Get Updates
Get notified of breaking news, exclusive insights, and must-see stories!

ನೇಪಾಳ: ಬಸ್ ಅಪಘಾತ, ಭಾರತದ ಯಾತ್ರಿಗಳ ಸಾವು

ಕಠ್ಮಂಡು, ಏ.22: ನೇಪಾಳದ ಧಾಡಿಂಗ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಬಸ್ ಅಪಘಾತದಲ್ಲಿ 12 ಮಂದಿ ಭಾರತೀಯರು ಮೃತಪಟ್ಟಿದ್ದಾರೆ. ಭಾರತದ ಯಾತ್ರಾರ್ಥಿಗಳು ಪಶುಪತಿನಾಥ ದೇಗುಲ ದರ್ಶನ ಮುಗಿಸಿಕೊಂಡು ಗೋರಖ್ ಪುರಕ್ಕೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಕಠ್ಮಂಡುವಿನಿಂದ ಗೋರಖ್‌ಪುರಕ್ಕೆ ಹೊರಟಿದ್ದ ಖಾಸಗಿ ಬಸ್ ಧಾಡಿಂಗ್‌ ಜಿಲ್ಲೆಯ ನೌಬಿಸೆ ಗ್ರಾಮದ ಬಳಿ ಬೆಟ್ಟದಿಂದ ಕೆಳಗುರುಳಿದಿದೆ. ನೇಪಾಳದಿಂದ ಸುಮಾರು 50-60 ಕಿ.ಮೀ ದೂರದಲ್ಲಿ ಜೈಪ್ರಿ ನದಿ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.

12 Indian pilgrims die in bus accident in Nepal
ಈ ದುರ್ಘಟನೆಯಲ್ಲಿ 12 ಜನ ಭಾರತೀಯರು ಮೃತ ಪಟ್ಟಿದ್ದು, 27 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು , ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಎಸ್ ಪಿ ಬಿಶ್ವೋರಾಜ್ ಪೊಖ್ರಾರೆಲ್ ಹೇಳಿದ್ದಾರೆ.

ಮೃತಪಟ್ಟವರು ಎಲ್ಲರೂ ಗುಜರಾತ್ ಮೂಲದವರು ಎಂದು ತಿಳಿದು ಬಂದಿದೆ. ಇವರೆಲ್ಲ ನೇಪಾಳ ಪ್ರವಾಸ ಕೈಗೊಂಡಿದ್ದರು. ಗಾಯಗೊಂಡವರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ನೇಪಾಳದಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಸ್ ನದಿಗೆ ಬಿದ್ದು , 20 ಜನ ಮೃತಪಟ್ಟಿದ್ದರು.[ವರದಿ ಇಲ್ಲಿ ಓದಿ] (ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+