Imran Khan: ಇಮ್ರಾನ್ ಖಾನ್ ಬೆಂಬಲಿಗರಿಗೆ ಗುಂಡೇಟು, ಪ್ರತಿಭಟನೆಗೆ ಬ್ರೇಕ್!
ಪಾಕಿಸ್ತಾನ ನೆಲದಲ್ಲಿ ಇಮ್ರಾನ್ ಖಾನ್ ಬೆಂಬಲಿಗರನ್ನ ಟಾರ್ಗೆಟ್ ಮಾಡಿ, ಹಿಂಸೆ ನೀಡುತ್ತಾ ಬೇಕು ಅಂತಲೇ ಗುಂಡು ಹಾರಿಸುತ್ತಿರುವ ಆರೋಪ ಕೇಳಿ ಬರುತ್ತಿದೆ. ಅದರಲ್ಲೂ ಪಾಕಿಸ್ತಾನದ ನೆಲದಲ್ಲಿ ಹೋರಾಟ ಆರಂಭ ಮಾಡಿ, ಜೈಲಿನಲ್ಲಿ ಇರುವ ಇಮ್ರಾನ್ ಖಾನ್ ಅವರನ್ನ ಬೇಗ ರಿಲೀಸ್ ಮಾಡುವಂತೆ ಒತ್ತಾಯ ಮಾಡಿದ್ದ ಲಕ್ಷಾಂತರ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಗುಂಡು & ಬಂದೂಕುಗಳ ಮೂಲಕವೇ ಇಮ್ರಾನ್ ಖಾನ್ ಬೆಂಬಲಿಗರನ್ನ ಪಾಕಿಸ್ತಾನ ಸರ್ಕಾರ ಇದೀಗ ಬೆಚ್ಚಿ ಬೀಳುವಂತೆ ಮಾಡಿದೆ!
ಪಾಕಿಸ್ತಾನದ ಸರ್ಕಾರಕ್ಕೂ & ಇಮ್ರಾನ್ ಖಾನ್ ಪಕ್ಷಕ್ಕೂ ದೊಡ್ಡ ಗಲಾಟೆ ಆಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ನಡೆದಿದ್ದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷ ಬಹುಮತ ಪಡೆದು ಸರ್ಕಾರ ರಚನೆ ಮಾಡುವ ತಾಕತ್ ಹೊಂದಿತ್ತು. ಆದರೂ ಮೋಸ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದರ ಜೊತೆಗೆ, ಇಮ್ರಾನ್ ಖಾನ್ ಅವರನ್ನು ಕುತಂತ್ರ ಮಾಡಿ ಜೈಲಿನಿಂದ ಹೊರಗೆ ಬರದಂತೆ ಲಾಕ್ ಮಾಡಿರುವ ಆರೋಪ ಕೂಡ ಇದೆ. ಇಷ್ಟೆಲ್ಲ ನೋಡಿ ನೋಡಿ ರೊಚ್ಚಿಗೆದ್ದಿರುವ ಇಮ್ರಾನ್ ಖಾನ್ ಬೆಂಬಲಿಗರು ತೀವ್ರ ಹೋರಾಟ ಆರಂಭಿಸಿದ್ದರು.

ಹೆದರಿಸಿ & ಬೆದರಿಸಿ ಪ್ರತಿಭಟನೆಗೆ ಬ್ರೇಕ್!
ಹೀಗೆ ಆರಂಭವಾದ ಹೋರಾಟ ಪಾಕಿಸ್ತಾನದ ರಾಜಧಾನಿಗೆ ಕೂಡ ನುಗ್ಗುತ್ತಿತ್ತು. ಅದರಲ್ಲೂ ಪಾಕಿಸ್ತಾನ ಅರಾಜಕತೆ ಬೆಂಕಿಯಲ್ಲಿ ನರಳುವ ಪರಿಸ್ಥಿತಿ ಬಂದಿತ್ತು. ಇಂತಹ ಸಮಯದಲ್ಲೇ ಪಾಕಿಸ್ತಾನ ಮಿಲಿಟರಿ ತೀವ್ರ ದಾಳಿ ನಡೆಸಿ, ಪ್ರತಿಭಟನೆ ಹತ್ತಿಕ್ಕಲು ಮುಂದಾಗಿತ್ತು. ಇದೀಗ ಆ ಕೆಲಸದಲ್ಲಿ ಪಾಕಿಸ್ತಾನ ಮಿಲಿಟರಿ ಸಕ್ಸಸ್ ಆಗಿದ್ದು, ಇಮ್ರಾನ್ ಖಾನ್ ಬೆಂಬಲಿಗರು ಈ ಸಮಯದಲ್ಲಿ ಹೋರಾಟ ಕೈಬಿಟ್ಟು ಓಡಿ ಹೋಗಿದ್ದಾರೆ. ಅಲ್ಲದೆ 4 ಜನ ಇಮ್ರಾನ್ ಖಾನ್ ಅವರ ಬೆಂಬಲಿಗರು ಈ ಗಲಾಟೆಯಲ್ಲಿ ಜೀವ ಬಿಟ್ಟಿರುವ ಆರೋಪ ಕೂಡ ಕೇಳಿ ಬಂದಿದೆ.
ಪಾಕಿಸ್ತಾನದಲ್ಲಿ ಮತ್ತೆ ಭುಗಿಲೇಳುತ್ತಾ ಹೋರಾಟ?
ಉಗ್ರರ ಸ್ವರ್ಗ ಪಾಕಿಸ್ತಾನ ಇದೀಗ ನರಕವಾಗಿದೆ. ಈ ಸಮಯದಲ್ಲಿ ಇಮ್ರಾನ್ ಬೆಂಬಲಿಗರನ್ನು ಟಾರ್ಗೆಟ್ ಮಾಡಿ ಗುಂಡು ಹಾರಿಸಿರುವ ಆರೋಪ ಕೇಳಿ ಬಂದಿದೆ. ಇದು, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಇಸ್ಲಾಮಾಬಾದ್ ನಗರದಲ್ಲಿ ಭಾರಿ ಭದ್ರತೆ ಕೈಗೊಂಡು, ಈಗಾಗಲೇ ಭಾಗಶಃ ಪ್ರತಿಭಟನೆ ಹತ್ತಿಕ್ಕಲಾಗಿದೆ.
ಒಟ್ನಲ್ಲಿ ಈ ಮೂಲಕ ಪಾಕಿಸ್ತಾನ ಅಕ್ಷಶಃ ಅಲ್ಲಾಡಿ ಹೋಗಿದ್ದು, ಮತ್ತೆ ಜಾಗತಿಕವಾಗೂ ತನ್ನ ಮಾನ ತಾನೇ ಹರಾಜು ಹಾಕಿಕೊಂಡಿದೆ. ಹೀಗಾಗಿ ಮತ್ತೆ, ದಿಢೀರ್ ಅಂತಾ ಇಮ್ರಾನ್ ಖಾನ್ ಬೆಂಬಲಿಗರು ಹೋರಾಟ ಆರಂಭ ಮಾಡುವ ಆತಂಕವೂ ಆವರಿಸಿದೆ. ಹೀಗಾಗಿ, ಎಲ್ಲೆಲ್ಲೂ ಹದ್ದಿನ ಕಣ್ಣಿಡಲಾಗಿದ್ದು ಪಾಕಿಸ್ತಾನ ಮಿಲಿಟರಿ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ನಿಯೋಜನೆ ಮಾಡಿ ಪಾಕಿಸ್ತಾನದ ರಾಜಧಾನಿಗೆ ಭದ್ರತೆ ನೀಡುತ್ತಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications