ಎಚ್ಚರ... ರೋಗಿ ಸತ್ತರೂ ಎಬೋಲಾ ವೈರಸ್ ಸಾಯಲ್ಲ
ವಾಷಿಂಗ್ಟನ್, ಫೆ. 14: ಇಂದು ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ರೋಗ ಎಬೋಲಾ. ವಿಜ್ಞಾನ ಎಷ್ಟೇ ಮುಂದುವರಿದರೂ ಎಬೋಲಾ ವೈರಸ್ ನಿಯಂತ್ರಿಸುವ ಬಗೆ ಅರಿಯಲು ವಿಜ್ಞಾನಿಗಳಿಗೆ ಇಂದಿಗೂ ಸಾಧ್ಯವಾಗಿಲ್ಲ. ಎಬೋಲಾ ರೋಗಿ ಎಂದರೆ ವೈದ್ಯರೂ ದೂರ ಓಡುತ್ತಾರೆ. ಈಗ ಬಯಲಾಗಿರುವ ವಿಷಯ ಮತ್ತೂ ಆತಂಕ ಮೂಡಿಸಿದೆ.
ಏನೆಂದರೆ, ಎಬೋಲಾ ಪೀಡಿತ ವ್ಯಕ್ತಿ ಅಥವಾ ಪ್ರಾಣಿ ಮೃತಪಟ್ಟು ಒಂದು ವಾರಗಳವರೆಗೂ ದೇಹದಲ್ಲಿ ಎಬೋಲಾ ರೋಗಾಣು ಜೀವಂತವಾಗಿಯೇ ಇರುತ್ತದೆ. ಈ ದೇಹದ ಹತ್ತಿರ ಹೋದ ವ್ಯಕ್ತಿಗೆ ಸುಲಭವಾಗಿ ಹರಡುತ್ತದೆ. [ಎಬೋಲಾಕ್ಕೆ ಆಯುರ್ವೇದ ಚಿಕಿತ್ಸೆ]

ಅಮೆರಿಕದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್ಐಎಚ್)ನ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಈ ಆತಂಕಕಾರಿ ವಿಷಯ ಬಯಲಾಗಿದೆ. ತಮ್ಮ ಅಧ್ಯಯನಕ್ಕಾಗಿ ವಿಜ್ಞಾನಿಗಳು ಎಬೋಲಾ ಪೀಡಿತ ಮಂಗವೊಂದನ್ನು ಬಳಸಿಕೊಂಡಿದ್ದರು. ಈ ಮಂಗ ಸತ್ತು ಏಳು ದಿನಗಳಾದರೂ ಎಬೋಲಾ ವೈರಸ್ ದೇಹದಲ್ಲಿ ಜೀವಂತವಾಗಿಯೇ ಇತ್ತು. ಜೊತೆಗೆ ಯಾವುದೇ ಪರಿಣಾಮ ಬೀರದ ವೈರಸ್ ಆರ್ಎನ್ಎ ಕೂಡ 70 ದಿನಗಳವರೆಗೆ ಜೀವಂತವಾಗಿರುವುದು ಕಂಡುಬಂದಿತು. [ದೆಹಲಿಯಲ್ಲಿ ಮೊದಲ ಎಬೋಲಾ ಪ್ರಕರಣ]
ವಿಜ್ಞಾನಿಗಳ ಪ್ರಕಾರ ಗೋರಿಲ್ಲಾ ಹಾಗೂ ಮಂಗದಂತಹ ಸಸ್ತನಿಗಳಲ್ಲಿ ಎಬೋಲಾ ಸತ್ತ ಏಳು ದಿನಗಳವರೆಗೂ ಜೀವಂತವಾಗಿರುತ್ತದೆ. ಆದರೆ, ಮಾನವರ ಕುರಿತು ಯಾವುದೇ ದೃಢೀಕರಣ ನೀಡಿಲ್ಲ. ಅಮೆರಿಕದ Emerging Infectious Diseases ಎಂಬ ಜರ್ನಲ್ನಲ್ಲಿ ಈ ಲೇಖನ ಪ್ರಕಟವಾಗಿದೆ. [ಎಬೋಲಾ ಹತ್ತಿಕ್ಕಲಾಗದೆ ಕೈಚೆಲ್ಲಿದ ವಿಶ್ವಸಂಸ್ಥೆ]
ಜಗತ್ತಿನಲ್ಲಿ ಇಲ್ಲಿಯವರೆಗೆ 10 ಸಾವಿರಕ್ಕಿಂತ ಹೆಚ್ಚು ಜನರಿಗೆ ಎಬೋಲಾ ಸೋಂಕು ತಾಗಿದೆ. 5 ಸಾವಿರಕ್ಕಿಂತ ಹೆಚ್ಚು ಜನರು ಚಿಕಿತ್ಸೆ ಫಲಿಸದೆ ಬಲಿಯಾಗಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications