ಸೌದಿಯಿಂದ ಭಾರತೀಯ ಮನೆಗೆಲಸದವರಿಗೆ ಗುಡ್ ನ್ಯೂಸ್
ರಿಯಾದ್, ಡಿ. 9: ಈಚೆಗೆ ವಿದೇಶೀಯರಿಗೆ ಮನೆಯ ದಾರಿ ತೋರಿಸಿದ್ದ ಸೌದಿ ಅರೇಬಿಯಾ ಭಾರತದ ಕುರಿತು ಮೃದು ಧೋರಣೆ ತಾಳಿದೆ. ಭಾರತೀಯ ಮೂಲದವರನ್ನು ಸೌದಿ ಅರೇಬಿಯಾದಲ್ಲಿ ಮನೆಗೆಲಸಕ್ಕೆ ನೇಮಿಸಿಕೊಳ್ಳಲು ಸರ್ಕಾರವು ಒಪ್ಪಿಗೆ ನೀಡಿದೆ. ಇನ್ನು ಮುಂದೆ ಭಾರತ ಮೂಲದವರು ಮನೆಗೆಲಸಕ್ಕಾಗಿ ಸೌದಿಗೆ ನಿರಾತಂಕವಾಗಿ ತೆರಳಬಹುದು. [ಸೌದಿಯಲ್ಲೂ ಐಎಂ ನಿಷೇಧ]
ಈ ಕುರಿತು ಪಟ್ಟದ ರಾಜಕುಮಾರ ಸಲ್ಮಾನ್ ನೇತೃತ್ವದ ಸಚಿವರ ಸಮಿತಿಯು ನವದೆಹಲಿಯೊಂದಿಗೆ ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದಲ್ಲಿ ಮನೆ ಮಾಲೀಕರು ಹಾಗೂ ಕೆಲಸಗಾರರ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ ಎಂದು ಸೌದಿ ಅರೇಬಿಯಾದ ಹಜ್ ಹಾಗೂ ಹಂಗಾಮಿ ವಾರ್ತಾ ಸಚಿವ ಬಂದರ್ ಹಜ್ಜರ್ ತಿಳಿಸಿದ್ದಾರೆ. [ಭಾರತದ ಮೆಣಸಿನ ಕಾಯಿಗೆ ಸೌದಿಯಲ್ಲಿ ನಿಷೇಧ]

"ಎರಡೂ ದೇಶಗಳಲ್ಲಿ ಕೆಲಸಗಾರರ ನೇಮಕಾತಿ ಹಾಗೂ ನೇಮಕಾತಿಯ ವೆಚ್ಚ ನಿಯಂತ್ರಣದ ಕುರಿತು ಸ್ಪಷ್ಟ ನಿರ್ಧಾರ ತಳೆಯಲಾಗಿದೆ. ಈ ಒಪ್ಪಂದದ ಪ್ರಕಾರ ಮನೆಗೆಲಸಕ್ಕೆ ಬರುವವರು ಅಪರಾಧಿ ಹಿನ್ನೆಲೆ ಹೊಂದಿರಬಾರದು, ಮನೆಗೆಲಸದಲ್ಲಿ ತರಬೇತಿ ಹೊಂದಿರಬೇಕು, ದೇಶದ ಕಾನೂನು ಮತ್ತು ಸಂಪ್ರದಾಯಗಳನ್ನು ಹಾಗೂ ಔದ್ಯೋಗಿಕ ಒಪ್ಪಂದದ ನಿಯಮಗಳನ್ನು ಪಾಲಿಸಬೇಕು" ಎಂದು ಹಜ್ಜಾರ್ ತಿಳಿಸಿದ್ದಾರೆ. [ಸೌದಿಯಲ್ಲಿ ಮಂಡ್ಯದ ಮಾವಿಗೆ ಬೇಡಿಕೆ]
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications