'ನಮ್ಮ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಕ್ಕೆ, ನಿಮ್ಮ ಸೈನಿಕರನ್ನು ಕೊಂದ್ವಿ'
ಮಾವೋವಾದಿ ಕಮ್ಯೂನಿಸ್ಟ್ ಪಕ್ಷದ ದಂಡಕಾರಣ್ಯ ವಿಶೇಷ ಸಮಿತಿ ಸುಕ್ಮಾ ದಾಳಿಗೆ ಪ್ರತಿಕ್ರಿಯೆ ನೀಡಿದ್ದು ಸುಕ್ಮಾ ದಾಳಿ, ಬುಡಕಟ್ಟು ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಪ್ರತೀಕಾರ ಎಂದು ಪ್ರತಿಪಾದಿಸಿದೆ.
ಛತ್ತೀಸ್ ಗಢ, ಏಪ್ರಿಲ್ 28: ಸುಕ್ಮಾ ದಾಳಿಯಲ್ಲಿ 25 ಸಿಆರ್ಪಿಎಫ್ ಜವಾನರು ಅಸುನೀಗಿದ ನಂತರ ಮಾವೋವಾದಿಗಳ ವಕ್ತಾರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾವೋವಾದಿ ಕಮ್ಯೂನಿಸ್ಟ್ ಪಕ್ಷದ ದಂಡಕಾರಣ್ಯ ವಿಶೇಷ ಸಮಿತಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು ಸುಕ್ಮಾ ದಾಳಿ, ಬುಡಕಟ್ಟು ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಪ್ರತೀಕಾರ ಎಂದು ಪ್ರತಿಪಾದಿಸಿದೆ.[ಸಿಆರ್ಪಿಎಫ್ ನೂತನ ಮುಖ್ಯಸ್ಥರಾಗಿ ರಾಜೀವ್ ರೈ]
ಈ ಕುರಿತು ಆಡಿಯೋ ಟೇಪ್ ಒಂದನ್ನು ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಮಾವೋವಾದಿಗಳ ವಕ್ತಾರ ವಿಕಲ್ಪ್ ಸಿಆರ್ಪಿಎಫ್ ಜವಾನರ ಮೇಲೆ ಯಾವುದೇ ರೀತಿಯಲ್ಲಿ ಹಿಂಸೆ ನಡೆಸಿಲ್ಲ. ಗಾಯಗೊಂಡಿರುವ ದೇಹಗಳನ್ನು ತೋರಿಸಿ ಕಾರ್ಪೋರೇಟ್ ಮಾಧ್ಯಮಗಳು ಸುಳ್ಳು ಸುದ್ದಿ ಹರಡುತ್ತಿವೆ ಎಂದು ದೂರಿದ್ದಾರೆ.

ಈ ದಾಳಿ ಸರಕಾರ ಮತ್ತು ಭದ್ರತಾ ಪಡೆಗಳಿಗೆ ನಾವು ನೀಡಿದ ಉತ್ತರವಾಗಿದೆ.ಇಲ್ಲಿನ ಬುಟಕಟ್ಟು ಜನರ ಮೇಲೆ ಭದ್ರತಾ ಪಡೆಗಳು ನಿರಂತರ ಲೈಂಗಿಕ ದೌರ್ಜನ್ಯ ನಡೆಸಿವೆ. ಈ ದೌರ್ಜನ್ಯಗಳಿಗೆ ಇಂಥಹದ್ದೊಂದು ಉತ್ತರ ನೀಡಿದ್ದಕ್ಕಾಗಿ ನಕ್ಸಲರ ಶಸಸ್ತ್ರ ವಿಭಾಗಕ್ಕೆ ಅಭಿನಂದನೆಗಳನ್ನು ಸಲ್ಲಿಸುವುದಾಗಿಯೂ ಅವರು ಆಡಿಯೋದಲ್ಲಿ ಹೇಳಿದ್ದಾರೆ. ಈ ದಾಳಿ ಮೂಲಕ ನಾವು ಜನಪರ ಹೋರಾಟವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ ಎಂದು ಅವರು ತಿಳಿಸಿದ್ದಾರೆ.[ಅಪನಗದೀಕರಣದಿಂದ ನಕ್ಸಲರಿಗೆ ಸಮಸ್ಯೆಯಾಗಿದೆಯಾ? ಖಂಡಿತಾ ಹಾಗನಿಸಲ್ಲ]
ಬುಡಕಟ್ಟು ಮಹಿಳೆಯರ ಗೌರವ ಕಾಪಾಡಲು ನಾವು ಈ ದಾಳಿ ನಡೆಸಿದ್ದೇವೆ ಎಂದಿರುವ ವಕ್ತಾರ, ಬುಟಕಟ್ಟು ಜನರ ಅಶ್ಲೀಲ ಚಿತ್ರಗಳನ್ನೂ ಭದ್ರತಾ ಪಡೆಗಳು ತೆಗೆದಿವೆ ಎಂದೂ ಆರೋಪ ಹೊರಿಸಿದ್ದಾರೆ.
"ಆದಿವಾಸಿಗಳು ರಸ್ತೆ ನಿರ್ಮಾಣವನ್ನು ವಿರೋಧಿಸಿದರು. ಕಾರಣ ರಸ್ತೆ ನಿರ್ಮಾಣ ಮಾಡಿ ಕಾಡಿನಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡಲಾಗುತ್ತದೆ," ಎಂದು ತಮ್ಮ ಹೇಳಿಕೆಯಲ್ಲಿ ವಿಕಲ್ಪ್ ರಸ್ತೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ಪೊರೇಟ್ ಮಾಧ್ಯಮದಿಂದ ಸುಳ್ಳು ಸುದ್ದಿ
ಸಾವಿಗೀಡಾದ ಯೋಧರ ದೇಹಗಳ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಕಾರ್ಪೊರೇಟ್ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಹರಡುತ್ತಿವೆ. ಮಾವೋವಾದಿಗಳ ಮೇಲೆ ಸೈನಿಕರು ನಿರಂತರ ದೌರ್ಜನ್ಯ ನಡೆಸುತ್ತಿದ್ದಾರೆ. ನಾವು ಯಾವತ್ತೂ ಸೈನಿಕರ ಮೇಲೆ ದೌರ್ಜನ್ಯ ನಡೆಸಿಲ್ಲ ಎಂದು ಈ ಹೇಳಿಕೆಯಲ್ಲಿ ದೂರಿದ್ದಾರೆ.[ಛತ್ತೀಸ್ ಗಢ ನಕ್ಸಲರ ದಾಳಿ, ಗುರುತೇ ಸಿಗದಂತಾಗಿದ್ದ ಯೋಧರ ದೇಹ]
ಅಷ್ಟೇ ಅಲ್ಲ ಭದ್ರತಾ ಪಡೆಗಳು ನಕ್ಸಲರ ಮೃತ ದೇಹವನ್ನೂ ಮನೆಯವರಿಗೆ ಹಸ್ತಾಂತರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿವೆ. ದಲಿತರು, ಬುಟಕಟ್ಟು ಜನರು, ಅಲ್ಪಸಂಖ್ಯಾತರ ಸಂಸ್ಕೃತಿ, ಆರ್ಥಿಕತೆಗಳ ಮೇಲೆ ಬ್ರಾಹ್ಮಣರು. ಹಿಂದೂತ್ವವಾದಿಗಳು, ಜಾತಿ ವಾದಿಗಳೂ, ಸಂಘಿಗಳು, ಬಿಜೆಪಿ ಸರಕಾರಗಳು ದೌರ್ಜನ್ಯ ನಡೆಸುತ್ತಿವೆ. ಇದಕ್ಕೆ ಪೊಲೀಸರು ಮತ್ತು ಭದ್ರತಾ ಪಡೆಗಳೇ ರಕ್ಷಣೆ ನೀಡಿವೆ ಎಂದು ದೂರಿದ್ದಾರೆ.
ಯೋಧರು ನಮ್ಮ ಶತ್ರುಗಳಲ್ಲ
ಯೋಧರು ನಮ್ಮ ವಿರೋಧಿಗಳಲ್ಲ. ಆದರೆ ಸರಕಾರದ ಜನ ವಿರೋಧಿ ಧೋರಣೆಯ ಭಾಗವಾಗಿ ಅವರೆಲ್ಲಾ ಹೋರಾಡಲು ಬರುತ್ತಿದ್ದಾರೆ. ಸರಕಾರ, ಗುತ್ತಿಗೆದಾರರು, ಕಾರ್ಪೊರೇಟ್ ಮಾಫಿಯಾಗಳ ಪರವಾಗಿ ಹೋರಾಡಲು ಬರಬೇಡಿ ಎಂದು ಸೈನಿಕರಿಗೆ ಮನವಿ ಮಾಡಿಕೊಳ್ಳುವುದಾಗಿಯೂ ವಿಕಲ್ಪ್ ಇದೇ ಆಡಿಯೋದಲ್ಲಿ ಹೇಳಿದ್ದಾರೆ.
ಈ ರೀತಿಯ ಜನರ ಪರವಾಗಿ ಹೋರಾಡಿ ನಿಮ್ಮ ಜೀವ ಕಳೆದುಕೊಳ್ಳಬೇಡಿ. ಸರಕಾರದ ಹುದ್ದೆ ತೊರೆದು ಜನರ ಉದ್ಧಾರಕ್ಕೆ ಹೋರಾಡಲು ಬನ್ನಿ ಎಂದು ವಿಕಲ್ಪ್ ಸೈನಿಕರಿಗೆ ಕರೆ ನೀಡಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications