ಹಿಂದೂ ಮಹಾಸಾಗರದಲ್ಲಿ ಚೀನಾದಿಂದ ಜಲಾಂತರ್ಗಾಮಿ ಗ್ಲೈಡರ್ ಡ್ರೋನ್ಗಳ ನಿಯೋಜನೆ
ಬೀಜಿಂಗ್, ಡಿಸೆಂಬರ್ 31: ಹಿಂದೂ ಮಹಾಸಾಗರದಲ್ಲಿ ಚೀನಾವು ಸೀ ವಿಂಗ್ (ಹೈಯಿ) ಎಂಬ ಹೆಸರಿನ ಜಲಾಂತರ್ಗಾಮಿ ಗ್ಲೈಡರ್ ಡ್ರೋನ್ಗಳನ್ನು ನಿಯೋಜಿಸಿದೆ ಎಂದು ರಕ್ಷಣಾ ವಿಶ್ಲೇಷಕ ಎಚ್ಐ ಸುಟ್ಟಾನ್ ಹೇಳಿದ್ದಾರೆ. ಈ ಡ್ರೋನ್ಗಳು ಹಲವು ತಿಂಗಳವರೆಗೆ ಕಾರ್ಯಾಚರಣೆ ನಡೆಸಬಲ್ಲವಾಗಿದ್ದು, ನೌಕಾ ಬೇಹುಗಾರಿಕೆ ಉದ್ದೇಶದ ಚಟುವಟಿಕೆಗಳಿಗೆ ಬಳಕೆಯಾಗಲಿದೆ.
'ಚೀನೀಯರು ಸಾಮೂಹಿಕವಾಗಿ ನಿಯೋಜಿಸಿರುವ ಈ ಸಮುದ್ರ ಗ್ಲೈಡರ್ಗಳು ಸಿಬ್ಬಂದಿ ರಹಿತ ಜಲಾಂತರ್ಗಾಮಿ ವಾಹನಗಳ (ಯುಯುವಿ) ಮಾದರಿಯದ್ದಾಗಿವೆ. 2019ರ ಡಿಸೆಂಬರ್ ಮಧ್ಯಭಾಗದಲ್ಲಿ ಅವುಗಳನ್ನು ನಿಯೋಜಿಸಲಾಗಿತ್ತು. 3,400ಕ್ಕೂ ಅಧಿಕ ಗ್ರಹಿಕೆಗಳನ್ನು ಪಡೆದುಕೊಂಡ ಬಳಿಕ ಫೆಬ್ರವರಿಯಲ್ಲಿ ಅವುಗಳನ್ನು ಮರಳಿ ಪಡೆದುಕೊಳ್ಳಲಾಗಿತ್ತು' ಎಂದು ಅವರು ಫೋರ್ಬ್ಸ್ ನಿಯತಕಾಲಿಕೆಯಲ್ಲಿ ಬರೆದಿದ್ದಾರೆ.
ಈ ಗ್ಲೈಡರ್ಗಳು ಅಮೆರಿಕದ ನೌಕಾಪಡೆ ನಿಯೋಜಿಸಿದ ಗ್ಲೈಡರ್ಗಳನ್ನೇ ಹೋಲುತ್ತವೆ. ಹಡಗುಗಳ ಸಾಗಣೆಗೆ ಸುರಕ್ಷಿತ ದಿಕ್ಸೂಚಿಯನ್ನಾಗಿ ಬಳಸಿಕೊಂಡಿದ್ದ ಅಮೆರಿಕದ ಈ ಗ್ಲೈಡರ್ ಅನ್ನು 2016ರಲ್ಲಿ ಬೀಜಿಂಗ್ ವಶಪಡಿಸಿಕೊಂಡಿತ್ತು. ಗ್ಲೈಡರ್ಗಳ ಮುಖಬೆಲೆಯನ್ನು ಗಮನಿಸಿದಾಗ ಹಿಂದೂ ಮಹಾಸಾಗರದಲ್ಲಿ ಸಾಮೂಹಿಕವಾಗಿ ಇಂತಹ ಯುಯುವಿಗಳನ್ನು ಚೀನಾ ನಿಯೋಜಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಆರ್ಕ್ಟಿಕ್ನಲ್ಲಿ ಕೂಡ ಸೀ ವಿಂಗ್ಗಳನ್ನು ಚೀನಾ ನಿಯೋಜಿಸಿದೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷದ ಡಿಸೆಂಬರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಮಹಾಸಾಗರದಲ್ಲಿ 14 ಯುಯುವಿಗಳನ್ನು ನಿಯೋಜಿಸಲಾಗುವುದು ಎನ್ನಲಾಗಿತ್ತು. ಆದರೆ 12ನ್ನು ಬಳಸಲಾಗಿತ್ತು. ಈ ಗ್ಲೈಡರ್ಗಳು ಸುದೀರ್ಘ ಅವಧಿಯವರೆಗೆ ಸಾಗಲು ನೆರವಾಗುವ ಬೃಹತ್ ರೆಕ್ಕೆಗಳನ್ನು ಹೊಂದಿವೆ. ಇವು ಅತ್ಯಂತ ವೇಗವಾಗಿ ಚಲಿಸದೆ ಹೋದರೂ ಹೆಚ್ಚಿನ ವ್ಯಾಪ್ತಿಯನ್ನು ಸಾಗುವ ಸಾಮರ್ಥ್ಯ ಹೊಂದಿವೆ.
ಸೀ ವಿಂಗ್ಗಳು ವಾಹಕತೆ, ಉಷ್ಣತೆ ಮತ್ತು ಆಳದ (ಸಿಡಿಟಿ) ಸೆನ್ಸಾರ್ಗಳನ್ನಲ್ಲದೆ, ಟರ್ಬ್ಯುಲೆನ್ಸ್ ಮೀಟರ್, ಟರ್ಬಿಮೀಟರ್, ಕ್ಲೋರೊಫಿಲ್ ಸೆನ್ಸಾರ್, ಡಿಸಾಲ್ವಡ್ ಆಕ್ಸಿಜನ್ ಸೆನ್ಸಾರ್, ನೈಟ್ರೇಟ್ ಮತ್ತು ಇತರೆ ಜೀವ ರಾಸಾಯನಿಕ ಸೆನ್ಸಾರ್ಗಳನ್ನು ಕೊಂಡೊಯ್ಯಬಲ್ಲದು.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications