ಕೊರೊನಾ ಜಯಿಸಿ ಬಂದ ಪ್ರಧಾನಿಗೆ ಪ್ರೇಯಸಿ ಕೊಟ್ಟ ಅದ್ಭುತ ಉಡುಗೊರೆ
ಲಂಡನ್, ಏಪ್ರಿಲ್ 29: ಕೊರೊನಾ ಮಹಾಮಾರಿ ಜಗತ್ತಿನಲ್ಲಿ ಆರ್ಭಟ ಮುಂದುವರಿಸಿ, ಬಡವ ಶ್ರೀಮಂತ, ಸಾಮಾನ್ಯ, ಅಸಾಮಾನ್ಯ ಎನ್ನದೇ ತನ್ನ ವ್ಯಾಪ್ತಿಗೆ ಬಂದವರಿಗೆ ಬಿಸಿ ಮುಟ್ಟಿಸದೇ ಹೋಗಿಲ್ಲ.
Recommended Video
ಜಗತ್ತಿನ ಅತಿ ಗಣ್ಯ ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ತಗುಲಿಸಿಕೊಂಡು ಹೆಚ್ಚು ಸುದ್ದಿಯಾಗಿ ಗಮನ ಸೆಳೆದವರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್. ಬೋರಿಸ್ ಜಾನ್ಸನ್ ಅವರಿಗೆ ಕೊರೊನಾ ಸೋಂಕು ತಗುಲಿ, ಸಾವು ಬದುಕಿನ ಮಧ್ಯ ಹೋರಾಡಿ, ಕೊರೊನಾ ಜಯಿಸಿ ಬಂದಿದ್ದಾರೆ.
ಕೊರೊನಾದಿಂದ ಗುಣಮುಖರಾದ ಬಂದೊಡನೆಯೇ ಬೊರಿಸ್ ಜಾನ್ಸನ್ ಸಂಭ್ರಮದಲ್ಲಿ ತೇಲಿದ್ದಾರೆ. ಅವರ ಪ್ರೇಯಸಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಕೊರೊನಾದಿಂದ ಗುಣಮುಖರಾಗಿ ಬಂದ ಜಾನ್ಸನ್ಗೆ ನಿಜಕ್ಕೂ ವಿಶೇಷ ಕೊಡುಗೆಯನ್ನೇ ನೀಡಿದ್ದಾರೆ.

2018 ರಿಂದ ಪ್ರೀತಿಸುತ್ತಿದ್ದಾರೆ
55 ವರ್ಷದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ 40 ವರ್ಷದ ರಾಜಕಾರಣಿ ಕೇರಿ ಸೈಮಂಡ್ಸ್ ಅವರನ್ನು 2018 ರಿಂದ ಪ್ರೀತಿಸುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಕೇರಿ ಸೈಮಂಡ್ಸ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಸಾವು ಬದುಕಿನ ನಡುವೆ ಹೋರಾಟ
ಜಾನ್ಸನ್ ವಿಶ್ವದ ಅತ್ಯಂತ ಪ್ರಸಿದ್ಧ ಕರೋನವೈರಸ್ ರೋಗಿಯಾಗಿದ್ದರು. ಮಾರ್ಚ್ ಅಂತ್ಯದಲ್ಲಿ ಅವರು ಕೊರೊನಾ ವೈರಸ್ನಿಂದ ಬಳಲುತ್ತಿದ್ದರು; ಡೌನಿಂಗ್ ಸ್ಟ್ರೀಟ್ನಲ್ಲಿರುವ ಅಧಿಕೃತ ನಿವಾಸದಲ್ಲಿ 10 ದಿನಗಳ ಕಾಲ ಸೆಲ್ಪ್ ಐಸೋಲೇಷನ್ನಲ್ಲಿದ್ದರು. ನಿರಂತರ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಗಳಿಂದ ಅವರನ್ನು ಸೇಂಟ್ ಥಾಮಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು. ಕಡೆಗೂ ಅವರು ಕೊರೊನಾ ವೈರಸ್ ಜಯಿಸಿ ಬಂದರು.

ಇದೊಂದು ಅದ್ಭುತ ಘಳಿಗೆ
ತಂದೆಯಾದ ಸುದ್ದಿ ತಿಳಿದು ತೀವ್ರ ಸಂತಸ ವ್ಯಕ್ತಪಡಿಸಿರುವ ಬೊರಿಸ್ ಜಾನ್ಸನ್ ಅವರು, ಇದೊಂದು ಅದ್ಭುತ ಘಳಿಗೆ. ದೇಶ ಕೊರೊನಾ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ನನಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ನಾನು ಕೇರಿ ಸೈಮಂಡ್ಸ್ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಹೋರಾಟದಲ್ಲಿ ಹಿಂದೆ ಹೆಜ್ಜೆ ಇಡುವುದಿಲ್ಲ
ಕೆಲಸಕ್ಕೆ ಹಾಜರಾಗಿರುವ ಬೊರಿಸ್ ಜಾನ್ಸನ್ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಿಂದೆ ಹೆಜ್ಜೆ ಇಡುವುದಿಲ್ಲ ಎಂದು ಗುಡುಗಿದ್ದಾರೆ. ನಮ್ಮ ಜನರು ತಾಳ್ಮೆ ವಹಿಸಲೇಬೇಕು. ಲಾಕ್ಡೌನ್ನಿಂದ ಕಷ್ಟಗಳನ್ನು ಎದುರಿಸಿರಬಹುದು. ಆದರೆ, ನಾವೀಗ ಈ ಬಿಕ್ಕಟ್ಟಿನ ಮೊದಲ ಹಂತದ ಅಂತ್ಯದಲ್ಲಿದ್ದೇವೆ. ಹೀಗಾಗಿ ಜನರ ಸಹಕಾರ ಅಗತ್ಯ ಎಂದು ಹೇಳಿದ್ದಾರೆ. ಬ್ರಿಟನ್ನಲ್ಲಿ ಇದುವರೆಗೆ 1.57 ಲಕ್ಷ ಜನರಿಗೆ ಕೊರಾನಾ ಸೋಂಕು ತಗುಲಿದ್ದು, 21,092 ಮಂದಿ ಮಾರಕ ವೈರಸ್ನಿಂದ ಸತ್ತಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications