ಟೆಲ್ ಅವಿವ್ ನಲ್ಲಿ ಮೋದಿ ಭಾಷಣ: ಅವಿಸ್ಮರಣೀಯ 5 ಸಂಗತಿ
ಟೆಲ್ ಅವಿವ್(ಇಸ್ರೇಲೆ), ಜುಲೈ 6: 'ಮೋದಿ... ಮೋದಿ...' ಇಸ್ರೇಲ್ ನ ಟೆಲ್ ಅವಿವ್ ಕನ್ವೆನ್ಶನ್ ಹಾಲ್ ತುಂಬ ಮೋದಿ ಜಪ! ತಮ್ಮ ಒಬ್ಬನೇ ಒಬ್ಬ ನಾಯಕನನ್ನಾದರೂ ಇಸ್ರೇಲಿನಲ್ಲಿ ನೋಡಬೇಕೆಂಬ ಎಪ್ಪತ್ತು ವರ್ಷಗಳ ಸುದೀರ್ಘ ಕಾತರ ಸಾಕಾರಗೊಂಡ ಕ್ಷಣ ಅದು.
ಹೌದು, ಜು.5 ರಂದು ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ನ ಟೆಲ್ ಅವಿವ್ ನಲ್ಲಿ ಭಾರತೀಯರನ್ನುದ್ದೇಶಿಸಿ ಮಾಡಿದ ಭಾಷಣ ಐತಿಹಾಸಿಕವೆನ್ನಿಸಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ.
70 ವರ್ಷದ ನಂತರ ಭಾರತದ ಪ್ರಧಾನಿಯೊಬ್ಬರು ಪ್ರಪ್ರಥಮ ಬಾರಿಗೆ ಇಸ್ರೇಲಿಗೆ ತೆರಳಿರುವುದು ಜಗತ್ತಿನಾದ್ಯಂತ ಸುದ್ದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮೂರು ದಿನಗಳ ಇಸ್ರೇಲ್ ಪ್ರವಾಸ ಹಲವು ಕಾರಣಗಳಿಂದಾಗಿ ಮಹತ್ವದ್ದೆನ್ನಿಸಿದೆ. ಕಳೆದ ಎರಡು ದಿನಗಳಲ್ಲಿ ಉಭಯ ದೇಶಗಳೂ, ಹಲವು ಒಪ್ಪಂದಗಳಿಗೆ ಸಹಿ ಮಾಡಿವೆ. ಮಾತ್ರವಲ್ಲ, ಪರಸ್ಪರ ಸಹಕಾರವನ್ನು ಬೇಡಿವೆ.
ಹತ್ತು ಹಲವು ಮನರಂಜನೀಯ ಕಾರ್ಯಕ್ರಮಗಳ ಮೂಲಕ ಟೆಲ್ ಅವಿವ್ ಕನ್ವೆನ್ಶನ್ ಸೆಂಟರ್ ಮೋದಿಯವರ ಇಸ್ರೇಲ್ ಭೇಟಿಯನ್ನು ಹಾರ್ದಿಕವಾಗಿ ಸ್ವಾಗತಿಸಿತು. ಇಲ್ಲಿ ಸಾವಿರಾರು ಭಾರತೀಯರನ್ನು ಉದ್ದೇಶಿಸಿ ಮೋದಿ ಮಾಡಿದ ಭಾಷಣ ಅವೀಸ್ಮರಣೀಯ ಮತ್ತು ಐತಿಹಾಸಿಕ ಎನ್ನಿಸಿತು.

ಮೋದಿ... ಮೋದಿ...
ಟೆಲ್ ಅವಿವ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ಅದ್ಧೂರಿ ಸಮಾರಂಭಕ್ಕೆ ಮೋದಿ ಆಗಮಿಸುತ್ತಿದ್ದಂತೆಯೇ 'ಮೋದಿ ಜಪ' ಎಲ್ಲೆಲ್ಲೂ ಮೊಳಗುತ್ತಿತ್ತು. ನೆರೆದಿದ್ದ ಸಾವಿರಾರು ಜನರ ಬಾಯಿಂದಲೂ ಕೇಳಿ ಬರುತ್ತಿದ್ದ ಆ ಎರಡಕ್ಷರ, ಮೋದಿ... ಮೋದಿ... ಭಾರತೀಯ ನಾಯಕನೊಬ್ಬನ್ನು ಇಸ್ರೇಲಿನ ಭಾರತೀಯರು ಅದೆಷ್ಟು ಕಾತರದಿಂದ ಕಾಯುತ್ತಿದ್ದರು ಎಂಬುದಕ್ಕೆ ಅಲ್ಲಿ ಮೊಳಗುತ್ತಿದ್ದ ಧ್ವನಿಯೇ ಸಾಕ್ಷಿಯಾಗಿತ್ತು.

ಕ್ಷಮೆ ಕೇಳಿದ ಮೋದಿ
ಮೋದಿ ಮಾತು ಆರಂಭಿಸುತ್ತಿದ್ದಂತೆಯೇ, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ ಎಂಬ ಹಮ್ಮನ್ನೆಲ್ಲ ಮರೆತು, ಇಸ್ರೇಲಿನಲ್ಲಿರುವ ಭಾರತೀಯ ಕ್ಷಮೆ ಯಾಚಿಸಿದ್ದು ಅವರ ಸರಳತೆಗೆ, ಸೌಜನ್ಯಕ್ಕೆ ಸಾಕ್ಷಿಯಾಯಿತು. 'ಕ್ಷಮಿಸಿ, ಭಾರತೀಯ ಪ್ರಧಾನಿಯೊಬ್ಬ ಇಲ್ಲಿಗೆ ಬರುವುದಕ್ಕೆ ಎಪ್ಪತ್ತು ವರ್ಷ ಬೇಕಾಯಿತು, ಆ ಪಶ್ಚಾತ್ತಾಪ ನನಗಿದೆ. ಆದರೂ, ಕೊನೆಗೂ ಈ ಅವಕಾಶ ನನಗೆ ಒಲಿದು ಬಂತಲ್ಲ ಎಂಬ ಸಂತಸ ನನಗಿದೆ' ಎಂದ ಮೋದಿಯವರ ಮಾತಿಗೆ ನೆರೆದಿದ್ದ ಜನರೆಲ್ಲ ಕರತಾಡನದ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತೀಯರಿಗೆ ಅಭಯ ನೀಡಿದ ಮೋದಿ
ಇಸ್ರೇಲಿನರಲ್ಲಿರುವ ಭಾರತೀಯರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವಲ್ಲಿ ಭಾರತ ಮತ್ತು ಇಸ್ರೇಲ್ ಎರಡೂ ಬದ್ಧವಾಗಿದೆ. ನಾಗರಿಕತ್ವ ಅಥವಾ ಇನ್ಯಾವುದೇ ಸಮಸ್ಯೆಗಳನ್ನೂ ಬಗೆಹರಿಸುವಲ್ಲಿ ನಾವು ಸದಾ ನಿಮ್ಮೊಂದಿಗಿದ್ದೇವೆ ಎಂದು ನರೇಂದ್ರ ಮೋದಿ ಅಲ್ಲಿಯ ಭಾರತೀಯರಿಗೆ ಅಭಯ ನೀಡಿದರು.

ನಾವು ಸ್ನೇಹಿತರು!
ಭಾರತ ಮತ್ತು ಇಸ್ರೇಲ್ ಪರಸ್ಪರ ಆತ್ಮವಿಶ್ವಾಸ ಮತ್ತು ಸ್ನೇಹವನ್ನು ಹೊಂದಿವೆ. ನೀವಿಲ್ಲಿ ಪುರಿಮ್ ಎಂಬ ಹಬ್ಬ ಆಚರಿಸುವಾಗ ನಾವಲ್ಲಿ ಹೋಳಿ ಹಬ್ಬ ಆಚರಿಸುತ್ತೇವೆ, ನೀವಿಲ್ಲಿ ಹನುಕ್ಕ ಎಂಬ ಹಬ್ಬ ಆಚರಿಸುವಾಗ ನಅವು ದೀಪಾವಳಿ ಆಚರಿಸುತ್ತಿರುತ್ತೇವೆ... ಒಟ್ಟಿನಲ್ಲಿ ನಮ್ಮ ನಡುವೆ ಸಾಕಷ್ಟು ಸಾಮ್ಯವಿದೆ ಎಂದು ಮೋದಿ ಉಚ್ಚರಿಸುತ್ತಿದ್ದಂತೆಯೇ ನೆರೆದಿದ್ದ ಭಾರತೀಯರೆಲ್ಲ ಚಪ್ಪಾಳೆ ಮೂಲಕ ಅವರ ಮಾತನ್ನು ಒಪ್ಪಿಕೊಂಡರು.

ಭಾರತದೊಂದಿಗೆ ಬಾಂಧವ್ಯ ಮೂಡಲಿ
ಇಲ್ಲಿನ ಹಲವು ಜನರು ಭಾರತದಿಂದ ಬಂದವರಿದ್ದೀರಾ. ನಿಮಗೆಲ್ಲ ಭಾರತದ ಸಂಸ್ಕೃತಿಯ ಬಗ್ಗೆ ಅರಿವಿದೆ. ಆದರೆ ಇಲ್ಲಿಯೇ ಹುಟ್ಟಿ ಬೆಳೆದವರಿಗೆ ಭಾರತದ ಜೊತೆ ಯಾವುದೇ ಸಂಪರ್ಕವಿಲ್ಲ. ಅಂಥವರು ಭಾರತದೊಂದಿಗೆ ಬಾಂಧವ್ಯ ವೃದ್ಧಿಸಿಕೊಲ್ಳುವಂತೆ ಮಾಡಬೇಕಿದೆ ಎಂದು ಮೋದಿ ಜನರಲ್ಲಿ ಮನವಿ ಮಾಡಿಕೊಂಡರು.
-
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
War Updates: ಇರಾನ್ಗೆ ಟ್ರಂಪ್ ವಾರ್ನಿಂಗ್: ತೈಲ ಮಾರ್ಗ ಬಂದ್ ಮಾಡಿದರೆ ದೇಶವೇ ಸರ್ವನಾಶ, ಇಂದಿನ ಪ್ರಮುಖಾಂಶಗಳು -
ಇಸ್ರೇಲ್-ಯುಎಸ್ ಜಂಟಿ ದಾಳಿ ಅಬ್ಬರ: ಇರಾನ್ಗೆ ಉತ್ತರಾಧಿಕಾರಿ ನೇಮಕ, ಇಂದಿನ ಪ್ರಮುಖಾಂಶಗಳು ಇಲ್ಲಿವೆ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ












Click it and Unblock the Notifications