ಶಿಕಾಗೋ : ಯುವತಿ ಮೇಲೆ ರೇಪ್, ಫೇಸ್ ಬುಕ್ ನಲ್ಲಿ ಲೈವ್
ತಂತ್ರಜ್ಞಾನದ ಅತ್ಯಂತ ಕೆಟ್ಟ ಮಟ್ಟದ ಉಪಯೋಗ ಮಾಡುವುದೆಂದರೆ ಹೀಗೆ ಇರಬೇಕು, ಶಿಕಾಗೋವಿನಲ್ಲಿ ಯುವತಿಯೊಬ್ಬರ ಮೇಲೆ ಆರು ಮಂದಿ ಕಾಮುಕರು ಎರಗಿದ ಘಟನೆಯನ್ನು ಫೇಸ್ ಬುಕ್ ಲೈವ್ ಮೂಲಕ ಹಂಚಲಾಗಿದೆ.
ಶಿಕಾಗೋ, ಮಾರ್ಚ್ 24: ತಂತ್ರಜ್ಞಾನದ ಅತ್ಯಂತ ಕೆಟ್ಟ ಮಟ್ಟದ ಉಪಯೋಗ ಮಾಡುವುದೆಂದರೆ ಹೀಗೆ ಇರಬೇಕು, ಶಿಕಾಗೋವಿನಲ್ಲಿ ಯುವತಿಯೊಬ್ಬರ ಮೇಲೆ ಆರು ಮಂದಿ ಕಾಮುಕರು ಎರಗಿದ ಘಟನೆಯನ್ನು ಫೇಸ್ ಬುಕ್ ಲೈವ್ ಮೂಲಕ ಹಂಚಲಾಗಿದೆ. ಇದನ್ನು 40ಕ್ಕೂ ಅಧಿಕ ಮಂದಿ ಲೈವ್ ವೀಕ್ಷಣೆ ಮಾಡಿದ ಘಟನೆ ನಡೆದಿದೆ. ಈ ಬಗ್ಗೆ ಗಮನ ಹರಿಸುವುದಾಗಿ ಫೇಸ್ ಬುಕ್ ಸಂಸ್ಥೆ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋದಲ್ಲಿ ಐದರಿಂದ ಆರು ಮಂದಿ ಕಾಮುಕರು ಒಬ್ಬ ಯುವತಿಯ ಮೇಲೆರಗುತ್ತಾರೆ. ಯುವತಿಯ ವಯಸ್ಸು 15 ವರ್ಷ ಎಂದು ತಿಳಿದು ಬಂದಿದೆ. ಆರು ಮಂದಿ ಕಾಮುಕರನ್ನು ಬಂಧಿಸಲು ಬಲೆ ಹೆಣೆಯಲಾಗಿದೆ ಎಂದು ಪೊಲೀಸ್ ವಕ್ತಾರರಾದ ಅಂಥೋಣಿ ಗುಗ್ಲೆಲ್ಮಿ ಹೇಳಿದ್ದಾರೆ.

ದುರಂತವೆಂದರೆ, ರೇಪ್ ದೃಶ್ಯಗಳು ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡಿದ್ದಾದರೂ ಹೇಗೆ? ಫೇಸ್ ಬುಕ್ ನೋಡುವವರು ತಕ್ಷಣವೇ ಪೊಲೀಸರಿಗೆ ಕರೆ ಏಕೆ ಮಾಡಲಿಲ್ಲ? ಪೊಲೀಸರಿಗೆ ಕರೆ ಮಾಡಲು ಆಗದಿದ್ದರೂ ಫೇಸ್ ಬುಕ್ ನಲ್ಲೇ ಇದು ಸ್ಪಾಮ್ ಅಥವಾ ಲೈಂಗಿಕ ಕಿರುಕುಳ, ಪ್ರಚೋದನಕಾರಿ ಎಂದು ವರದಿ ಮಾಡಬಹುದಾಗಿತ್ತು.
ಆದರೆ, ಉನ್ನತ ತಂತ್ರಜ್ಞಾನದ ಬೀಡು ಎಂದು ಕರೆದುಕೊಳ್ಳುವ ಯುಎಸ್ ನಲ್ಲಿ ಕಾಮುಕರ ಅಟ್ಟಹಾಸವನ್ನು ವೀಕ್ಷಿಸುವ ಇಂಥ ತಂತ್ರಜ್ಞಾನದ ವಿಕೃತಿಗೆ ಅಮಾಯಕ ಯುವತಿಯ ಮಾನ ಹಾನಿಯಾಗಿದೆ.
ಯುವತಿಯ ತಾಯಿಗೆ ಈ ಘಟನೆ ಬಗ್ಗೆ ತಿಳಿದ ಬಳಿಕ, ತಕ್ಷಣವೇ ಶಿಕಾಗೋ ಪೊಲೀಸರ ಮೊರೆ ಹೊಕ್ಕಿದ್ದಾರೆ. ಆಕೆ ನೀಡಿದ ಫೇಸ್ ಬುಕ್ ಲೈವ್ ಸ್ಕ್ರೀನ್ ಗ್ರಾಬ್ ನೋಡಿ ಸಂತ್ರಸ್ತ ಯುವತಿಯನ್ನು ಹುಡಕಲಾಗಿದೆ. ಸದ್ಯ ತಾಯಿಯ ಆಶ್ರಯದಲ್ಲಿರುವ ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್ ಬುಕ್, ಯಾವುದೇ ರೀತಿ ನಿಂದನೆ, ಮಾನಹಾನಿ, ಲೈಂಗಿಕ ಕಿರುಕುಳ ವಿಡಿಯೋಗಳನ್ನು ಪ್ರದರ್ಶಿಸಲು ನಾವು ಅವಕಾಶ ನೀಡುವುದಿಲ್ಲ. ಈ ಘಟನೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. ಫೇಸ್ ಬುಕ್ ನೀಡಿರುವ ನೀತಿ ನಿಯಮ ಪಟ್ಟಿ ಇಲ್ಲಿದೆ ಆಸಕ್ತರು ಓದಿಕೊಳ್ಳಿ
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications