ಹುಡುಗಿಯರಿಗೆ ವಾಟ್ಸಾಪ್ನಲ್ಲಿ ರೆಡ್ ಹಾರ್ಟ್ ಎಮೋಜಿ ಕಳಿಸುತ್ತಿದ್ದರೆ ಎಚ್ಚರ!
ದುಬೈ, ಆಗಸ್ಟ್. 01: ಚಾಟ್ ಮಾಡುವಾಗ ಸಾಮಾನ್ಯವಾಗಿ ಖುಷಿಯಾದಗ, ಏನಾದರೂ ನಮಗಿಷ್ಟವಾಗಿದ್ದು ಅವರಿಗೂ ಇಷ್ಟವಾಗಿದ್ದಾಗ ಹಾರ್ಟ್ ಎಮೋಜಿ ಕಳುಹಿಸುತ್ತಾರೆ. ಪ್ರೀತಿ, ಸ್ಪಂದನೆ, ಸಾಂತ್ವನ ಸೂಚಿಸಲು ದಿನದಲ್ಲಿ ಹಲವು ಬಾರಿ ಈ ಕೆಂಪು ಹೃದಯದ ಎಮೋಜಿಯನ್ನು ಬಳಸುತ್ತೇವೆ. ಆದರೆ, ಈ ದೇಶದಲ್ಲಿ ಹುಡುಗಿಯರಿಗೆ ನೀವು ಹಾರ್ಟ್ ಎಮೋಜಿ ಕಳುಹಿಸಿದರೇ ನೀವು ಜೈಲಿನ ಕಂಬಿಗಳನ್ನು ಎಣಿಸಬೇಕಾಗಬಹುದು!.
ಆಶ್ಚರ್ಯ ಆದರೂ ಇದು ಸತ್ಯ. ಸೌದಿ ಅರೇಬಿಯಾ ಮತ್ತು ಕುವೈತ್ನಲ್ಲಿ ವಾಟ್ಸಾಪ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಗೆ ಹೃದಯದ ಎಮೋಜಿಯನ್ನು ಕಳುಹಿಸುವುದನ್ನು ಈಗ ದುಷ್ಕೃತ್ಯಕ್ಕೆ ಪ್ರೇರೇಪಿಸುವ ಅಪರಾಧವೆಂದು ಪರಿಗಣಿಸಲಾಗಿದ್ದು, ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.

ಕುವೈತ್ ವಕೀಲರಾದ ಹಯಾ ಅಲ್ ಶಲಾಹಿ ಅವರ ಪ್ರಕಾರ, ಹುಡುಗಿಯರಿಗೆ ರೆಡ್ ಹಾರ್ಟ್ ಕಳುಹಿಸಿದ ಅಪರಾಧಕ್ಕೆ ಶಿಕ್ಷೆಗೊಳಗಾದವರು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕು. ಇದರ ಜೊತೆಗೆ 2,000 ಕುವೈತ್ ದಿನಾರ್ಗಳನ್ನು ದಂಡದ ರೀತಿಯಲ್ಲಿ ಪಾವತಿಸಬೇಕಾಗುತ್ತದೆ. ಅದೇ ರೀತಿ, ನೆರೆಯ ಸೌದಿ ಅರೇಬಿಯಾದಲ್ಲಿ, ವಾಟ್ಸಾಪ್ನಲ್ಲಿ 'ಕೆಂಪು ಹೃದಯ' ಎಮೋಜಿಗಳನ್ನು ಕಳುಹಿಸುವುದು ಜೈಲು ಶಿಕ್ಷೆಗೆ ಕಾರಣವಾಗಬಹುದು" ಎಂದಿದ್ದಾರೆ.
ಸೌದಿ ಅರೇಬಿಯಾ ಕಾನೂನಿನ ಪ್ರಕಾರ, ಈ ಕೃತ್ಯದ ತಪ್ಪಿತಸ್ಥರು 1,00,000 ಸೌದಿ ರಿಯಾಲ್ಗಳ ದಂಡದೊಂದಿಗೆ ಎರಡರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬಹುದು. ಸೌದಿ ಅರೇಬಿಯಾ ಸೈಬರ್ ಕ್ರೈಮ್ ತಜ್ಞರ ಪ್ರಕಾರ, ವಾಟ್ಸಾಪ್ನಲ್ಲಿ ಕೆಂಪು ಹೃದಯಗಳನ್ನು ಕಳುಹಿಸುವುದನ್ನು ದೇಶದ ನ್ಯಾಯವ್ಯಾಪ್ತಿಯಲ್ಲಿ "ಕಿರುಕುಳ" ಎಂದು ಅರ್ಥೈಸಬಹುದಾಗಿದೆ.

ಸೌದಿ ಅರೇಬಿಯಾದ ಆಂಟಿ-ಫ್ರಾಡ್ ಅಸೋಸಿಯೇಷನ್ನ ಸದಸ್ಯ ಅಲ್ ಮೊಟಾಜ್ ಕುಟ್ಬಿ, "ಆನ್ಲೈನ್ ಸಂಭಾಷಣೆಯ ಸಮಯದಲ್ಲಿ ಕೆಲವು ಚಿತ್ರಗಳು ಮತ್ತು ಅಭಿವ್ಯಕ್ತಿಗಳನ್ನು ಬಳಸುವುದರ ವಿರುದ್ಧ ಸಂತ್ರಸ್ತ ವ್ಯಕ್ತಿ ಮೊಕದ್ದಮೆ ಹೂಡಿದರೆ ಅದು ಕಿರುಕುಳದ ಅಪರಾಧವಾಗಿ ಬದಲಾಗಬಹುದು" ಎಂದು ಒತ್ತಿ ಹೇಳಿದ್ದಾರೆ. ಇದೇ ಅಪರಾದ ಮತ್ತೆ ಮಾಡಿದರೇ ದಂಡವು 3,00,000 ಸೌದಿ ರಿಯಾಲ್ಗಳಿಗೆ ಏರಿಕೆಯಾಗಲಿದೆ. ಜೊತೆಗೆ ಜೈಲು ಶಿಕ್ಷೆಯನ್ನು ಗರಿಷ್ಠ ಐದು ವರ್ಷಗಳವರೆಗೆ ಹೆಚ್ಚಿಸಬಹುದು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications