Taliban Fight: ಪಾಕಿಸ್ತಾನದ ಬುಡಕ್ಕೆ ಮತ್ತೊಮ್ಮೆ ಬಾಂಬ್ ಇಟ್ಟ ಅಫ್ಘಾನಿಸ್ತಾನ ಆರ್ಮಿ ತಾಲಿಬಾನ್!
ಪಾಕಿಸ್ತಾನ ಹೀನ ಬುದ್ಧಿ ತೋರಿಸುತ್ತಾ, ಅಕ್ಕಪಕ್ಕ ಇರುವ ಎಲ್ಲಾ ದೇಶಗಳನ್ನೂ ಎದುರು ಹಾಕಿಕೊಂಡು ಒದ್ದಾಡುತ್ತಿದೆ. ಭಾರತದ ಜೊತೆಗೆ ಕಿರಿಕ್ ಮಾಡಿಕೊಂಡು ಈಗಾಗಲೇ ಸರಿಯಾಗಿ ಏಟು ತಿಂದಿರುವ ಪಾಪಿ ಪಾಕಿಸ್ತಾನ ಇದೀಗ ಅಫ್ಘಾನಿಸ್ತಾನ ಜೊತೆಯಲ್ಲೂ ಬಡಿದಾಡುತ್ತಾ ದೊಡ್ಡ ಅವಾಂತರ ಸೃಷ್ಟಿಸುತ್ತಿದೆ. ಇದರ ಪರಿಣಾಮ ತಾಲಿಬಾನ್ ಮತ್ತೊಮ್ಮೆ ಪಾಕಿಸ್ತಾನದ ಹೆಣ ಬೀಳಿಸಲು ಮುಂದೆ ನುಗ್ಗಿದ್ದು, ಗಡಿ ಭಾಗದಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ.
ಕೆಲವು ದಿನಗಳ ಹಿಂದಷ್ಟೇ ವಿವಾದಿತ ಪ್ರದೇಶ ಡ್ಯುರಾಂಡ್ ರೇಖೆ ಉದ್ದಕ್ಕೂ ದಿಢೀರ್ ಪಾಕಿಸ್ತಾನ ಸೇನೆಯ ವಿರುದ್ಧ ಭೀಕರ ದಾಳಿ ನಡೆಸಿದ್ದ ತಾಲಿಬಾನ್, ಪಾಪಿ ಪಾಕಿಸ್ತಾನ ಪಡೆಗೆ ಸರಿಯಾಗಿ ಪಾಠ ಕಲಿಸಿತ್ತು. ನಂತರ ಸಂಧಾನ ನಡೆದು ದಿಢೀರ್ ಯುದ್ಧ ನಿಲ್ಲಿಸಲಾಗಿತ್ತು. 58 ಪಾಕಿಗಳ ಹೆಣ ಕೆಡವಿದ್ದ ತಾಲಿಬಾನ್ ಖಡಕ್ ಸಂದೇಶ ರವಾನಿಸಿತ್ತು. ಆದರೆ ಇಷ್ಟೆಲ್ಲಾ ನಡೆದ ನಂತರ ಕೂಡ ಸುಮ್ಮನೆ ಕೂರದ ಪಾಕಿಸ್ತಾನ ಮತ್ತೆ ಕಿರಿಕ್ ಮಾಡಿದ್ದು, ಅಫ್ಘಾನಿಸ್ತಾನ ಕೊಟ್ಟ ಏಟಿಗೆ ನಲುಗಿ ಹೋಗಿ ಶರಣಾಗಿಬಿಟ್ಟಿದೆ.

ಪಾಕಿಸ್ತಾನದ ಕೆಪಾಸಿಟಿ ಇಷ್ಟೇನಾ?
ಹೌದು, ಡ್ಯುರಾಂಡ್ ರೇಖೆ ಬಳಿ ಕೆಲವು ದಿನಗಳ ಹಿಂದೆ ಬಡಿದಾಡಿದ್ದ ಪಾಕಿಸ್ತಾನ ಈಗ ಕಂದಹಾರ್ ಬಳಿ ಕೂಡ ಫೈಟ್ ಮಾಡಿದೆ. ಅಕ್ಟೋಬರ್ 15 ಬುಧವಾರ ಬೆಳ್ಳಂಬೆಳಗ್ಗೆ ಶುರುವಾಗಿದ್ದ ಸಂಘರ್ಷದಲ್ಲಿ ಭಾರಿ ಹಿಂಸಾಚಾರ ಕೂಡ ನಡೆದು ಹೋಗಿದ್ದು, ಹತ್ತಾರು ಜನರ ಜೀವ ಹೋಗಿದೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲದೆ, ತಾಲಿಬಾನ್ ಕೊಟ್ಟ ಏಟಿಗೆ ನಲುಗಿ ಹೋದ ಪಾಕಿಸ್ತಾನ ಕೇವಲ 15 ನಿಮಿಷದಲ್ಲೇ ಸುಸ್ತಾಗಿ ಶರಾಗತಿ ಒಪ್ಪಿಕೊಂಡಿದೆ. ಪಾಕಿಸ್ತಾನದ ಕೆಪಾಸಿಟಿ ಇಷ್ಟೇನಾ? ಅಂತಾ ಇದೀಗ ಸೋಷಿಯಲ್ ಮೀಡಿಯಾ ತುಂಬಾ ಟ್ರೋಲ್ ಮಾಡಲಾಗುತ್ತಿದೆ.
ಶತ್ರುಗಳಿಗೆ ಸರಿಯಾದ ಉತ್ತರ ನೀಡಿದ ತಾಲಿಬಾನ್!
ಜಗತ್ತಿನಲ್ಲಿ ಯಾರನ್ನು ಬೇಕಾದರೂ ನಂಬಬಹುದು, ಆದರೆ ಪಾಕಿಸ್ತಾನವನ್ನು ಇಡೀ ಜಗತ್ತಿನಲ್ಲಿ ಯಾರು ಕೂಡ ನಂಬಲು ಸಿದ್ಧವಿಲ್ಲ. ಚೀನಾ ಕೂಡ ಈ ವಿಚಾರದಲ್ಲಿ ಪಾಕಿಸ್ತಾನ ಎಂಬ ನರಿ ಬುದ್ಧಿಯ ದೇಶವನ್ನ ನಂಬಲಾರದು. ತಿಂದ ಮನೆಗೇ ಬೆಂಕಿ ಇಡುವ ಬುದ್ಧಿ ಪಾಕಿಸ್ತಾನ ರಾಜಕಾರಣಿಗಳದ್ದು, ಹೀಗೆ ಪಾಕಿಸ್ತಾನ ತನ್ನ ನೆರೆ ದೇಶಗಳ ಜೊತೆ ಸುಖಾಸುಮ್ಮನೆ ಕಿರಿಕ್ ಮಾಡಿ ಫೈಟ್ ಮಾಡುವುದು ಮಾಮೂಲಿ. ಅದರಲ್ಲೂ ಇದೇ ರೀತಿ ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ತಾನ ನೆಲದ ಮೇಲೂ ದಾಳಿ ಮಾಡಿ, ಕಿರಿಕ್ ಮಾಡಿತ್ತು ಪಾಪಿ ಪಾಕ್. ಇದೀಗ ಅದಕ್ಕೆಲ್ಲಾ ತಕ್ಕ ಉತ್ತರ ನೀಡಿದೆ ತಾಲಿಬಾನ್ ಪಡೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications