ಮಂಗಳನ ಮೇಲೆ ಯಶಸ್ವಿಯಾಗಿ ರೋವರ್ ಇಳಿಸಿದ ಚೀನಾ
ಬೀಜಿಂಗ್, ಮೇ 15: ಚೀನಾ ತನ್ನ ರೋವರ್ ಅನ್ನು ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿಸಿದೆ ಎಂದು ಅಲ್ಲಿನ ಸರ್ಕಾರಿ ಸುದ್ದಿ ಮಾಧ್ಯಮಗಳು ತಿಳಿಸಿವೆ. ಇತಿಹಾಸದಲ್ಲಿ ಕೆಂಪು ಗ್ರಹ ಮಂಗಳದಲ್ಲಿ ರೋವರ್ ಇಳಿಸಿದ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Recommended Video
ಚೀನೀ ಪುರಾಣಗಳ ಬೆಂಕಿಯ ದೇವರ ಹೆಸರಿನ ಜುರಾಂಗ್ ರೋವರ್ ಅನ್ನು ಶನಿವಾರ ಬೆಳಿಗ್ಗೆ ಮಂಗಳ ಗ್ರಹದ ಮೊದಲೇ ಆಯ್ಕೆ ಮಾಡಿದ ಯುಟೋಪಿಯಾ ಪ್ಲಾನಿಟಿಯಾ ಪ್ರದೇಶದಲ್ಲಿ ಬಂದಿಳಿದಿದೆ ಎಂದು ಸರ್ಕಾರಿ ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ.
ಆರು ಚಕ್ರಗಳ ಸೌರಶಕ್ತಿ ಚಾಲಿತ ಜುರಾಂಗ್ ರೋವರ್ ಸುಮಾರು 240 ಕಿಲೋಗ್ರಾಂಗಳಷ್ಟು (529 ಪೌಂಡ್) ತೂಗುತ್ತದೆ ಮತ್ತು ಆರು ವೈಜ್ಞಾನಿಕ ಸಾಧನಗಳನ್ನು ಹೊಂದಿದೆ. ಮಂಗಳನ ಮೇಲ್ಮೈಯಲ್ಲಿ ಜೀವಿಗಳನ್ನು ಹುಡುಕುವ ಸಲುವಾಗಿ ಇದನ್ನು ಮೂರು ತಿಂಗಳ ಕಾರ್ಯಾಚರಣೆಗೆ ಲ್ಯಾಂಡರ್ನಿಂದ ನಿಯೋಜಿಸಲಾಗಿದೆ.

ಟಿಯಾನ್ವೆನ್ -1 ಮಾರ್ಸ್ ಆರ್ಬಿಟರ್ ತನ್ನ ಕಾರ್ಯಾಚರಣೆಯ ಸಮಯದಲ್ಲಿ ರೋವರ್ಗೆ ತನ್ನ ಸಂಕೇತವನ್ನು ಪ್ರಸಾರ ಮಾಡುತ್ತದೆ ಮತ್ತು ನಂತರ ಒಂದು ಮಂಗಳದ ವರ್ಷಕ್ಕೆ ಗ್ರಹದ ಜಾಗತಿಕ ಸಮೀಕ್ಷೆಯನ್ನು ನಡೆಸುತ್ತದೆ. ರೋವರ್ ಅನ್ನು ಮೇಲ್ಮೈಗೆ ಇಳಿಸುವ ಮೊದಲು ಲ್ಯಾಂಡಿಂಗ್ ಪ್ರದೇಶವನ್ನು ಮರುಪರಿಶೀಲಿಸಲು ಮೂರು ತಿಂಗಳುಗಳ ಕಾಲ ಕಕ್ಷೆಯಲ್ಲಿ ಕಳೆದಿದೆ.
Another version of landing animation from People’s Daily, with ancient Chinese characters as annotation. Also CCTV News reporter to the audience: “Data transmitting across very long distance. Please wait for a while for pictures.” pic.twitter.com/yNZn4ShynR
— Chinese Zhurong Mars Rover (@MarsZhurong) May 15, 2021
ಕಳೆದ ವರ್ಷ ಜುಲೈ 23 ರಂದು ಹೈನಾನ್ನ ವೆನ್ಚಾಂಗ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಲಿಯಾನ್ ಮಾರ್ಚ್ 5ರ ರಾಕೆಟ್ ಮೂಲಕ ಟಿಯಾನ್ವೆನ್ -1 ಅನ್ನು ಉಡಾವಣೆ ಮಾಡಲಾಯಿತು ಮತ್ತು ಕಳೆದ ಫೆಬ್ರವರಿಯಲ್ಲಿ ಮಂಗಳನ ಕಕ್ಷೆಗೆ ಪ್ರವೇಶಿಸುವ ಮೊದಲು ಏಳು ತಿಂಗಳುಗಳ ಪ್ರಯಾಣ ಮಾಡಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications