ಸೌರಮಂಡಲದಿಂದ ಓಡಿ ಹೋಗಿದ್ದ ನಕ್ಷತ್ರ ವಾಪಸ್ ಬಂತು!
ನವದೆಹಲಿ, ಫೆ. 18: ಬ್ರಹ್ಮಾಂಡದ ಸೌರ ವ್ಯವಸ್ಥೆಯಲ್ಲಿ ಹಲವು ನಕ್ಷತ್ರಗಳು ಹಾಗೂ ಗ್ರಹಗಳು ನಿಗದಿತ ಕಕ್ಷೆಯಲ್ಲಿ ನಿರ್ಲಿಪ್ತವಾಗಿ ಸುತ್ತುತ್ತವೆ. ಆದರೆ, ಇಲ್ಲಿಯೂ ಅಂಕೆ ಮೀರಿ ಕೆಲವು ನಕ್ಷತ್ರಗಳು ದಾರಿ ತಪ್ಪಿ ಕಣ್ಮರೆಯಾಗುತ್ತವೆ.
ಹೀಗೆಯೇ ಸೌರಮಂಡಲದಿಂದ ಸುಮಾರು 70,000 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ನಕ್ಷತ್ರವೊಂದು ಮತ್ತೆ ವಾಪಸ್ ಬಂದಿದೆ ಎಂದು ಅಂತಾರಾಷ್ಟ್ರೀಯ ಖಗೋಳಶಾಸ್ತ್ರಜ್ಞರ ತಂಡವೊಂದು ತಿಳಿಸಿದೆ. "Scholz's star" ಎಂದು ಹೆಸರಿಸಲಾಗಿದೆ. [ಮಂಗಳಗ್ರಹದಲ್ಲಿ ವಾಸಕ್ಕೆ ತಯಾರಿ]

ಇದು ಸೌರಮಂಡಲದ ಅತ್ಯಂತ ಹೊರಪದರವಾದ ಊರ್ಟ್ ಕ್ಲೌಡ್ ಎಂಬಲ್ಲಿ ಒಳಕ್ಕೆ ತೂರಿಕೊಂಡಿದೆ. ಧೂಮಕೇತುಗಳ ಉಗಮವಾಗುವುದು ಕೂಡ ಇದೇ ಸ್ಥಳದಲ್ಲಿ ಎಂಬುದು ಗಣನೀಯ ಅಂಶ. ಅಮೆರಿಕದ ನ್ಯೂಯಾರ್ಕ್ನಲ್ಲಿರುವ ರೊಚೆಸ್ಟರ್ ವಿಶ್ವವಿದ್ಯಾಲಯದ ಪ್ರೊ. ಎರಿಕ್ ಮಾಮಾಜೆಕ್ ನೇತೃತ್ವದ ಖಗೋಳ ಶಾಸ್ತ್ರಜ್ಞರ ತಂಡ ಈ ನಕ್ಷತ್ರವನ್ನು ಪತ್ತೆ ಹಚ್ಚಿದೆ. [ಮಂಗಳನ ಅಂಗಳಕ್ಕೆ 3 ಭಾರತೀಯರು]
ಸುಮಾರು 70 ಸಾವಿರ ವರ್ಷಗಳ ಹಿಂದೆ 0.8 ಜ್ಯೋತಿರ್ವರ್ಷ (8 ಲಕ್ಷ ಕಿ.ಮೀ.) ಗಳಷ್ಟು ದೂರ ಓಡಿ ಹೋಗಿತ್ತು. ನಮ್ಮ ಸೌರ ಮಂಡಲಕ್ಕೆ ಅತ್ಯಂತ ಹತ್ತಿರದಲ್ಲಿ ಅಂದರೆ 4.2 ಜ್ಯೋತಿರ್ವರ್ಷಗಳಷ್ಟು ದೂರವಿರುವ ಮತ್ತೊಂದು ನಕ್ಷತ್ರ Proxima Centauri ಗೆ ಅತ್ಯಂತ ಹತ್ತಿರದಲ್ಲಿದೆ. [ಮಂಗಳನಲ್ಲಿ ಮೋಡವಿದೆಯಂತೆ]
ಸೌರಮಂಡಲದೊಳಕ್ಕೆ ಬಂದ ನಂತರ Scholz's ನಕ್ಷತ್ರವು ಮತ್ತೆ ತನ್ನ ನಿಯಮಿತ ಪಯಣ ಆರಂಭಿಸಿದೆ. ಸುಮಾರು 70 ಸಾವಿರ ವರ್ಷಗಳ ಹಿಂದೆ ಬದುಕಿದ್ದ ನಮ್ಮ ಪೂರ್ವಜರಿಗೆ ಈ ನಕ್ಷತ್ರ ಬರಿಗಣ್ಣಿಂದ ಕಾಣುತ್ತಿತ್ತು ಎಂದು ಸಂಶೋಧಕರು ಅಂದಾಜಿಸಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications