58 ಪಾಕಿಗಳ ಹೆಣ ಕೆಡವಿದ ತಾಲಿಬಾನ್ ಸೈನಿಕರು, ಭಾರತದ ಶತ್ರುಗಳಿಗೆ ತಕ್ಕ ಪಾಠ... Pakistani Soldiers
ಪಾಪಿ ಪಾಕಿಸ್ತಾನ ಕೆಲವು ತಿಂಗಳ ಹಿಂದೆ ಭಾರತೀಯರ ಮೇಲೆ ದಾಳಿ ಮಾಡಿ ಸರಿಯಾದ ಪಾಠ ಕಲಿತು ಸೈಲೆಂಟ್ ಆಗಿತ್ತು. ಆದರೆ ಇದೀಗ ದಿಢೀರ್ ಮತ್ತೆ ಬಾಲ ಬಿಚ್ಚಿರುವ ಪಾಪಿ ಪಾಕಿಸ್ತಾನ, ಮತ್ತೊಂದು ನೆರೆಯ ದೇಶ ಅಫ್ಘಾನಿಸ್ತಾನ ಮೇಲೆ ಭೀಕರ ದಾಳಿ ಮಾಡಿದೆ. ಈ ದಾಳಿಗೆ ಸರಿಯಾದ ಉತ್ತರವನ್ನೂ ನೀಡಿರುವ ತಾಲಿಬಾನ್ ಸೈನಿಕರು, ಪಾಕಿಸ್ತಾನ ಸೇನೆ ಮುಟ್ಟಿ ಮುಟ್ಟಿ ನೋಡುಕೊಳ್ಳುವಂತೆ ಇದೀಗ ಉತ್ತರ ಕೊಟ್ಟಿದ್ದಾರೆ. 58 ಪಾಕಿಗಳ ಹೆಣ ಕೆಡವಿದ ತಾಲಿಬಾನ್ ಸೈನಿಕರು ಭಾರತದ ಶತ್ರುಗಳಿಗೆ ತಕ್ಕ ಪಾಠ ಕಲಿಸಿದ್ದಾರೆ.
ಪಾಕಿಸ್ತಾನಕ್ಕೆ ಈ ಜನ್ಮದಲ್ಲಿ ಬುದ್ಧಿ ಬರೋದಿಲ್ಲ ಅನ್ನೋ ಮಾತು ಪದೇ ಪದೇ ಪ್ರೂವ್ ಆಗುತ್ತಿದೆ. ಹೀಗೆ ತನ್ನ ಅಕ್ಕಪಕ್ಕದ ದೇಶಗಳ ಜೊತೆಗೆ ನಿರಂತರವಾಗಿ ಕಿರಿಕ್ ಮಾಡುತ್ತಿರುವ ಪಾಕಿಸ್ತಾನ ಈಗ ಮತ್ತೊಂದು ಚಪ್ಪಡಿ ಕಲ್ಲು ತಲೆ ಮೇಲೆ ಹಾಕಿಕೊಂಡಿದೆ. ಅಫ್ಘಾನ್ ಇಸ್ಲಾಮಿಕ್ ಎಮಿರೇಟ್ ಪಡೆಗಳು ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಿವೆ.

ವಿವಾದಿತ ಪ್ರದೇಶವಾದ ಡ್ಯುರಾಂಡ್ ರೇಖೆಯ ಉದ್ದಕ್ಕೂ ದಿಢೀರ್ ಪಾಕಿಸ್ತಾನ ಸೇನೆಯ ವಿರುದ್ಧ ಭೀಕರ ದಾಳಿ ನಡೆಸಿದೆ ತಾಲಿಬಾನ್. ಈ ದಾಳಿ ಬಗ್ಗೆ ತಾಲಿಬಾನ್ ಸರ್ಕಾರದ ವಕ್ತಾರ, ಜಬೀವುಲ್ಲಾ ಮುಜಾಹಿದ್ ಮಾಹಿತಿ ನೀಡಿದ್ದು, ಮತ್ತಷ್ಟು ಕಠಿಣ ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನು ಭಾರತದ ಜೊತೆಯಲ್ಲಿ ಅಫ್ಘಾನಿಸ್ತಾನ ಸಂಬಂಧ ಗಟ್ಟಿ ಆಗುತ್ತಿರುವ ಈ ಸಮಯದಲ್ಲೇ ಈ ರೀತಿಯ ಕಿರಿಕ್ ಆಗಿದೆ. ಹೀಗಾಗಿ 58 ಪಾಕಿಗಳ ಹೆಣ ಕೆಡವಿದ ತಾಲಿಬಾನ್...
58 ಪಾಕಿಗಳ ಹೆಣ ಕೆಡವಿದ ತಾಲಿಬಾನ್...
ತಾಲಿಬಾನ್ ಪಡೆಗಳು ಪಾಕಿಸ್ತಾನದ ವಿರುದ್ಧ ಎಷ್ಟು ರೊಚ್ಚಿಗೆದ್ದಿವೆ ಅಂದ್ರೆ ಈಗ ಘೋರ ಯುದ್ಧವೇ ಶುರು ಆಗಿ ಹೋಗಿದೆ. ಏನು ತಪ್ಪೇ ಮಾಡದಿದ್ದರೂ ಸುಮ್ ಸುಮ್ನೆ ಮೇಲೆ ಬಂದಿರುವ ಪಾಪಿ ಪಾಕ್ ಸೇನೆಗೆ ಓಡಾಡಿಸಿಕೊಂಡು ಬಾರಿಸುತ್ತಿದೆ ಅಫ್ಘಾನಿಸ್ತಾನ. ಹೀಗೆ ತಾಲಿಬಾನ್ ಪಡೆಗಳು ಅಫ್ಘಾನಿಸ್ತಾನದ ರಕ್ಷಣೆಗಾಗಿ ನಡೆಸಿದ ಕಾರ್ಯಾಚರಣೆ ವೇಳೆ 58 ಪಾಕ್ ಸೈನಿಕರು ಜೀವ ಬಿಟ್ಟಿದ್ದಾರೆ, 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
20 ಪಾಕ್ ಭದ್ರತಾ ಶಿಬಿರಗಳು ಉಡೀಸ್!
ತಾಲಿಬಾನ್ ಸರ್ಕಾರದ ವಕ್ತಾರ ಜಬೀವುಲ್ಲಾ ಮುಜಾಹಿದ್ ಇದೀಗ ಪಾಕಿಸ್ತಾನ ಸೇನೆ & ಅಲ್ಲಿನ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದು, ಅಫ್ಘಾನಿಸ್ತಾನದ ಸಾರ್ವಭೌಮತ್ವದ ರಕ್ಷಣೆಗೆ ನಾವು ಎಲ್ಲಾ ರೀತಿ ಕ್ರಮ ಜರುಗಿಸಲು ಸಿದ್ಧ. ಅಫ್ಘಾನಿಸ್ತಾನದ ಸಾರ್ವಭೌಮತ್ವದ ಯಾವುದೇ ರೀತಿಯ ಉಲ್ಲಂಘನೆಗೆ ಉತ್ತರವನ್ನು ನೀಡದೆ ಸುಮ್ಮನೆ ಇರೋದಿಲ್ಲ ಅನ್ನೋ ಖಡಕ್ ಸಂದೇಶವನ್ನು ಕೂಡ ಪಾಕಿಸ್ತಾನದ ನಾಯಕರಿಗೆ & ಸೇನಾಧಿಕಾರಿಗಳಿಗೆ ರವಾನಿಸಲಾಗಿದೆ. ಅಫ್ಘಾನ್ ನಡೆಸಿದ ದಾಳಿಯಲ್ಲಿ 20 ಪಾಕ್ ಭದ್ರತಾ ಶಿಬಿರಗಳನ್ನು ನಾಶ ಮಾಡಲಾಗಿದ್ದು, ಅಫ್ಘಾನ್ ಕೂಡ 9 ಸೈನಿಕರನ್ನು ಕಳೆದುಕೊಂಡಿದೆ. ಕತಾರ್ ಮತ್ತು ಸೌದಿಯ ಮನವಿ ಬೆನ್ನಲ್ಲೇ ಕಾರ್ಯಾಚರಣೆ ನಿಲ್ಲಿಸಿದ್ದೇವೆ ಎಂದು ಅಫ್ಘಾನಿಸ್ತಾನ ತಿಳಿಸಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications