ಲಂಡನ್ ಏರ್ ಫೋರ್ಟಿನಲ್ಲಿ ಸೋಮಯಾಜಿಯವರ ವಿಭೂತಿ ಅಳಿಸಿದ್ದೇಕೆ?
ತಪಾಸಣೆಯ ಹೆಸರಿನಲ್ಲಿ ಜ್ಯೋತಿಷಿ ಸೋಮಯಾಜಿಯವರ ವಿಭೂತಿ, ಕುಂಕುಮ ಮತ್ತು ಧರಿಸಿದ್ದ ಶಲ್ಯ, ಬಟ್ಟೆಗಳನ್ನು ತೆಗೆಸಿ ಲಂಡನ್ ಏರ್ ಪೋರ್ಟ್ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ.
ಲಂಡನ್, ಏಪ್ರಿಲ್ 21: ಲಂಡನ್ನಿನಿಂದ ಬೆಂಗಳೂರಿಗೆ ಹೊರಟಿದ್ದ ಪ್ರಖ್ಯಾತ ಜ್ಯೋತಿಷಿ ದೈವಜ್ಞ ಕೆ.ಎನ್. ಸೋಮಯಾಜಿ ಅವರಿಗೆ ಲಂಡನ್ನಿನ ಏರ್ ಪೋರ್ಟಿನಲ್ಲಿ ಅಪಮಾನವಾಗಿದೆ.
ತಪಾಸಣೆಯ ಹೆಸರಿನಲ್ಲಿ ಏರ್ ಪೋರ್ಟ್ ಸಿಬ್ಬಂದಿ ಸೋಮಯಾಜಿಯವರ ವಿಭೂತಿ, ಕುಂಕುಮ ಮತ್ತು ಧರಿಸಿದ್ದ ಶಲ್ಯ, ಬಟ್ಟೆಗಳನ್ನು ತೆಗೆಸಿ, ಸುಮಾರು ಒಂದೂವರೆ ಗಂಟೆಗಳ ಕಾಲ ಅವರನ್ನು ತಪಾಸಣೆ ನಡೆಸಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.

ಇದರಿಂದ ಮುಜುಗರಕ್ಕೀಡಾದ ಸೋಮಯಾಜಿ, ಏರ್ ಪೋರ್ಟ್ ಸಿಬ್ಬಂದಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications