ್ರೀಯ, ನವೆಂಬರ್ 6: ಶ್ರೀಲಂಕಾ ದೇಶವನ್ನು ಸಂಪೂರ್ಣವಾಗಿ ಸಾವಯವ ರಾಷ್ಟ್ರವನ್ನಾಗಿ ಪರಿವರ್ತಿಸಲು ಅಲ್ಲಿನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಹಠಾತ್‌ ನಿರ್ಧಾರ ತೆಗೆದುಕೊಂಡರು. ಅಂದಿನಿಂದ ದ್ವೀಪ ರಾಷ್ಟ್ರವು ಬೆಳೆ ಉತ್ಪಾದನೆ ಮತ್ತು ರಸಗೊಬ್ಬರ ಬಳಕೆಗೆ ಸಂಬಂಧಿಸಿದಂತೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು.

ಈ ಹಿನ್ನೆಲೆ ಶ್ರೀಲಂಕಾ ಅಧ್ಯಕ್ಷರು ಹಸಿರು ಮಂಡಳಿಯನ್ನು ಸ್ಥಾಪಿಸಲು ಕಾರಣವಾಯಿತು. ಅಲ್ಲದೆ, ರಾಸಾಯನಿಕ ಗೊಬ್ಬರಗಳನ್ನು ನಿಷೇಧಿಸಿತು ಮತ್ತು 2020ರ ಉತ್ಪಾದನೆಯ ಮಟ್ಟವನ್ನು ಮುಂದುವರಿಸಲು ವಿಫಲವಾದ ನಂತರ ಅವರ ಮಾತನ್ನು ಹಿಂತೆಗೆದುಕೊಂಡು ಪೊಟ್ಯಾಷಿಯಂ ಕ್ಲೋರೈಡ್‌ (KCL) ಮತ್ತು ಸಾರಜನಕ ನ್ಯಾನೋ ಗೊಬ್ಬರಗಳಂತಹ ರಾಸಾಯನಿಕ ಗೊಬ್ಬರಗಳನ್ನು ತನ್ನ ಕೃಷಿ ಕ್ಷೇತ್ರವನ್ನು ತೃಪ್ತಿಪಡಿಸಲು ಭಾರತ ಮತ್ತು ಪ್ರಪಂಚದ ಇತರ ಭಾಗಗಳಿಂದ ತುರ್ತಾಗಿ ಆಮದು ಮಾಡಿಕೊಳ್ಳಲು ಆರಂಭಿಸಿದೆ.

ಕೊಲಂಬೊಗೆ ತೆರಳಿದ ನ್ಯಾನೋ ರಸಗೊಬ್ಬರ ಹೊತ್ತ ವಿಮಾನಗಳು
100 ಟನ್ ನ್ಯಾನೋ ನೈಟ್ರೋಜನ್ ದ್ರವ ರಸಗೊಬ್ಬರಗಳನ್ನು ಹೊತ್ತ ಭಾರತೀಯ ವಾಯುಪಡೆಯ ಎರಡು ವಿಮಾನಗಳು ಗುರುವಾರ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಬಂದಿಳಿದಿವೆ. ಈ ಸಂಬಂಧ ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ನ್ಯಾನೋ ರಸಗೊಬ್ಬರಗಳನ್ನು ಏರ್‌ಲಿಫ್ಟಿಂಗ್ ಮಾಡುವಲ್ಲಿ ತುರ್ತು ಬೆಂಬಲಕ್ಕಾಗಿ ಶ್ರೀಲಂಕಾ ಸರ್ಕಾರದ ಕರೆಗೆ ಪ್ರತಿಕ್ರಿಯೆಯಾಗಿ ವಿತರಣೆಯಾಗಿದೆ ಎಂದು ಹೇಳಿದ್ದಾರೆ.

India Exported 100 Tonnes Of Fertilizer To Sri Lanka

ಭಾರತೀಯ ಹೈಕಮಿಷನ್​ ಟ್ವೀಟ್
"ದೀಪಾವಳಿಯ ದಿನದಂದು, ಬೆಳಕಿನ ಹಬ್ಬ, ಭಾರತೀಯ ವಾಯುಪಡೆಯು ಮತ್ತೊಮ್ಮೆ ಶ್ರೀಲಂಕಾಕ್ಕೆ ಭರವಸೆಯ ಕಿರಣವನ್ನು ತಂದಿತು. ಭಾರತದಿಂದ ನ್ಯಾನೋ ಗೊಬ್ಬರಗಳನ್ನು ಏರ್‌ಲಿಫ್ಟಿಂಗ್ ಮಾಡಲು ತುರ್ತು ಬೆಂಬಲಕ್ಕಾಗಿ GoSL ನ ಕರೆಗೆ ಸ್ಪಂದಿಸುತ್ತಾ, 2 @IAF_MCC ವಿಮಾನಗಳು 100 ಟನ್‌ಗಳ ಉತ್ಪನ್ನವನ್ನು ಹೊತ್ತು ಇಂದು ಕೊಲಂಬೋಗೆ ಬಂದಿವೆ ಎಂದು ಶ್ರೀಲಂಕಾದ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ.

ಭಾರತದಿಂದ ಶ್ರೀಲಂಕಾಗೆ ರಸಗೊಬ್ಬರ ರಫ್ತು
ಶ್ರೀಲಂಕಾದ ಕೃಷಿ ಕ್ಷೇತ್ರವು ಪ್ರಸ್ತುತ ತನ್ನ ಮಹಾ ಬೆಳೆ ಋತುವಿನಲ್ಲಿ ಸಾಗುತ್ತಿದೆ. ಈ ಸಮಯದಲ್ಲಿ ಪ್ರಮುಖವಾದ ವಾಣಿಜ್ಯ ಬೆಳೆಯಾಗಿರುವ ಭತ್ತವನ್ನು ನಾಟಿ ಮಾಡಲಾಗುತ್ತದೆ. ನ್ಯಾನೋ ಸಾರಜನಕ ಗೊಬ್ಬರಗಳು ಸಾರಜನಕದಲ್ಲಿ ಸಮೃದ್ಧವಾಗಿರುವ ರಾಸಾಯನಿಕ ಗೊಬ್ಬರಗಳಾಗಿವೆ ಮತ್ತು ಸಸ್ಯಗಳಿಂದ ಸುಲಭವಾಗಿ ಹೀರಿಕೊಳ್ಳಲ್ಪಡುತ್ತವೆ. ಈ ಹಿನ್ನೆಲೆ ನ್ಯಾನೋ ರಸಗೊಬ್ಬರಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗಿದೆ.

India Exported 100 Tonnes Of Fertilizer To Sri Lanka

ದ್ವೀಪ ರಾಷ್ಟ್ರಕ್ಕೆ ಸಹಾಯ
ಈ ನ್ಯಾನೋ ಸಾರಜನಕ ದ್ರವ ರಸಗೊಬ್ಬರಗಳು ದ್ವೀಪ ರಾಷ್ಟ್ರಕ್ಕೆ ಖಂಡಿತವಾಗಿಯೂ ದೊಡ್ಡ ಸಹಾಯವನ್ನು ನೀಡುತ್ತವೆ. ಆದರೆ, ಪ್ರಸ್ತುತ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಆಡಳಿತದ ತ್ವರಿತ ನಿರ್ಧಾರವು ಪ್ರಸ್ತುತ ಶ್ರೀಲಂಕಾದ ಜನಸಂಖ್ಯೆಯ ಸುಮಾರು ಶೇ.30ರಷ್ಟಿರುವ ಕೃಷಿ ಕ್ಷೇತ್ರವು ಪ್ರಸ್ತುತ ಆಡಳಿತದ ಬಗ್ಗೆ ತಮ್ಮ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.

ರಾಸಾಯನಿಕ ಗೊಬ್ಬರ ಆಮದು ನಿಲ್ಲಿಸಲು ಮೇ ತಿಂಗಳಲ್ಲಿ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿರ್ಧಾರದ ನಂತರ ನ್ಯಾನೋ ಸಾರಜನಕ ದ್ರವ ಗೊಬ್ಬರದ ಆಮದು ತಿಂಗಳುಗಳ ನಂತರ ಬಂದಿದೆ.

ರಸಗೊಬ್ಬರಗಳ ಕೊರತೆ ಎದುರಿಸುತ್ತಿರುವ ಶ್ರೀಲಂಕಾ
ರಾಸಾಯನಿಕ ಗೊಬ್ಬರ ನಿಷೇಧದ ನಂತರ ಶ್ರೀಲಂಕಾ ರಸಗೊಬ್ಬರಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಈ ಹಿನ್ನೆಲೆ ನೆರೆಯ ರಾಷ್ಟ್ರ ಶ್ರೀಲಂಕಾಕ್ಕೆ ನ್ಯಾನೋ ರಸಗೊಬ್ಬರ ಪೂರೈಕೆಯನ್ನು ವೇಗಗೊಳಿಸಲು ಭಾರತ ಮುಂದಾಗಿದೆ.

Recommended Video

      Afghanistan ತಂಡಕ್ಕೆ ಸಹಾಯ ಹಸ್ತ ಚಾಚಿದ Ashwin | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+