ಭಾರತದ ಎದುರು ಬೇಡಿಕೊಳ್ಳುತ್ತಿದೆ ಬಾಂಗ್ಲಾದೇಶ: ಯಾವ ಕಾರಣಕ್ಕೆ?
ಭಾರತದ ಜೊತೆಯಲ್ಲಿ ಕಿರಿಕ್ ಮಾಡಿಕೊಳ್ಳಲು ಸಜ್ಜಾದಂತೆ ಕಾಣುತ್ತಿದ್ದ ಬಾಂಗ್ಲಾದೇಶ ಈಗ ಮಂಡಿ ಊರುವ ಪರಿಸ್ಥಿತಿ ಬಂದಿದೆ. ಆಂತರಿಕ ಹಿಂಸಾಚಾರದಲ್ಲಿ ನಲುಗಿ ಹೋದ, ಭಾರತದ ನೆರೆಯ ದೇಶ ಬಾಂಗ್ಲಾ ಇದೀಗ ಭಾರತದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು, ಜೀವನ ನಡೆಸಲು ಸಿದ್ಧವಾಗಿರುವ ಸೂಚನೆ ನೀಡಿದೆ. ಹಾಗಾದ್ರೆ ಭಾರತದ ವಿಚಾರದಲ್ಲಿ ಬಾಂಗ್ಲಾದೇಶ ಇದೀಗ ನೀಡಿರುವ ಮಹತ್ವದ ಹೇಳಿಕೆ ಏನು? ಇದರಿಂದ ಭಾರತಕ್ಕೆ ಏನು ಲಾಭ ಆಗಲಿದೆ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.
ಬಾಂಗ್ಲಾದೇಶ ಹಿಂಸಾಚಾರದ ಬೆಂಕಿಯಲ್ಲಿ ನರಳಿದ ನಂತರ ಕೈಯಲ್ಲಿ ಕಾಸು ಇಲ್ಲದೆ ತೀವ್ರ ಪರದಾಟ ಪಡುತ್ತಿದೆ. ಅದರಲ್ಲೂ ಬಾಂಗ್ಲಾದೇಶ ಜನರು ಇಷ್ಟೆಲ್ಲಾ ಹಿಂಸಾಚಾರ ನಡೆಸಿದ್ದ ಕಾರಣಕ್ಕೆ, ಅಲ್ಲಿದ್ದ ಫ್ಯಾಕ್ಟರಿ & ಕಂಪನಿಗಳಿಗೆ ಭಾರಿ ನಷ್ಟ ಆಗಿದೆ. ಅದರಲ್ಲೂ ಬಾಂಗ್ಲಾದ ಬಹುತೇಕ ಪ್ರದೇಶದಲ್ಲಿ ಇದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಬಾಗಿಲು ಹಾಕಿಕೊಂಡು ಭಾರತಕ್ಕೆ ಓಡಿ ಬಂದಿವೆ. ಪರಿಸ್ಥಿತಿ ಹೀಗಿದ್ದಾಗ ಭಾರತದ ಜೊತೆಗೆ ಸಂಬಂಧ ಸುಧಾರಣೆಗಾಗಿ ಬಾಂಗ್ಲಾ ರಾಜಕೀಯ ನಾಯಕರು ಮನಸ್ಸು ಮಾಡಿದ್ದು, ಭಾರತದ ಬಳಿ ಮಂಡಿಯೂರುವ ಪರಿಸ್ಥಿತಿ ಬಂದಂತಾಗಿದೆ. ಸುಮಾರು ವರ್ಷಗಳಿಂದ ಕಿರಿಕ್ ನಡೆಯುತ್ತಿರುವ ನದಿ ನೀರಿನ ಹಂಚಿಕೆಯ ವಿಚಾರವಾಗಿ ಮಾತುಕತೆಗೆ ಸಿದ್ಧ ಎಂಬ ಸಂದೇಶ ನೀಡಿದ್ದಾರೆ ಬಾಂಗ್ಲಾದೇಶದ ನಾಯಕರು.

ನದಿ ನೀರು ವಿವಾದಕ್ಕೆ ಅಂತ್ಯ?
ಜಗತ್ತಿನ ಅತಿದೊಡ್ಡ ನದಿ ನೀರು ಹಂಚಿಕೆ ವಿವಾದಗಳ ಪೈಕಿ 'ತೀಸ್ತಾ' ನದಿ ನೀರು ಹಂಚಿಕೆ ವಿವಾದ ಕೂಡ ಒಂದಾಗಿದೆ. ಹೀಗಿದ್ದಾಗ ಹಲವು ಬಾರಿ ಭಾರತ & ಬಾಂಗ್ಲಾದೇಶ ನಡುವೆ ಈ ವಿಚಾರಕ್ಕೆ ಹಲವು ವರ್ಷಗಳಿಂದ ಕಿರಿಕ್ ಕೂಡ ನಡೆದಿದೆ. ಆದರೆ ಇದೀಗ ವಿವಾದಕ್ಕೆ ಒಂದು ಅಂತ್ಯ ಹಾಡಲು ಬಾಂಗ್ಲಾದೇಶ ಮುಂದೆ ಬಂದಂತೆ ಕಾಣುತ್ತಿದೆ. ಈ ಕುರಿತು ಅಂದರೆ, ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದ ಸಂಬಂಧ ಭಾರತದ ಜತೆ ಮಾತುಕತೆ ಮತ್ತೆ ಆರಂಭ ಮಾಡಲು ನಾವು ಸಿದ್ಧತೆ ಎಂದು ಬಾಂಗ್ಲಾ ತಿಳಿಸಿದೆ. ಈ ಕುರಿತು ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಜಲಸಂಪನ್ಮೂಲ ಸಲಹೆಗಾರರಾದ ಸಯೀದಾ ರಿಜ್ವಾನಾ ಹಸನ್ ಮಹತ್ವದ ಹೇಳಿಕೆ ನೀಡಿದ್ದಾರೆ
ಭಾರತದ ಬಳಿ ಬಾಂಗ್ಲಾ ಬೇಡಿಕೆ?
ಒಟ್ನಲ್ಲಿ ಹಲವು ದಶಕಗಳಿಂದ ಈ ವಿವಾದ ಹಾಗೇ ಇದ್ದು, ಈಗಲಾದರೂ ವಿವಾದ ಅಂತ್ಯ ಕಾಣುತ್ತಾ? ಎಂಬ ನಿರೀಕ್ಷೆ ಮೂಡಿದೆ. ಯಾಕಂದ್ರೆ ಈ ವಿವಾದ ಬಗೆಹರಿದರೆ ಭಾರತದಲ್ಲು ಹೆಚ್ಚಿನ ಯೋಜನೆಗಳನ್ನ ಕೈಗೊಳ್ಳಬಹುದು. ಹಾಗೇ ಭಾರತದ ರೈತರಿಗೆ ಕೂಡ ಇದರಿಂದಾಗಿ ಅನುಕೂಲ ಕೂಡ ಹೆಚ್ಚಾಗಲಿದೆ. ಹೀಗಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಈ ಕುರಿತು ಹೇಗೆ ನಿರ್ಧಾರ ಕೈಗೊಳ್ಳಲಿದೆ? ಭಾರತ ಇದೀಗ ಮಾತುಕತೆಗೆ ಗ್ರೀನ್ ಸಿಗ್ನಲ್ ಕೊಡುತ್ತಾ? ಎಂಬ ವಿಚಾರವನ್ನ ಕಾದು ನೋಡಬೇಕಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications