ಕಾಲರಾ ಭೀತಿಯ ಹೈಟಿಯಲ್ಲಿ ಮುಂದೆ ಆಹಾರಕ್ಕೂ ಸಮಸ್ಯೆಯೇ!
ಹೈಟಿ, ಅಕ್ಟೋಬರ್ 7: ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ಹೈಟಿಯಲ್ಲಿರುವುದು ಮಧ್ಯಂತರ ಸರಕಾರ. ಮುಂದಿನ ಭಾನುವಾರ ಚುನಾವಣೆ ನಡೆದು, ಹೊಸ ಸರಕಾರ ರಚನೆಯಾಗಬೇಕಿತ್ತು. ಅದರೆ ಮತದಾನದ ಮುಂದಿನ ದಿನಾಂಕ ಯಾವುದು ಅಂತ ಯಾರೂ ಹೇಳುವ ಸ್ಥಿತಿಯಲ್ಲಿಲ್ಲ.
ಅಂತರರಾಷ್ಟ್ರೀಯ ಸಂಘ-ಸಂಸ್ಥೆಗಳು ಸರಕಾರದೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕು, ಇದೇ ವೇಳೆ ಜನರ ಜೀವ ಉಳಿಸುವುದಕ್ಕೆ ಪ್ರಯತ್ನಿಸಬೇಕು. ಮುಂಬರುವ ದಿನಗಳಲ್ಲಿ ಇದೇ ಬಿಕ್ಕಟ್ಟಿಗೂ ಕಾರಣವಾಗಬಹುದು ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. 2010ರ ಭೂಕಂಪದಿಂದ ಆ ದೇಶ ಸಾಕಷ್ಟು ಪಾಠ ಕಲಿತಿದೆ ಎನ್ನುತ್ತಾರೆ ವಾಷಿಂಗ್ಟನ್ ನಲ್ಲಿರುವ ಸಂಶೋಧಕ ಜೇಕ್ ಜಾನ್ ಸ್ಟನ್.[ನಸೀಬು ಖೋತಾ ಹೈಟಿ ಜನರ ಪಾಲಿಗೆ ಇದೆಲ್ಲಿಯ ಚಂಡಮಾರುತ?]

ಈ ದುರಂತದಿಂದ ಜನರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಎಷ್ಟು ಬೇಗ ನೆರವು ಮಾಡಬಹುದು ಅಷ್ಟು ಶೀಘ್ರವಾಗಿ ಮಾಡಬೇಕು. ದಾನಿಗಳು ಸರಕಾರದ ಮೂಲಕವೇ ನೆರವು ಮಾಡಬೇಕು ಅಂದುಕೊಂಡರೆ ತುಂಬ ತಡವಾಗುತ್ತದೆ ಎನ್ನುತ್ತಾರೆ ಅವರು.
ಈ ಮಧ್ಯೆ ಕಾಲರಾ ಭೀತಿ ಎದುರಾಗಿದೆ. ಈ ಹಿಂದೆ ಭೂಕಂಪವಾದಾಗಲೂ ಹೈಟಿಯಲ್ಲಿ ಇದೇ ರೀತಿ ಸಮಸ್ಯೆ ಎದುರಾಗಿತ್ತು. ಈಗಾಗಲೇ ಮೂರು ಕಾಲರಾ ಪ್ರಕರಣಗಳು ಪತ್ತೆಯಾಗಿವೆ ಎಂದು ಸಂಸ್ಥೆಯೊಂದು ತಿಳಿಸಿದೆ. ಇಲ್ಲಿ ಕೆಲಸ ಮಾಡುತ್ತಿರುವ ಅಂತರರಾಷ್ತ್ರೀಯ ಸಂಸ್ಥೆಯೊಂದರ ಪ್ರಕಾರ ಈ ವರ್ಷ 26 ಸಾವಿರ ಕಾಲರಾ ಪ್ರಕರಣಗಳು ಹೈಟಿಯಲ್ಲಿ ಕಂಡುಬಂದಿವೆ.[ಹರಿಕೇನ್ ಚಂಡಮಾರುತ ಹೊಡೆತಕ್ಕೆ ಹೈಟಿ ದೇಶದಲ್ಲಿ 280 ಸಾವು]
ಇನ್ನು ವಿಶ್ವಸಂಸ್ಥೆ ಪ್ರಕಾರ, 10 ಲಕ್ಷಕ್ಕೂ ಹೆಚ್ಚು ಮಂದಿ ಚಂಡಮಾರುತದಿಂದ ತೊಂದರೆಗೀಡಾಗಿದ್ದಾರೆ. ಅದರಲ್ಲಿ ಮೂರನೇ ಒಂದು ಭಾಗದಷ್ಟು ಜನಕ್ಕೆ ಮನವೀಯ ನೆರವಿನ ಅಗತ್ಯವಿದೆ. ವಿಶ್ವಸಂಸ್ಥೆಯ ಡಿ ಟರಂಟೋ ಹೇಳುವಂತೆ, ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ತುರ್ತು ಆಶ್ರಯ ತಾಣಗಳಲ್ಲಿದ್ದಾರೆ.
ನಾಗರಿಕ ರಕ್ಷಣಾ ಪಡೆಯ ಲೆಕ್ಕಾಚಾರದ ಪ್ರಕಾರ ದೇಶದಾದ್ಯಂತ ಇಪ್ಪತ್ತೇಳು ಸಾವಿರ ಜನರಿಗೆ ತೊಂದರೆಯಾಗಿದೆ. ಆ ಪೈಕಿ ದಕ್ಷಿಣ ಭಾಗದಲ್ಲೇ 20 ಸಾವಿರ ಮನೆಗಳಿಗೆ ಹಾನಿಯಾಗಿದೆ. ನೂರಾರು ಮಂದಿಗೆ ಗಾಯಗಳಾಗಿವೆ. ಇನ್ನು ದೇಶದಲ್ಲೇ ಅತಿ ಹೆಚ್ಚು ಬಾಳೆಹಣ್ಣು ಬೆಳೆಯುವ ಪ್ರದೇಶದಲ್ಲಿ ಶೇ 80ರಷ್ಟು ಬೆಳೆಹಾನಿಯಾಗಿದೆ. ಗಾಳಿ-ಪ್ರವಾಹದಿಂದ ಇಪ್ಪತ್ತು ಸಾವಿರ ಬಾಳೆಹಣ್ಣು ಬೆಳೆಗಾರರ ಕುಟುಂಬ ರಸ್ತೆಗೆ ಬಂದಿದೆ.
ಜೆರೆಮಿ, ಲೆಸ್ ಕೆಯ್ಸೆಯಲ್ಲಿ ಅತಿ ಹೆಚ್ಚಿನ ಹಾನಿಯಾಗಿದೆ. ಜನರು ಮನೆಗಳನ್ನು, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಹೈಟಿ ದೇಶದ ದಕ್ಷಿಣ ಭಾಗದ ಕೃಷಿ ಭೂಮಿಗಳು ಪ್ರವಾಹದಿಂದ ಜಲಾವೃತವಾಗಿವೆ. ಇನ್ನು ಮುಂದೆ ದೇಶದ ಆಹಾರ ಉತ್ಪಾದನೆ ಹೇಗೆ ಎಂಬ ಬಗ್ಗೆ ಆತಂಕವಾಗಿದೆ ಎಂದು ಹರ್ವಿಲ್ ಚೆರುಬಿನ್ ಎಂಬುವರು ಆತಂಕ ವ್ಯಕ್ತಪಡಿಸಿದ್ದಾರೆ. ಬಹತೇಕ ಬೆಳೆಗಳು ಹಾಳಾಗಿವೆ. ಕೃಷಿ ಭೂಮಿಯು ಹೊಂಡಗಳಾಗಿವೆ. ಕಸ, ಸಮುದ್ರದ ನೀರಿನಿಂದ ತುಂಬಿಹೋಗಿದೆ ಎಂದು ಅವರು ಹೇಳುತ್ತಾರೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications