ಬದುಕಿದವರಿಗೆ 'ಶ್ರದ್ಧಾಂಜಲಿ' ಅರ್ಪಿಸಿದ ಫೇಸ್ ಬುಕ್!
ಫೇಸ್ ಬುಕ್ ಎಷ್ಟೊಂದು ಚಟುವಟಿಕೆಯ ಆಗರವಾಗಿದೆಯೆಂದರೆ, ಸಕಲ ಜಗತ್ತಿನ ಸರ್ವ ಉಭಯಕುಶಲೋಪರಿ ಸಾಂಪ್ರತಗಳು, ವಿಚಾರ ವಿನಿಮಯಗಳು, ನೆಂಟಸ್ತನಗಳು, ಸ್ನೇಹಕೂಟಗಳು, ಶರಂಪರ ಜಗಳಗಳು, ಕವಿಗೋಷ್ಠಿಗಳು, ಪ್ರೇಮ ನಿವೇದನೆಗಳು ಇಲ್ಲಿಯೇ ನಡೆಯುತ್ತಿರುತ್ತವೆ.
ಸ್ಯಾನ್ ಫ್ರಾನ್ಸಿಸ್ಕೋ, ನವೆಂಬರ್ 12 : ಶುಕ್ರವಾರ ಫೇಸ್ ಬುಕ್ ಮಾಡಿದ ಪ್ರಮಾದದಿಂದಾಗಿ ಲಕ್ಷಾಂತರ ಜನ ಫೇಸ್ ಬುಕ್ಕಿನ ಸತ್ತವರ ಪಟ್ಟಿಯಲ್ಲಿ ಸೇರುವಂತಾಯಿತು!
ಸದಾಕಾಲ, ಆಗೊಮ್ಮೆಈಗೊಮ್ಮೆ ಫೇಸ್ ಬುಕ್ಕಿನಲ್ಲಿ ಏನು ಬಂದಿದೆ ಎಂದು ಚೆಕ್ ಮಾಡುವವರಿಗೆ ಶುಕ್ರವಾರ ಆಘಾತ ಕಾದಿತ್ತು. ಸುಮಾರು ಇಪ್ಪತ್ತು ಲಕ್ಷದಷ್ಟು 'ಬದುಕಿರುವ' ಫೇಸ್ ಬುಕ್ ಬಳಕೆದಾರರಿಗೆ ಫೇಸ್ ಬುಕ್ 'ಶ್ರದ್ಧಾಂಜಲಿ' ಅರ್ಪಿಸಿತ್ತು.
ನಂತರ "ಇದೊಂದು ದೊಡ್ಡ ಪ್ರಮಾದ. ಈಗ ಈ ತಪ್ಪನ್ನು ಸರಿಪಡಿಸಲಾಗಿದೆ" ಎಂದು ಫೇಸ್ ಬುಕ್ಕಿನ ವಕ್ತಾರ ಹೇಳಿಕೆ ನೀಡಿದ್ದಾರೆ. ಈ ತಪ್ಪಿಗಾಗಿ ಫೇಸ್ ಬುಕ್ ಬಳಕೆದಾರರ ಕ್ಷಮೆಯನ್ನೂ ಸಂಸ್ಥೆ ಕೇಳಿದೆ. ತಮಾಷೆ ಅಂದ್ರೆ, ಫೇಸ್ ಬುಕ್ ಸಹಸಂಸ್ಥಾಪಕ ಮತ್ತು ಸಿಇಓ ಮಾರ್ಕ್ ಜೂಕರ್ಬರ್ಗ್ ಅವರ ಹೆಸರು ಕೂಡ ಈ ಪಟ್ಟಿಯಲ್ಲಿ ಸೇರಿತ್ತು. [ಇದೇನ ಫೇಸಬುಕ್ಕೋ, ಹಳೆ ಬಸ್ ಸ್ಟ್ಯಾಂಡ್ ಗ್ವಾಡಿನೋ?]

ಫೇಸ್ ಬುಕ್ ಲೈವ್ ಪುಟದಲ್ಲಿ ಬಳಕೆದಾರರು ತಮ್ಮ ವಿಡಿಯೋಗಳನ್ನು ನೇರವಾಗಿ ಪ್ರಸಾರ ಮಾಡಬಹುದು. ಈ ತಾರಣದಲ್ಲಿಯೇ ಫೇಸ್ ಬುಕ್ ಬದುಕಿದವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದು. "ಛೆ, ಅದೇ ಸಮಯದಲ್ಲಿ ನಾನು ಫೇಸ್ ಬುಕ್ ಲೈವ್ ಬಳಸಬೇಕಾಗಿತ್ತು. ನಾನು ಹೇಗೆ ಸತ್ತಿದ್ದೇನೆಂದು ಲೈವ್ ಆಗಿಯೇ ತಿಳಿಸಬಹುದಿತ್ತು" ಎಂದು ಸರ್ಚ್ ಇಂಜಿನ್ ಲ್ಯಾಂಡ್ ಎಡಿಟರ್ ಡ್ಯಾನಿ ಸಲ್ಲಿವಾನ್ ಟ್ವಿಟ್ಟರಲ್ಲಿ ಅಪಹಾಸ್ಯ ಮಾಡಿದ್ದಾರೆ.
ಫೇಸ್ ಬುಕ್ ಎಷ್ಟೊಂದು ಚಟುವಟಿಕೆಯ ಆಗರವಾಗಿದೆಯೆಂದರೆ, ಸಕಲ ಜಗತ್ತಿನ ಸರ್ವ ಉಭಯಕುಶಲೋಪರಿ ಸಾಂಪ್ರತಗಳು, ವಿಚಾರ ವಿನಿಮಯಗಳು, ನೆಂಟಸ್ತನಗಳು, ಸ್ನೇಹಕೂಟಗಳು, ಶರಂಪರ ಜಗಳಗಳು, ಕವಿಗೋಷ್ಠಿಗಳು, ಪ್ರೇಮ ನಿವೇದನೆಗಳು ಎಲ್ಲವೂ ಇಲ್ಲಿಯೇ ನಡೆಯುತ್ತಿರುತ್ತವೆ. ಇದು ಯಾವ ಪರಿ ಅಡಿಕ್ಟ್ ಆಗಿದೆಯೆಂದರೆ, ಫೇಸ್ ಬುಕ್ ನಲ್ಲಿ ಒಂದು ಬಾರಿಯಾದರೂ ಇಣುಕದಿರುವುದು ಎಂಥವರಿಗೂ ಬಲುಕಷ್ಟ. ಅಂಥದರಲ್ಲಿ, ನೀವು ಸತ್ತಿದ್ದೀರಿ ಎಂದು ಶ್ರದ್ಧಾಂಜಲಿಯನ್ನೇ ಅರ್ಪಿಸಿಬಿಟ್ಟರೆ ಹೇಗೆ?
ಫೇಸ್ ಬುಕ್ ಸಹವಾಸ ಸಾಕಾಗಿದೆ, ಕೆಲವೇ ಕ್ಷಣಗಳಲ್ಲಿ ಫೇಸ್ ಬುಕ್ಕಿಗೆ ಗುಡ್ ಬೈ ಹೇಳಲಿದ್ದೇನೆ, ಇನ್ನೊಂದು ತಿಂಗಳಗಳ ಕಾಲ ಫೇಸ್ ಬುಕ್ಕನ್ನು ಇಣುಕಿಯೂ ನೋಡುವುದಿಲ್ಲ ಎಂದು ಶಪಥ ಮಾಡುವ ಶೂರಾಧಿಶೂರರು ಏನು ನಡೆಯುತ್ತಿದೆ ಇಲ್ಲಿ ಅಂತ ಕುತೂಹಲಕ್ಕಾದರೂ ಗಪ್ ಚುಪ್ಪಾಗಿ ಒಂದು ವಿಸಿಟ್ ಹಾಕಿ ಹೋಗಿರುತ್ತಾರೆ. ಫೇಸ್ ಬುಕ್ ಆಪರಿ ಜನರನ್ನು ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ, ಪ್ರಶಾಂತ್ ಅಡೂರ ಅವರು ಬರೆದಿರುವ "ಫೇಸ್ ಬುಕ್ ಅಕೌಂಟಿಗೆ ಎರಡು ನಿಮಿಷದ ಮೌನ!" ಎಂಬ ಲೇಖನವನ್ನು ನೀವೆಲ್ಲರೂ ಓದಲೇಬೇಕು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications