ತಾರಾಪುಂಜದಲ್ಲಿ ಭೂಮಿಗಿಂತ ದೊಡ್ಡ ವಜ್ರ ಪತ್ತೆಯಾಯ್ತು!

ಕುತೂಹಲಕಾರಿ ಸಂಗತಿಯೆಂದರೆ ಭೂಮಿಗಿಂತ ದೊಡ್ಡದಾದ ಗ್ರಹ/ನಕ್ಷತ್ರಗಳು ತಾರಾಲೋಕದಲ್ಲಿದೆ ಎಂದು ಹೇಳುತ್ತಾ ಬಂದಿರುವ ಖಗೋಳಶಾಸ್ತ್ರಜ್ಞರು ಈ ವಜ್ರವೂ ಭೂಮಿಗಿಂತ ದೊಡ್ಡದಾಗಿದೆ ಎಂದು ಪ್ರಕಟಿಸಿದ್ದಾರೆ.
Wisconsin-Milwaukee University ಪ್ರೊ. ಡೇವಿಡ್ ಕೆಪ್ಲಾನ್ ಅವರು ಈ ವಜ್ರ ನಕ್ಷತ್ರದ ಇರುವನ್ನು ಖಚಿತಪಡಿಸಿದ್ದಾರೆ. ಇದು ಭೂಮಿಯ ಮೇಲಿನ ವಜ್ರದಂತೆ ಫಳಫಳಿಸುವ ಬದಲು ಪೇಲವವಾಗಿದೆ. ಹಾಗಾಗಿಯೇ ಅದು ಕಣ್ಣಿಗೆ ಬಿದ್ದಿಲ್ಲ. ಭೂಮಿಯ ಮೇಲಿಂದ ಟೆಲಿಸ್ಕೋಪ್ ಮೂಲಕ ಪತ್ತೆಹಚ್ಚಲು ಸಾಧ್ಯವಾಗದಷ್ಟು ಇವು ಬಿಳಿಚಿಕೊಂಡಿವೆ ಎಂದು ತಿಳಿಸಿದ್ದಾರೆ. (ಮತ್ತೊಂದು ವಾಸಯೋಗ್ಯ ಭೂಮಿ ಪತ್ತೆ ಹಚ್ಚಿದ NASA!)
ಈ ಬಿಳಿ ಕುಬ್ಜ ನಕ್ಷತ್ರವು ತನ್ನಲ್ಲಿರುವ ಉಷ್ಣ ಶಕ್ತಿಯನ್ನು ಸಂಪೂರ್ಣವಾಗಿ ಹೊರಹಾಕಿ ತನ್ನ ಜೀವಿತಾವಧಿಯ ಕೊನೆ ಕೊನೆಗೆ ತ್ಯಾಜ್ಯವಾಗಿ ಉಳಿದ ಇಂಗಾಲ ಮತ್ತು ಆಮ್ಲಜನಕವು ಶೀತಲ ಸ್ಥಿತಿಯಲ್ಲಿ ಘನೀಕೃತಗೊಂಡಿದೆ. ಅದು ವಜ್ರದ ಹರಳು ರೂಪದಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡಿದೆ. (ಅಬ್ಬಾ! ಬೆಳಕಿಗಿಂತ ವೇಗವಾಗಿ ಹಾರುವ ಆಕಾಶನೌಕೆ)
ಮಿಲ್ಕಿ ವೆ ಕಾಲದ್ದು: ಹಿಂದೊಮ್ಮೆ ತನ್ನಲ್ಲಿನ ಭಾರಿ ಉಷ್ಣ ಶಕ್ತಿಯೊಂದಿಗೆ ಭಯಂಕರವಾಗಿದ್ದ ಈ ನಕ್ಷತ್ರವು ಇದೀಗ ಶಾಂತಗೊಂಡು ವಜ್ರದ ಹರಳಾಗಿದೆ. ಅಂದಹಾಗೆ 11 ಶತಕೋಟಿ ವರ್ಷಗಳಷ್ಟು ಹಳೆಯದಾದ ನಕ್ಷತ್ರ ಇದಾಗಿದೆ. PSR J2222-0137 ಹೆಸರಿನ ಈ ನಕ್ಷತ್ರವನ್ನು ಕಾಣಲು ಖಗೋಳಶಾಸ್ತ್ರಜ್ಞರಿಗೆ ಅಪರಿಚಿತ ವಸ್ತುವೊಂದು ಸತತವಾಗಿ ಅಡ್ಡಿಪಡಿಸುತ್ತಿದೆ.
ಸೂರ್ಯನ ಮಧ್ಯ ಭಾಗದಲ್ಲಿರುವ ಉಷ್ಣಾಂಶಕ್ಕಿಂತ (ಶೀತಕ್ಕಿಂತ) 5,000 ಪಟ್ಟು ಈ ವಜ್ರ ನಕ್ಷತ್ರ ತಣ್ಣಗಿದೆ. ಆದರೆ ಗಮನಿಸಿ, ಈ ವಜ್ರ ನಕ್ಷತ್ರದಲ್ಲಿ ಇನ್ನೂ 2,700 ಡಿಗ್ರಿ ಸೆಲ್ಸಿಷಿಯಸ್ (ಅಂದರೆ 4,892 ಡಿಗ್ರಿ ಫ್ಯಾರನ್ ಹೀಟ್) ಉಷ್ಣಾಂಶವಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications