ಬಹರೇನ್ ನಲ್ಲಿ ಶ್ರೀಕೃಷ್ಣ ದೇಗುಲದ ಪುನರ್ ಅಭಿವೃದ್ಧಿಗೆ ಮೋದಿ ಚಾಲನೆ
ಮನಾಮ (ಬಹರೇನ್), ಅಗಸ್ಟ್ 25: ಬಹರೇನ್ ನ ರಾಜಧಾನಿಯಲ್ಲಿ ಇರುವ ಶ್ರೀಕೃಷ್ಣನ ಇನ್ನೂರು ವರ್ಷದ ಹಳೆಯ ದೇಗುಲದ $ 4.2 ಮಿಲಿಯನ್ ಪುನರ್ ಅಭಿವೃದ್ಧಿ ಯೋಜನೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದರು. ಗಲ್ಫ್ ರಾಷ್ಟ್ರ ಬಹರೇನ್ ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ.
ಮನಾಮದಲ್ಲಿ ಇರುವ ಅತ್ಯಂತ ಹಳೆಯ ಶ್ರೀನಾಥ್ ಜೀ ದೇಗುಲದಲ್ಲಿ ಪ್ರಾರ್ಥಿಸಿದರು. ಯುಎಇಯಲ್ಲಿ ಶನಿವಾರ ರುಪೇ ಕಾರ್ಡ್ ಆರಂಭಿಸಿದ ನಂತರ ಪ್ರಸಾದ ಕೂಡ ತಂದರು.
ಈ ಪ್ರೀತಿಗೆ ಬಹರೇನ್ ಗೆ ಧನ್ಯವಾದಗಳು. ಮನಾಮದಲ್ಲಿರುವ ಇನ್ನೂರು ವರ್ಷಗಳ ಹಳೆಯ ಶ್ರೀನಾಥ್ ಜೀ ದೇವಾಲಯಕ್ಕೆ ನರೇಂದ್ರ ಮೋದಿ ಅವರು ಐತಿಹಾಸಿಕ ಭೇಟಿ ಪೂರ್ಣಗೊಳಿಸಿದ್ದಾರೆ. ಬಹರೇನ್ ಸಮಾಜದ ಬಹುತ್ವವನ್ನು ಈ ದೇವಾಲಯವು ಪ್ರತಿನಿಧಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರಾದ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಶ್ರೀನಾಥ್ ಜೀ (ಶ್ರೀಕೃಷ್ಣ) ದೇಗುಲದ ಪುನರ್ ಅಭಿವೃದ್ಧಿ ಕಾರ್ಯಕ್ರಮ ಸದ್ಯದಲ್ಲೇ ಆರಂಭವಾಗಲಿದೆ. $ 4.2 ಮಿಲಿಯನ್ ವೆಚ್ಚದಲ್ಲಿ ಹದಿನಾರು ಸಾವಿರದ ಐನೂರು ಚದರಡಿ ಅಳತೆಯ ಭೂಮಿಯಲ್ಲಿ, ನಾಲ್ಕು ಅಂತಸ್ತಿನಲ್ಲಿ ನಲವತ್ತೈದು ಸಾವಿರ ಚದರಡಿ ನಿರ್ಮಾಣವನ್ನು ಮೂವತ್ತು ಮೀಟರ್ ಎತ್ತರದಲ್ಲಿ ನಿರ್ಮಿಸಲಾಗುತ್ತದೆ.
Thank you Bahrain for the warmth and affection
— Raveesh Kumar (@MEAIndia) August 25, 2019
PM @narendramodi concludes his historic visit with prayers at the 200 years old Shreenathji Temple in #Manama, the oldest temple in the region. The temple reflects the pluralism of Bahraini society. pic.twitter.com/no1fei2UPs
ಬಹರೇನ್ ನ ಈ ದೇಗುಲದಲ್ಲಿ ಹಿಂದೂ ಸಾಂಪ್ರದಾಯಿಕ ಮದುವೆಗಳು ನಡೆಸಲು ಅನುಕೂಲ ಆಗುವಂತೆ ಕೂಡ ವ್ಯವಸ್ಥೆ ಮಾಡಲಾಗುತ್ತದೆ. ಆ ಮೂಲಕ ಬಹರೇನ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶ ಕೂಡ ಇದೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications