ಕೆನಡಾದಲ್ಲಿ 24 ವರ್ಷದ ಸಿಖ್ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ
ಅಲ್ಬರ್ಟಾ, ಡಿಸೆಂಬರ್ 13: ಕೆನಡಾದ ಅಲ್ಬರ್ಟಾ ಪ್ರಾಂತ್ಯದಲ್ಲಿ 24 ವರ್ಷದ ಭಾರತೀಯ ಮೂಲದ ಸಿಖ್ ವ್ಯಕ್ತಿಯೊಬ್ಬ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ. ಎಡ್ಮಂಟನ್ ವೈದ್ಯಕೀಯ ಪರೀಕ್ಷಕರು ಶವಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ, ಪೊಲೀಸರು ಅವರ ಸಾವಿಗೆ ಗುಂಡಿನ ದಾಳಿ ಕಾರಣವೆಂದು ತಿಳಿಸಿದ್ದಾರೆ.
ಮೃತನನ್ನು ಸಂರಾಜ್ ಸಿಂಗ್ ಎಂದು ಗುರುತಿಸಲ್ಪಟ್ಟಿರುವ ಪೊಲೀಸರು ಆಗ್ನೇಯ ಎಡ್ಮಂಟನ್ನಲ್ಲಿ ಡಿಸೆಂಬರ್ 3 ರಂದು ರಾತ್ರಿ 8.40ಕ್ಕೆ (ಸ್ಥಳೀಯ ಕಾಲಮಾನ) ಗುಂಡೇಟಿನ ದಾಳಿಯ ಕರೆ ಸ್ವೀಕರಿಸಿ ಹೋಗುವಾಗ ಘಟನೆ ಬೆಳಕಿಗೆ ಬಂದಿದೆ.
ಕೆನಡಾದಲ್ಲಿ ನಡೆದ ಸಿಖ್ ಹತ್ಯೆಗಳ ಸರಣಿಯಲ್ಲಿ ಸಂರಾಜ್ ಸಿಂಗ್ ಗುಂಡೇಟಿನಿಂದ ಸಾವನ್ನಪ್ಪಿದ ಘಟನೆ ಇತ್ತೀಚಿನದು. ಡಿಸೆಂಬರ್ 3 ರಂದು 51 ಸ್ಟ್ರೀಟ್ ಮತ್ತು 13 ಅವೆನ್ಯೂ ಪ್ರದೇಶದಲ್ಲಿ ಗುಂಡಿನ ದಾಳಿಗಳು ನಡೆದಿದ್ದವು. ಬುಧವಾರ ಡಿಸೆಂಬರ್ 7, 2022 ರಂದು, ಎಡ್ಮಂಟನ್ ವೈದ್ಯಕೀಯ ಪರೀಕ್ಷಕರು ಸತ್ತವರ ಶವಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಅವರನ್ನು 24 ವರ್ಷದ ಸಂರಾಜ್ ಸಿಂಗ್ ಎಂದು ಗುರುತಿಸಲಾಗಿದೆ. ಸಾವಿಗೆ ಕಾರಣ ಗುಂಡೇಟಿನ ಗಾಯಗಳು ಮತ್ತು ಸಾವಿನ ವಿಧಾನವು ನರಹತ್ಯೆಯಾಗಿದೆ ಎಂದು ಎಡ್ಮಂಟನ್ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸಂರಾಜ್ ಸಿಂಗ್ ವಾಹನದಲ್ಲಿ ಪತ್ತೆಯಾಗಿದ್ದಾರೆ. ತುರ್ತು ವೈದ್ಯಕೀಯ ಸೇವೆಗಳು ಸ್ಥಳಕ್ಕೆ ತಲುಪುವವರೆಗೆ ಪೊಲೀಸರು ಸಿಪಿಆರ್ ಅನ್ನು ನಿರ್ವಹಿಸಿದರು. ತುರ್ತು ವೈದ್ಯಕೀಯ ಸೇವೆಗಳು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಯ ಸಮಯದಲ್ಲಿ ವಾಹನವೊಂದು ಸ್ಥಳದಿಂದ ಹೊರಟು ಹೋಗುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳು ನರಹತ್ಯೆಯ ಸಮಯದಲ್ಲಿ ಸ್ಥಳದಿಂದ ಹೊರಟುಹೋದ ವಾಹನದ ಫೋಟೋವನ್ನು ಬಿಡುಗಡೆ ಮಾಡಿದ್ದು, ಪೊಲೀಸರು ವಾಹನವನ್ನು ಗುರುತಿಸಿದರೆ ತಿಳಿಸುವಂತೆ ನಿವಾಸಿಗಳಿಗೆ ಕರೆ ನೀಡಿದರು.
ಡಿಸೆಂಬರ್ 3 ರಂದು ಕೆನಡಾದ ಮಿಸ್ಸಿಸೌಗಾದ ಗ್ಯಾಸ್ ಸ್ಟೇಷನ್ನಲ್ಲಿ 21 ವರ್ಷದ ಸಿಖ್ ಮಹಿಳೆಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಪೀಲ್ ಪ್ರಾದೇಶಿಕ ಪೊಲೀಸರು ಸೋಮವಾರ ಆರೋಪಿಯನ್ನು ಪವನ್ಪ್ರೀತ್ ಕೌರ್ ಎಂದು ಗುರುತಿಸಿದ್ದಾರೆ. ಮೃತಳು ಗ್ಯಾಸ್ ಸ್ಟೇಷನ್ನ ಉದ್ಯೋಗಿ ಎಂದು ಸೇರಿಸಿದ್ದಾರೆ ಎಂದು ಸಿಬಿಸಿ ವರದಿ ಮಾಡಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications