ನೂರು ವರ್ಷದಲ್ಲಿ ಮತ್ತೊಂದು 'ಭೂಮಿ' ಹುಡುಕಿ, ಜೀವ ಉಳಿಸಿಕೊಳ್ಳಿ: ಹಾಕಿಂಗ್
ಭೂಮಿಯಲ್ಲಿ ಅಬ್ಬಬ್ಬಾ ಅಂದರೆ ಇನ್ನು ನೂರು ವರ್ಷ ಮನುಷ್ಯ ಜೀವಿಸಬಹುದು. ಆ ನಂತರ ಆಗಲ್ಲ. ಆದ್ದರಿಂದ ವಾಸಿಸಲು ಯೋಗ್ಯ ಎನಿಸುವ ಹೊಸ ಭೂಮಿಯೊಂದನ್ನು ಹುಡುಕಿಕೊಳ್ಳಬೇಕಿದೆ ಎಂದು ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಹೇಳಿದ್ದಾರೆ
ಲಂಡನ್, ಮೇ 5: ಇನ್ನು ನೂರು ವರ್ಷದೊಳಗೆ ಮನುಷ್ಯರು ವಾಸಿಸಬಹುದಾದ ಮತ್ತೊಂದು ಗ್ರಹವನ್ನು ಹುಡುಕಿಕೊಳ್ಳಬೇಕು ಎಂದು ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಹೇಳಿದ್ದಾರೆ. ಹವಾಮಾನ ಬದಲಾವಣೆ, ಆಕಾಶಕಾಯಗಳ ದಾಳಿ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಯ ಕಾರಣಕ್ಕೆ ಹೊಸ ಗ್ರಹ ಹುಡುಕೊಕೊಳ್ಳುವುದು ಅನಿವಾರ್ಯ ಆಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಬಿಬಿಸಿ ಸುದ್ದಿ ವಾಹಿನಿ ಆರಂಭಿಸಿರುವ ಹೊಸ ವಿಜ್ಞಾನ ಸರಣಿ ಕಾರ್ಯಕ್ರಮದಲ್ಲಿ ಪ್ರೊ ಹಾಕಿಂಗ್ ಹಾಗೂ ಅವರ ಮಾಜಿ ವಿದ್ಯಾರ್ಥಿ ಕ್ರಿಸ್ಟೋಫ್ ಗಾಲ್ ಫರ್ಡ್ ಮಾನವರು ಬೇರೆ ಯಾವ ಗ್ರಹದಲ್ಲಿ ಬದುಕಲು ಸಾಧ್ಯತೆ ಇದೆ ಎಂಬ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಭೂಮಿಯ ಸ್ಥಿತಿ ದಿನದಿನಕ್ಕೂ ಹದಗೆಡುತ್ತಿದೆ. ಆದ್ದರಿಂದ ಜೀವ ಉಳಿಸಿಕೊಳ್ಳುವುದಕ್ಕೆ ಇದನ್ನು ಬಿಟ್ಟುಹೋಗಬೇಕು ಎಂದಿದ್ದಾರೆ.[ಭೂತಾಪಮಾನ ಹೀಗೇ ಏರುತ್ತಿದ್ದರೆ ಜಗತ್ಪ್ರಳಯ ಗ್ಯಾರಂಟಿ!]

ಜೀವನದ ಮೇಲೆ ಪ್ರಭಾವ ಬೀರಿದ ಬ್ರಿಟನ್ ನ ಅತ್ಯುತ್ತಮ ಆವಿಷ್ಕಾರ ಯಾವುದು ಎಂಬ ಬಗ್ಗೆ ಮತ ಹಾಕಲು ಸಾರ್ವಜನಿಕರನ್ನು ಕೇಳುವುದು ಈ ಕಾರ್ಯಕ್ರಮದ ಮತ್ತೊಂದು ಉದ್ದೇಶ ಎಂದು ದ ಟೆಲಿಗ್ರಾಫ್ ವರದಿ ಮಾಡಿದೆ. ಕಳೆದ ತಿಂಗಳಷ್ಟೇ ಪ್ರೊ ಹಾಕಿಂಗ್ ಎಚ್ಚರ ಹೇಳಿದ್ದರು. ಮಾನವರ ಆಕ್ರಮಣಕಾರಿ ಧೋರಣೆ, ಬೆಳೆಯುತ್ತಿರುವ ತಂತ್ರಜ್ಞಾನ, ಅಣ್ವಸ್ತ್ರ ಅಥವಾ ಜೈವಿಕ ಅಸ್ತ್ರಗಳ ಸಂಭವನೀಯ ಯುದ್ಧಗಳು ನಮ್ಮನ್ನೆಲ್ಲ ನಾಶ ಮಾಡಬಹುದು ಎಂದಿದ್ದಾರೆ.[ಇರುವುದೊಂದೇ ಭೂಮಿ: ರಕ್ಷಣೆ ನಮ್ಮೆಲ್ಲರ ಹೊಣೆ]
ಈ ಅಪಾಯದಿಂದ ಪಾರಾಗಬೇಕು ಅಂದರೆ ಇಡೀ ಜಗತ್ತು ಒಂದಾಗಬೇಕು ಎಂದಿರುವ ಹಾಕಿಂಗ್, ತಾನು ಬದುಕಲು ಬೇಕಾದ ಕೌಶಲದ ಕೊರತೆ ಮನುಷ್ಯರಲ್ಲಿದೆ. ಅದನ್ನು ರೂಢಿಸಿಕೊಳ್ಳಬೇಕು ಎಂದು ಕೂಡ ಅವರು ಹೇಳಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications