ಬ್ರಿಟಿಷ್ ಮಹಿಳೆ ಬಳಿ ಕ್ಷಮೆ ಯಾಚಿಸಿದ ಭಾರತ
ಮುಂಬೈ, ಮೇ.22: ಭಾರತ ಪ್ರವಾಸದ ವೇಳೆ ಬ್ರಿಟಿಷ್ ಮಹಿಳೆಗೆ ಉಂಟಾದ ಮುಜುಗರಕ್ಕೆ ಭಾರತದೆಲ್ಲೆಡೆಯಿಂದ ಕ್ಷಮೆಯಾಚನೆ, ಬೆಂಬಲ ಹರಿದು ಬಂದಿದೆ. ಬ್ರಿಟಿಷ್ ಮಹಿಳೆ ಲೂಸಿ ಮುಂಬೈ ಪ್ರವಾಸದ ವೇಳೆ ಪುರುಷನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಆಕೆ ಮುಂದೆ ಹಸ್ತಮೈಥುನ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು.
ಮುಂಬೈ ಬಸ್ ನಿಲ್ದಾಣದ ಬಳಿ ಅನೇಕ ಪುರುಷರು ತನ್ನತ್ತ ದುರುಗುಟ್ಟಿ ನೋಡುತ್ತಿದ್ದರು. ಕೆಲವರು ಬಹಿರಂಗವಾಗಿ ಹಸ್ತಮೈಥುನ ಮಾಡಿಕೊಂಡರು ಎಂದು 27ರ ಹರೆಯದ ಬ್ರಿಟಿಷ್ ಯುವತಿ ಲೂಸಿ ಹೆಮ್ಮಿಂಗ್ಸ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ನಡೆಯಿತು.
ಬೌರ್ನೆ ಮೌತ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಲೂಸಿ, ತಾನು ಮೂರು ತಿಂಗಳ ಭಾರತ ಪ್ರವಾಸದಲ್ಲಿದ್ದಾಗ, ಮುಂಬೈಯ ಬಸ್ ನಿಲ್ದಾಣವೊಂದರಲ್ಲಿ ಕಂಡ ಇತ್ತೀಚಿನ ಘಟನೆ ಬಗ್ಗೆ ವಿವರವಾಗಿ ಬರೆದಿದ್ದಾರೆ. ಒಂದು ದೇಶವಾಗಿ ಭಾರತದ ಖ್ಯಾತಿಗೆ ಕಳಂಕ ತರುವ ಹಾಗೂ ಅದು ಹೇಗೆ ತನ್ನ ಮಹಿಳೆಯರನ್ನು ನಡೆಸಿಕೊಳ್ಳುತ್ತದೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.
ಭಾರತದ ಬಗ್ಗೆ ನನಗೆ ಅಪಾರ ಗೌರವವಿದೆ. ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಲೂಸಿ ಹೇಳಿಕೊಂಡಿದ್ದಾರೆ. ಲೂಸಿ ಬ್ಲಾಗ್ ನಲ್ಲಿ ಕಾಮೆಂಟ್ ಮಾಡಿರುವ ಹಲವಾರು ಮಂದಿ
"On behalf of my fellow countrymen I would like to apologise for what happened," ಎಂಬ ಭಾವದಿಂದಲೇ ಉತ್ತರಿಸಿದ್ದಾರೆ.

ಘಟನೆಗಳು: ಮುಂಬೈಯ ಬಸ್ ನಿಲ್ದಾಣ ವೊಂದರಲ್ಲಿ ಕುಳಿತಿದ್ದಾಗ ಒಬ್ಬ ವ್ಯಕ್ತಿ ತನ್ನ ಹತ್ತಿರ ಬರುತ್ತಿದ್ದನ್ನು ಗಮನಿಸಿದೆ. ನಾನು ಆತನನ್ನು ಗಮನಿಸುತ್ತಿದ್ದಂತೆ,ಆತ ತನ್ನ ಶಿಶ್ನವನ್ನು ಹೊರಗೆಳೆದ, ನನ್ನತ್ತ ನೋಡುತ್ತಾ ಹಸ್ತ ಮೈಥುನ ಮಾಡಿಕೊಳ್ಳುತೊಡಗಿದ. ಈ ಘಟನೆ ನನಗೆ ಆಘಾತ, ಅಸಹ್ಯ ತಂದಿತು ಎಂದಿದ್ದಾರೆ.
2012ರಲ್ಲಿ ಮೊದಲ ಬಾರಿಗೆ ನಾನು ಅಭಿವೃದ್ಧಿಶೀಲ ದೇಶ ಭಾರತ ಪ್ರವಾಸ ಕೈಗೊಂಡೆ. ಮೂರು ತಿಂಗಳುಗಳ ಕಾಲ ಪ್ರವಾಸದಲ್ಲಿ ನನಗೆ ಆಸ್ಟ್ರೇಲಿಯಾ ಮೂಲದ ಗೆಳತಿ ಜೊತೆಗಿದ್ದಳು.
ಒಮ್ಮೆ ಮಹರ್ಷಿ ಮಹೇಶ್ ಯೋಗಿಯವರ ಆಶ್ರಮ ಅಥವಾ ಹೃಷಿಕೇಶದ ಬೀಟಲ್ಸ್ ಆಶ್ರಮದಲ್ಲಿ ತಿರುಗಾಡುತ್ತಿದ್ದಾಗ, ಒಬ್ಬ ವ್ಯಕ್ತಿ ಪೊದರಿನೆಡೆಯಲ್ಲಿ ಅಡಗಿ ತಮ್ಮನ್ನು ನೋಡುತ್ತ ಮುಷ್ಟಿ ಮೈಥುನ ಮಾಡಿಕೊಳ್ಳುತ್ತಿರುವುದನ್ನು ತಾನು ಗಮನಿಸಿದೆವು.
ಮೊದಲಿಗೆ ಇಬ್ಬರಿಗೂ ಭಯವಾಯಿತು. ಆತನೆಡೆಗೆ ಕಲ್ಲು ಎಸೆದೆವು, ನೋಡಿ ನಕ್ಕೆವು. ಅದರೆ, ಆತ ಸುಮ್ಮನೆ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ಕೊನೆಗೆ ಆತ ಮಾನಸಿಕ ಅಸ್ವಸ್ಥನಿರಬಹುದು ಎಂದೆನಿಸಿ ಅಲ್ಲಿಂದ ಮುಂದೆ ಸಾಗಿದೆವು ಎಂದು ಬರೆದುಕೊಂಡಿದ್ದಾರೆ.(ಪಿಟಿಐ)
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications