ಬ್ರಿಟಿಷ್ ಮಹಿಳೆ ಬಳಿ ಕ್ಷಮೆ ಯಾಚಿಸಿದ ಭಾರತ
ಮುಂಬೈ, ಮೇ.22: ಭಾರತ ಪ್ರವಾಸದ ವೇಳೆ ಬ್ರಿಟಿಷ್ ಮಹಿಳೆಗೆ ಉಂಟಾದ ಮುಜುಗರಕ್ಕೆ ಭಾರತದೆಲ್ಲೆಡೆಯಿಂದ ಕ್ಷಮೆಯಾಚನೆ, ಬೆಂಬಲ ಹರಿದು ಬಂದಿದೆ. ಬ್ರಿಟಿಷ್ ಮಹಿಳೆ ಲೂಸಿ ಮುಂಬೈ ಪ್ರವಾಸದ ವೇಳೆ ಪುರುಷನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಆಕೆ ಮುಂದೆ ಹಸ್ತಮೈಥುನ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು.
ಮುಂಬೈ ಬಸ್ ನಿಲ್ದಾಣದ ಬಳಿ ಅನೇಕ ಪುರುಷರು ತನ್ನತ್ತ ದುರುಗುಟ್ಟಿ ನೋಡುತ್ತಿದ್ದರು. ಕೆಲವರು ಬಹಿರಂಗವಾಗಿ ಹಸ್ತಮೈಥುನ ಮಾಡಿಕೊಂಡರು ಎಂದು 27ರ ಹರೆಯದ ಬ್ರಿಟಿಷ್ ಯುವತಿ ಲೂಸಿ ಹೆಮ್ಮಿಂಗ್ಸ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ನಡೆಯಿತು.
ಬೌರ್ನೆ ಮೌತ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಲೂಸಿ, ತಾನು ಮೂರು ತಿಂಗಳ ಭಾರತ ಪ್ರವಾಸದಲ್ಲಿದ್ದಾಗ, ಮುಂಬೈಯ ಬಸ್ ನಿಲ್ದಾಣವೊಂದರಲ್ಲಿ ಕಂಡ ಇತ್ತೀಚಿನ ಘಟನೆ ಬಗ್ಗೆ ವಿವರವಾಗಿ ಬರೆದಿದ್ದಾರೆ. ಒಂದು ದೇಶವಾಗಿ ಭಾರತದ ಖ್ಯಾತಿಗೆ ಕಳಂಕ ತರುವ ಹಾಗೂ ಅದು ಹೇಗೆ ತನ್ನ ಮಹಿಳೆಯರನ್ನು ನಡೆಸಿಕೊಳ್ಳುತ್ತದೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.
ಭಾರತದ ಬಗ್ಗೆ ನನಗೆ ಅಪಾರ ಗೌರವವಿದೆ. ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಲೂಸಿ ಹೇಳಿಕೊಂಡಿದ್ದಾರೆ. ಲೂಸಿ ಬ್ಲಾಗ್ ನಲ್ಲಿ ಕಾಮೆಂಟ್ ಮಾಡಿರುವ ಹಲವಾರು ಮಂದಿ
"On behalf of my fellow countrymen I would like to apologise for what happened," ಎಂಬ ಭಾವದಿಂದಲೇ ಉತ್ತರಿಸಿದ್ದಾರೆ.

ಘಟನೆಗಳು: ಮುಂಬೈಯ ಬಸ್ ನಿಲ್ದಾಣ ವೊಂದರಲ್ಲಿ ಕುಳಿತಿದ್ದಾಗ ಒಬ್ಬ ವ್ಯಕ್ತಿ ತನ್ನ ಹತ್ತಿರ ಬರುತ್ತಿದ್ದನ್ನು ಗಮನಿಸಿದೆ. ನಾನು ಆತನನ್ನು ಗಮನಿಸುತ್ತಿದ್ದಂತೆ,ಆತ ತನ್ನ ಶಿಶ್ನವನ್ನು ಹೊರಗೆಳೆದ, ನನ್ನತ್ತ ನೋಡುತ್ತಾ ಹಸ್ತ ಮೈಥುನ ಮಾಡಿಕೊಳ್ಳುತೊಡಗಿದ. ಈ ಘಟನೆ ನನಗೆ ಆಘಾತ, ಅಸಹ್ಯ ತಂದಿತು ಎಂದಿದ್ದಾರೆ.
2012ರಲ್ಲಿ ಮೊದಲ ಬಾರಿಗೆ ನಾನು ಅಭಿವೃದ್ಧಿಶೀಲ ದೇಶ ಭಾರತ ಪ್ರವಾಸ ಕೈಗೊಂಡೆ. ಮೂರು ತಿಂಗಳುಗಳ ಕಾಲ ಪ್ರವಾಸದಲ್ಲಿ ನನಗೆ ಆಸ್ಟ್ರೇಲಿಯಾ ಮೂಲದ ಗೆಳತಿ ಜೊತೆಗಿದ್ದಳು.
ಒಮ್ಮೆ ಮಹರ್ಷಿ ಮಹೇಶ್ ಯೋಗಿಯವರ ಆಶ್ರಮ ಅಥವಾ ಹೃಷಿಕೇಶದ ಬೀಟಲ್ಸ್ ಆಶ್ರಮದಲ್ಲಿ ತಿರುಗಾಡುತ್ತಿದ್ದಾಗ, ಒಬ್ಬ ವ್ಯಕ್ತಿ ಪೊದರಿನೆಡೆಯಲ್ಲಿ ಅಡಗಿ ತಮ್ಮನ್ನು ನೋಡುತ್ತ ಮುಷ್ಟಿ ಮೈಥುನ ಮಾಡಿಕೊಳ್ಳುತ್ತಿರುವುದನ್ನು ತಾನು ಗಮನಿಸಿದೆವು.
ಮೊದಲಿಗೆ ಇಬ್ಬರಿಗೂ ಭಯವಾಯಿತು. ಆತನೆಡೆಗೆ ಕಲ್ಲು ಎಸೆದೆವು, ನೋಡಿ ನಕ್ಕೆವು. ಅದರೆ, ಆತ ಸುಮ್ಮನೆ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ಕೊನೆಗೆ ಆತ ಮಾನಸಿಕ ಅಸ್ವಸ್ಥನಿರಬಹುದು ಎಂದೆನಿಸಿ ಅಲ್ಲಿಂದ ಮುಂದೆ ಸಾಗಿದೆವು ಎಂದು ಬರೆದುಕೊಂಡಿದ್ದಾರೆ.(ಪಿಟಿಐ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications