Myanmar Earthquake: ಭೂಕಂಪನ ಪರಿಣಾಮ ಪತ್ತೆಯಾಯ್ತು ರಾಜಮನೆತನದ ಪರಂಪರೆ!
ಭೂಕಂಪನ ಸಂಭವಿಸಿದರೆ ಎಲ್ಲವೂ ಸರ್ವನಾಶವಾಗಿ ಹೋಗುತ್ತದೆ, ಜನರು ಜೀವ ಉಳಿಸಿ ಎಂದು ಬೇಡುವ ಪರಿಸ್ಥಿತಿ ಬರುತ್ತದೆ. ಇನ್ನು ಕಟ್ಟಡಗಳ ಕಥೆ ಸರ್ವನಾಶ ಆಗೋದು ಪಕ್ಕಾ. ಅದೇ ರೀತಿ ಮ್ಯಾನ್ಮಾರ್ ದೇಶದಲ್ಲೂ ಭೀಕರ ಭೂಕಂಪನ 3,600ಕ್ಕೂ ಹೆಚ್ಚು ಜನರ ಜೀವ ಬಲಿ ಪಡೆದಿದೆ. ಆದರೆ ಇದರ ಜೊತೆಯಲ್ಲೆ ಮತ್ತೊಂದು ಪವಾಡ ಕೂಡ ಮ್ಯಾನ್ಮಾರ್ ದೇಶದಲ್ಲಿ ಇದೀಗ ನಡೆದು ಹೋಗಿದೆ. ಹಾಗಾದರೆ ಭೂಕಂಪನದ ನಡುವೆ ಏನದು ಪವಾಡ? ಮುಂದೆ ಓದಿ.
ಇದೇ ಮಾರ್ಚ್ 28ರ ಶುಕ್ರವಾರ ಭೀಕರ ಭೂಕಂಪನ ಸಂಭವಿಸಿ, ಈಗಾಗಲೇ 3,600ಕ್ಕೂ ಹೆಚ್ಚು ಜನರು ಮ್ಯಾನ್ಮಾರ್ ದೇಶದಲ್ಲಿ ಬಲಿಯಾಗಿದ್ದಾರೆ. ಹೀಗಾಗಿ ಮ್ಯಾನ್ಮಾರ್ ದೇಶದಲ್ಲಿ ಈವರೆಗೂ ಭಾರತದ ಕಡೆಯಿಂದ ಸಾಕಷ್ಟು ಸಹಾಯ ಮಾಡಲಾಗಿದೆ. ಅಕ್ಕಿ, ಅಡುಗೆ ಎಣ್ಣೆ, ನೂಡಲ್ಸ್ ಸೇರಿದಂತೆ ಅಗತ್ಯ ವಸ್ತುಗಳನ್ನ ಪೂರೈಕೆ ಮಾಡಲಾಗಿದೆ. ಭೂಕಂಪನದಿಂದ ನರಳಿರುವ ಜನ ಈಗಿನ್ನೂ ಸುಧಾರಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲೇ ಪವಾಡ ಒಂದು ಮ್ಯಾನ್ಮಾರ್ ದೇಶದಲ್ಲಿ ನಡೆದು ಹೋಗಿದೆ. ಜನರು ಅದನ್ನ ಕಂಡು ಆಶ್ಚರ್ಯ ಪಡುವಂತೆ ಆಗಿದೆ.

ಕೊನ್ಬಾಂಗ್ ರಾಜವಂಶದ ವಾಸ್ತುಶಿಲ್ಪ ಪತ್ತೆ
ಮ್ಯಾನ್ಮಾರ್ ದೇಶ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯ ಭೂಕಂಪನ ಮಾರ್ಚ್ 28ರ ಶುಕ್ರವಾರ ಅಪ್ಪಳಿಸಿತ್ತು. ಮ್ಯಾನ್ಮಾರ್ ಮಧ್ಯ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆ ಭೂಕಂಪನ ಸಂಭವಿಸಿ ಘೋರ ದುರಂತ ನಡೆದು ಹೋಗಿತ್ತು. ಹೀಗೆ ಸಂಭವಿಸಿದ್ದ ಭೂಕಂಪನ ಇದೀಗ ಮ್ಯಾನ್ಮಾರ್ನ ರಾಜವಂಶಕ್ಕೆ ಸೇರಿದ ಪ್ರಾಚೀನ ಶಿಲ್ಪಕಲೆಯನ್ನು ಜಗತ್ತಿನ ಎದುರಲ್ಲಿ ತೆರೆದಿಟ್ಟಿದೆ. ಕೊನ್ಬಾಂಗ್ ರಾಜವಂಶಕ್ಕೆ ಸೇರಿದ ಪ್ರಾಚೀನ ಶಿಲ್ಪಕಲೆ ಅವಶೇಷ ಇದೀಗ ಟಾಡಾ-ಯು ಟೌನ್ಶಿಪ್ನಲ್ಲಿ ಪತ್ತೆಯಾಗಿದೆ.
2009ರಲ್ಲೇ ಮೊದಲ ಬಾರಿಗೆ ಪತ್ತೆ!
ಹೀಗೆ ಕೊನ್ಬಾಂಗ್ ರಾಜವಂಶಕ್ಕೆ ಸೇರಿದ ಪ್ರಾಚೀನ ಶಿಲ್ಪಕಲೆಯ ಅವಶೇಷ ಪತ್ತೆಯಾದ ಸುದ್ದಿ ತಿಳಿದ ನಂತರ, ಪುರಾತತ್ವ ಇಲಾಖೆ ಮತ್ತು ರಾಷ್ಟ್ರೀಯ ವಸ್ತುಸಂಗ್ರಹಾಲಯ ಅಧಿಕಾರಿಗಳು ತಕ್ಷಣ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊನ್ಬಾಂಗ್ ಯುಗದಲ್ಲಿ ರಾಜಮನೆತನದ ನೀರು ಸಂಗ್ರಹ ತಾಣ ಎನ್ನಲಾಗಿದೆ. ತಕ್ಷಣವೇ ಈ ಪ್ರದೇಶವನ್ನು ರಕ್ಷಣೆ ಮಾಡಿದ್ದಾರೆ ಪುರಾತತ್ವ ಇಲಾಖೆ ಮತ್ತು ರಾಷ್ಟ್ರೀಯ ವಸ್ತುಸಂಗ್ರಹಾಲಯದ ಅಧಿಕಾರಿಗಳು.
ತುಂಬಾ ವಿಶಿಷ್ಟವಾದ ಈ ರಚನೆ ಗಮನ ಸೆಳೆದಿದ್ದು, ಹೀಗಾಗಿ ಹೆಚ್ಚಿನ ಅಧ್ಯಯನಕ್ಕೆ ಆದೇಶ ನೀಡಲಾಗಿದೆ. 2009ರ ಆರಂಭದಲ್ಲಿಯೇ ಸ್ಥಳೀಯರು ಇಟ್ಟಿಗೆ ತಯಾರಿಕೆ ಮಾಡುವಾಗ ಕೆಲವು ವಿಶಿಷ್ಟವಾದ ವಸ್ತುಗಳ ಗುರುತನ್ನು ಪತ್ತೆ ಹಚ್ಚಿದ್ದರಂತೆ. ಆ ಸಮಯದಲ್ಲಿ ಹೆಚ್ಚಿನ ಆದ್ಯತೆ ಸಿಗದ ಹಿನ್ನೆಲೆ ಮಾಹಿತಿ ತಣ್ಣಗಾಗಿತ್ತು. ಆದರೆ ಇದೀಗ ದಿಢೀರ್ ಸಂಭವಿಸಿದ ಭೀಕರ ಭೂಕಂಪನ ಎಲ್ಲವನ್ನೂ ಹೊರಗೆ ಹಾಕಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications