ಪಾಕಿಸ್ತಾನ ಮಾನ ಮತ್ತೊಮ್ಮೆ ಹರಾಜು, ಬಲೂಚಿಸ್ತಾನ ಘಟನೆಯಿಂದ ಬಯಲಾಯ್ತು ಕರಾಳ ಮುಖ | Balochistan Crisis
ಪಾಕಿಸ್ತಾನ ತನ್ನದೇ ಸಾವಿರ ಸಮಸ್ಯೆ ಇಟ್ಟುಕೊಂಡು ಅಕ್ಕಪಕ್ಕದ ದೇಶಗಳ ನೆಮ್ಮದಿಗೆ ಬೆಂಕಿ ಹಚ್ಚುವ ಕೆಲಸವನ್ನು ಪದೇ ಪದೇ ಮಾಡುತ್ತಲೇ ಇರುತ್ತದೆ. ಅದರಲ್ಲೂ ಅತಿ ಭ್ರಷ್ಟ ರಾಜಕೀಯ ನಾಯಕರು ಪಾಕಿಸ್ತಾನದಲ್ಲಿ ಇರುವ ಪರಿಣಾಮ, ಪಾಕ್ ಉದ್ಧಾರ ಆಗಲು ಅವರೆಲ್ಲಾ ಬಿಡುವುದೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಸ್ವತಃ ಪಾಕಿಸ್ತಾನ ಪ್ರಜೆಗಳೇ ಅಲ್ಲಿನ ನಾಯಕರ ವಿರುದ್ಧ ಆಕ್ರೋಶ ಹೊರಹಾಕುತ್ತಾ, ಆಗಾಗ ಪ್ರತಿಭಟನೆ ನಡೆಸುತ್ತಾ ಇರುತ್ತಾರೆ. ಇಷ್ಟಾದರೂ ಬುದ್ಧಿ ಕಲಿಯದ ಪಾಕಿಸ್ತಾನ ರಾಜಕಾರಣಿಗಳು ಮತ್ತೆ ಮತ್ತೆ ಉಗ್ರರ ಬೆನ್ನಿಗೆ ನಿಂತು ತಮ್ಮ ಬುದ್ಧಿ ತೋರಿಸುತ್ತಾರೆ. ಆದರೆ ಇಂತಹ ಪಾಕ್ ನಾಯಕರಿಗೆ ಈಗ ಬಲೂಚಿಸ್ತಾನ ಬಂಡುಕೋರರು ಕಬ್ಬಿಣದ ಕಡಲೆಯಾಗಿದ್ದಾರೆ.
ಪಾಕಿಸ್ತಾನದ ಮೂಲೆ ಮೂಲೆಯಲ್ಲೂ ಉಗ್ರವಾದ ಬೆರೆತು ಹೋಗಿದ್ದು, ಉಗ್ರವಾದಕ್ಕೆ ಪಾಕಿಸ್ತಾನದಲ್ಲಿ ರಾಜಕೀಯ ನಾಯಕರೇ ಬೆಂಬಲ ನೀಡುತ್ತಾ ಬಂದಿದ್ದಾರೆ. ಆರ್ಥಿಕ ಸಂಕಷ್ಟಗಳ ನಡುವೆ ಕೂಡ ಈ ರೀತಿಯಾಗಿ ಉಗ್ರರನ್ನು ಬೆಳೆಸುತ್ತಿರುವ ಪಾಕಿಸ್ತಾನಕ್ಕೆ ಅದೇ ಉಗ್ರರು ಮುಳುವಾಗಿ ಪರಿಣಮಿಸುತ್ತಿದ್ದು, ಪದೇ ಪದೇ ಪಾಕ್ ನೆಲದಲ್ಲಿ ರಕ್ತ ಹರಿಸುತ್ತಿದ್ದಾರೆ ಟೆರರ್ಗಳು. ಇಂತಹ ಸಮಯದಲ್ಲಿ, ಪಾಕಿಸ್ತಾನ ದೇಶದ ಬಲೂಚಿಸ್ತಾನ ಭಾಗದಲ್ಲಿ ಬಂಡುಕೋರರು ಪಾಕ್ ಸರ್ಕಾರ & ಸೇನೆ ವಿರುದ್ಧ ಸಮರ ಶುರು ಮಾಡಿದ್ದಾರೆ. ಈ ಸಮರ ಇದೀಗ ಹಿಂಸಾತ್ಮಕ ರೂಪ ಪಡೆಯುವ ಜೊತೆಗೆ ಪಾಕಿಸ್ತಾನದ ಮಾನ ಹಾಗೂ ಮರ್ಯಾದಿ ಜಾಗತಿಕ ಮಟ್ಟದಲ್ಲಿ ಹರಾಜು ಆಗುವಂತೆ ಮಾಡಿದೆ.

ಪಾಕ್ ರಾಜಕಾರಣಿಗಳ ಕರಾಳ ಮುಖ
ಬಲೂಚಿಸ್ತಾನ ಪ್ರದೇಶ ಪಾಕಿಸ್ತಾನಕ್ಕೆ ಸೇರಿದ್ದರೂ ಅಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ, ಇಲ್ಲಿನ ಪ್ರಜೆಗಳನ್ನು ಪಾಕಿಸ್ತಾನ ಸರ್ಕಾರ ಸರಿಯಾಗಿ ನೋಡಿಕೊಳ್ಳುತ್ತಲೇ ಇಲ್ಲ ಎಂಬುದು ಸ್ಥಳೀಯರ ಆರೋಪ. ಪಾಕಿಸ್ತಾನ ಕೆಲವೇ ಕೆಲವು ಪ್ರದೇಶಗಳಲ್ಲಿ ಅಭಿವೃದ್ಧಿಯನ್ನ ಮಾಡುತ್ತಾ ಬಲೂಚಿಸ್ತಾನ ಸೇರಿದಂತೆ ಗಡಿ ಭಾಗದ ಪ್ರದೇಶಗಳನ್ನು ಕಡೆಗಣನೆ ಮಾಡುತ್ತಿದೆ ಎನ್ನುವ ಆರೋಪಗಳ ನಡುವೆ ದೊಡ್ಡ ಸಮರ ಶುರುವಾಗಿದೆ.
ಅದರಲ್ಲೂ ಬಲೂಚಿಸ್ತಾನ ಪ್ರದೇಶದಲ್ಲಿ ಪಾಕ್ ಸರ್ಕಾರದ ವಿರುದ್ಧ ಈಗ ಬಂಡುಕೋರರ ಪಡೆಯೇ ಹುಟ್ಟಿಕೊಂಡಿದ್ದು, ಅವರು ಇದೀಗ ದೊಡ್ಡ ಮಟ್ಟದ ಹಿಂಸಾತ್ಮಕ ಹೋರಾಟ ಶುರು ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನ ಮಾನ ಜಾಗತಿಕ ಮಟ್ಟದಲ್ಲಿ ಮತ್ತೆ ಮತ್ತೆ ಹರಾಜು ಆಗುತ್ತಾ ಇದೆ. ಹಾಗೇ ತನ್ನ ಕೈಯಲ್ಲಿ ಆಂತರಿಕ ಶಾಂತಿ ಕಾಪಾಡಲು ಆಗುತ್ತಿಲ್ಲ ಎಂಬುದನ್ನ ಕೂಡ ಇದೇ ಪಾಕ್ ಮತ್ತೆ ಮತ್ತೆ ಒಪ್ಪಿಕೊಂಡಂತೆ ಈ ಘಟನೆಯಿಂದ ಭಾಸವಾಗುತ್ತಿದೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications