H1B Visa: ಭಾರತೀಯರಿಗೆ ಬೇಸರದ ನಡುವೆ ಖುಷಿ ಸುದ್ದಿ ನೀಡಿದ ಡೊನಾಲ್ಡ್ ಟ್ರಂಪ್!
ಅಮೆರಿಕ ಮತ್ತು ಭಾರತದ ಸಂಬಂಧ ಹಾಳಾಗಿ ಹೋಗುವ ಜೊತೆಗೆ ಜಾಗತಿಕ ಮಟ್ಟದಲ್ಲೂ ಹೊಸ, ಹೊಸ ಚಿಂತನೆ ಆರಂಭವಾಗಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಈಗ ಭಾರತದ ವಿರುದ್ಧ ಬೇಕು, ಬೇಕು ಅಂತಲೇ ಹೆಚ್ಚಿನ ತೆರಿಗೆ ಹೇರಿಕೆ ಮಾಡುತ್ತಾ & ಮತ್ತೊಂದು ಕಡೆ ಭಾರತೀಯರ ವೀಸಾ ಪಡೆಯುವ ಹಕ್ಕಿಗೂ ಕಲ್ಲು ಹಾಕುತ್ತಿದ್ದಾರೆ ಅನ್ನೋ ಆರೋಪ ಇದೆ. ಹೀಗಿದ್ದಾಗ ಮತ್ತೊಂದು ದೊಡ್ಡ ಹೋರಾಟಕ್ಕೆ ಅಮೆರಿಕ ಸಜ್ಜಾಗಿತ್ತು, ಆದರೆ ಟ್ರಂಪ್ ಆಡಳಿತ ಇದೀಗ ತನ್ನ ವರಸೆ ಬದಲಿಸಿದೆ.
ಹೌದು, ಬಹುತೇಕ ಭಾರತೀಯರೇ ಬಳಸುವ ಎಚ್1ಬಿ ವೀಸಾ ನಿಯಮದಲ್ಲಿ ಭಾರಿ ದೊಡ್ಡ ಚೇಂಜ್ ಮಾಡಿದ್ದಾರೆ ಇದೇ ಡೊನಾಲ್ಡ್ ಟ್ರಂಪ್. ಭಾರತ ಮೂಲದ ಕೋಟ್ಯಂತರ ಜನರಿಗೆ, ಅಮೆರಿಕ ಎಂಬ ಕನಸಿನ ಲೋಕದಲ್ಲಿ ಕೆಲಸ ಮಾಡಲು ಸಹಾಯ ಮಾಡಿದ್ದು ಇದೇ ಎಚ್1ಬಿ ವೀಸಾ ನಿಯಮ. ಹೀಗೆ ಭಾರತೀಯರಿಗೆ ಸಹಾಯ ಮಾಡುತ್ತಿದ್ದ ಎಚ್1ಬಿ ವೀಸಾ ಇನ್ನುಮುಂದೆ ಯಾವುದೇ ಕಾರಣಕ್ಕೆ ನಮ್ಮ ಭಾರತ ಮೂಲದವರಿಗೆ ಸುಲಭವಾಗಿ ಸಿಗದಂತೆ ಮಾಡಿದ್ದಾರೆ ಟ್ರಂಪ್. ಮತ್ತೊಂದು ಕಡೆ ಭಾರತೀಯರು ಈಗಾಗಲೇ ಪಡೆದಿರುವ ಎಚ್1ಬಿ ವೀಸಾ ಮೇಲೆ ಕೂಡ ಹೆಚ್ಚಿನ ತೆರಿಗೆ ಹಾಕುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇದೀಗ ಅದಕ್ಕೆ ಟ್ರಂಪ್ ಸರ್ಕಾರದಿಂದಲೇ ಸ್ಪಷ್ಟನೆ ಸಿಕ್ಕಿದೆ...

ಭಾರತೀಯರಿಗೆ ಬೇಸರದ ನಡುವೆ ನೆಮ್ಮದಿ!
ಕೆಲಸಕ್ಕೆ ಪಡೆಯುವ ವೀಸಾ ಅಂತಾನೇ ಕರೆಸಿಕೊಳ್ಳುವ ಎಚ್1ಬಿ ವೀಸಾ ಮೇಲೆ ಭರ್ಜರಿ 1,00,000 ಯುಎಸ್ ಡಾಲರ್ ಅಂದ್ರೆ ಸುಮಾರು 88,00,000 ರೂಪಾಯಿ ಮೀರಿ ಶುಲ್ಕ ವಿಧಿಸುವ ನಿರ್ಧಾರವನ್ನು ಟ್ರಂಪ್ ಆಡಳಿತ ಕೈಗೊಂಡಿತ್ತು. ಅಮೆರಿಕ ಅಧ್ಯಕ್ಷ ಟ್ರಂಪ್ ಈ ಯೋಜನೆಗೆ ಸಹಿ ಹಾಕಿದ ನಂತರವೇ ದೊಡ್ಡ ಗಲಾಟೆ ಶುರುವಾಗಿತ್ತು. ಅಲ್ಲದೆ ಅಮೆರಿಕದ ಈ ರೀತಿಯ ವರ್ತನೆ ಬಗ್ಗೆ ಭಾರಿ ಚರ್ಚೆಯೂ ಶುರುವಾಗಿತ್ತು. ಹೀಗಿದ್ದಾಗಲೇ ಭಾರತೀಯರಿಗೆ ಭರ್ಜರಿ ಸುದ್ದಿಯನ್ನ ನೀಡಿದೆ ಟ್ರಂಪ್ ಸರ್ಕಾರ.
ಹಳೆಯ ವೀಸಾ ಇದ್ದವರಿಗೆ ಇಲ್ಲ ಟೆನ್ಷನ್!
ಹೌದು, ಈಗ ಟ್ರಂಪ್ ಆಡಳಿತದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಎಚ್1ಬಿ ವೀಸಾ ಮೇಲೆ ಭರ್ಜರಿ 1,00,000 ಯುಎಸ್ ಡಾಲರ್ ಹೇರಿಕೆ ಮಾಡಿರುವುದು ಹೊಸ ವೀಸಾಗಳಿಗೆ ಮಾತ್ರ. ಆದರೆ ಈಗಾಗಲೇ ತೆಗೆದುಕೊಂಡ ವೀಸಾಗಳಿಗೆ ಇದು ಅನ್ವಯ ಆಗಲ್ಲ ಎಂದು ತಿಳಿಸಲಾಗಿದೆ. ಈ ಮೂಲಕ ಲಕ್ಷ ಲಕ್ಷ ಭಾರತೀಯರಿಗೆ ಈಗ ಭರ್ಜರಿ ಸುದ್ದಿ ಸಿಕ್ಕಂತೆ ಆಗಿದ್ದು, ಈಗಾಗಲೇ ಸುಮಾರು ಅರ್ಧ ಕೋಟಿಗೂ ಹೆಚ್ಚು ಭಾರತೀಯರು ಅಮೆರಿಕದಲ್ಲಿ ಜೀವನ ಕಂಡುಕೊಂಡಿದ್ದಾರೆ. ಹೀಗಾಗಿ ಟ್ರಂಪ್ ಸರ್ಕಾರದಿಂದ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ? ಅನ್ನೋದು ಭಾರಿ ಕುತೂಹಲ ಕೆರಳಿಸಿತ್ತು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications