ಹಿಂದೂ ಮಹಾಸಾಗರದಲ್ಲಿ ಚೀನಾದಿಂದ ಜಲಾಂತರ್ಗಾಮಿ ಗ್ಲೈಡರ್ ಡ್ರೋನ್ಗಳ ನಿಯೋಜನೆ
ಬೀಜಿಂಗ್, ಡಿಸೆಂಬರ್ 31: ಹಿಂದೂ ಮಹಾಸಾಗರದಲ್ಲಿ ಚೀನಾವು ಸೀ ವಿಂಗ್ (ಹೈಯಿ) ಎಂಬ ಹೆಸರಿನ ಜಲಾಂತರ್ಗಾಮಿ ಗ್ಲೈಡರ್ ಡ್ರೋನ್ಗಳನ್ನು ನಿಯೋಜಿಸಿದೆ ಎಂದು ರಕ್ಷಣಾ ವಿಶ್ಲೇಷಕ ಎಚ್ಐ ಸುಟ್ಟಾನ್ ಹೇಳಿದ್ದಾರೆ. ಈ ಡ್ರೋನ್ಗಳು ಹಲವು ತಿಂಗಳವರೆಗೆ ಕಾರ್ಯಾಚರಣೆ ನಡೆಸಬಲ್ಲವಾಗಿದ್ದು, ನೌಕಾ ಬೇಹುಗಾರಿಕೆ ಉದ್ದೇಶದ ಚಟುವಟಿಕೆಗಳಿಗೆ ಬಳಕೆಯಾಗಲಿದೆ.
'ಚೀನೀಯರು ಸಾಮೂಹಿಕವಾಗಿ ನಿಯೋಜಿಸಿರುವ ಈ ಸಮುದ್ರ ಗ್ಲೈಡರ್ಗಳು ಸಿಬ್ಬಂದಿ ರಹಿತ ಜಲಾಂತರ್ಗಾಮಿ ವಾಹನಗಳ (ಯುಯುವಿ) ಮಾದರಿಯದ್ದಾಗಿವೆ. 2019ರ ಡಿಸೆಂಬರ್ ಮಧ್ಯಭಾಗದಲ್ಲಿ ಅವುಗಳನ್ನು ನಿಯೋಜಿಸಲಾಗಿತ್ತು. 3,400ಕ್ಕೂ ಅಧಿಕ ಗ್ರಹಿಕೆಗಳನ್ನು ಪಡೆದುಕೊಂಡ ಬಳಿಕ ಫೆಬ್ರವರಿಯಲ್ಲಿ ಅವುಗಳನ್ನು ಮರಳಿ ಪಡೆದುಕೊಳ್ಳಲಾಗಿತ್ತು' ಎಂದು ಅವರು ಫೋರ್ಬ್ಸ್ ನಿಯತಕಾಲಿಕೆಯಲ್ಲಿ ಬರೆದಿದ್ದಾರೆ.
ಈ ಗ್ಲೈಡರ್ಗಳು ಅಮೆರಿಕದ ನೌಕಾಪಡೆ ನಿಯೋಜಿಸಿದ ಗ್ಲೈಡರ್ಗಳನ್ನೇ ಹೋಲುತ್ತವೆ. ಹಡಗುಗಳ ಸಾಗಣೆಗೆ ಸುರಕ್ಷಿತ ದಿಕ್ಸೂಚಿಯನ್ನಾಗಿ ಬಳಸಿಕೊಂಡಿದ್ದ ಅಮೆರಿಕದ ಈ ಗ್ಲೈಡರ್ ಅನ್ನು 2016ರಲ್ಲಿ ಬೀಜಿಂಗ್ ವಶಪಡಿಸಿಕೊಂಡಿತ್ತು. ಗ್ಲೈಡರ್ಗಳ ಮುಖಬೆಲೆಯನ್ನು ಗಮನಿಸಿದಾಗ ಹಿಂದೂ ಮಹಾಸಾಗರದಲ್ಲಿ ಸಾಮೂಹಿಕವಾಗಿ ಇಂತಹ ಯುಯುವಿಗಳನ್ನು ಚೀನಾ ನಿಯೋಜಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಆರ್ಕ್ಟಿಕ್ನಲ್ಲಿ ಕೂಡ ಸೀ ವಿಂಗ್ಗಳನ್ನು ಚೀನಾ ನಿಯೋಜಿಸಿದೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷದ ಡಿಸೆಂಬರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಮಹಾಸಾಗರದಲ್ಲಿ 14 ಯುಯುವಿಗಳನ್ನು ನಿಯೋಜಿಸಲಾಗುವುದು ಎನ್ನಲಾಗಿತ್ತು. ಆದರೆ 12ನ್ನು ಬಳಸಲಾಗಿತ್ತು. ಈ ಗ್ಲೈಡರ್ಗಳು ಸುದೀರ್ಘ ಅವಧಿಯವರೆಗೆ ಸಾಗಲು ನೆರವಾಗುವ ಬೃಹತ್ ರೆಕ್ಕೆಗಳನ್ನು ಹೊಂದಿವೆ. ಇವು ಅತ್ಯಂತ ವೇಗವಾಗಿ ಚಲಿಸದೆ ಹೋದರೂ ಹೆಚ್ಚಿನ ವ್ಯಾಪ್ತಿಯನ್ನು ಸಾಗುವ ಸಾಮರ್ಥ್ಯ ಹೊಂದಿವೆ.
ಸೀ ವಿಂಗ್ಗಳು ವಾಹಕತೆ, ಉಷ್ಣತೆ ಮತ್ತು ಆಳದ (ಸಿಡಿಟಿ) ಸೆನ್ಸಾರ್ಗಳನ್ನಲ್ಲದೆ, ಟರ್ಬ್ಯುಲೆನ್ಸ್ ಮೀಟರ್, ಟರ್ಬಿಮೀಟರ್, ಕ್ಲೋರೊಫಿಲ್ ಸೆನ್ಸಾರ್, ಡಿಸಾಲ್ವಡ್ ಆಕ್ಸಿಜನ್ ಸೆನ್ಸಾರ್, ನೈಟ್ರೇಟ್ ಮತ್ತು ಇತರೆ ಜೀವ ರಾಸಾಯನಿಕ ಸೆನ್ಸಾರ್ಗಳನ್ನು ಕೊಂಡೊಯ್ಯಬಲ್ಲದು.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು












Click it and Unblock the Notifications