ವಿಶ್ವ ತಂಬಾಕು ರಹಿತ ದಿನ: ತಂಬಾಕು ನಿಮ್ಮ ಬದುಕು ಕಸಿಯದಿರಲಿ...
"ಧೂಮಪಾನ ಆರೋಗ್ಯಕ್ಕೆ ಹಾನಿಕರ" ಎಂಬ ಸಾಲು ಓದುವುದಕ್ಕಷ್ಟೇ..! ಸಿನಿಮಾ ಆರಂಭಕ್ಕೂ ಮುನ್ನ ತೋರಿಸುವ ಜಾಹೀರಾತುಗಳೂ ಧೂಮಪಾನದ ಕೆಟ್ಟ ಪರಿಣಾಮಗಳ ಮುಖವನ್ನು ತೋರಿಸಿದರೂ ಆ ಚಟದಿಂದ ಮುಕ್ತವಾಗುವ ಯತ್ನ ಮಾಡುವವರು ತೀರಾ ಕಡಿಮೆ.
ಚಿಕ್ಕ ವಯಸ್ಸಿನಲ್ಲಿಯೇ ಸಿಗರೇಟ್ ಸೇವನೆಗೆ ದಾಸರಾಗಿ ಪರಿತಪಿಸುತ್ತಿರುವವರಿದ್ದಾರೆ. ಬಿಡಬೇಕೆಂದರೂ ಬಿಡುವುದಕ್ಕಾಗದೆ ಹೀಗೆ ಧೂಮಪಾಮಕ್ಕೆ 'ಅಡಿಕ್ಟ್' ಆಗಿರುವವರನ್ನು ಆ ಕೂಪದಿಂದ ಹೊರತರುವ ಯತ್ನವಾಗಿ ಪ್ರತಿ ವರ್ಷ ಮೇ 31 ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ.
ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಅರಿವು ಮೂಡಿಸಿ, ಯುವಕರನ್ನು ಆ ಚಟದಿಂದ ಮುಕ್ತರನ್ನಾಗಿಸುವ ಉದ್ದೇಶದಿಂದ ಆಚರಿಸುವ ಈ ದಿನ ಟ್ವಿಟ್ಟರ್ ನಲ್ಲಿಂದು ಟ್ರೆಂಡಿಂಗ್ ಆಗಿದೆ.
|
ಧೂಮಪಾನ ನಿಲ್ಲಿಸಿ, ಬದುಕಲು ಆರಂಭಿಸಿ!
ಧೂಮಪಾನ ನಿಲ್ಲಿಸಿ, ಬದುಕಲು ಆರಂಭಿಸಿ! ವಿಶ್ವ ತಂಬಾಕು ರಹಿತ ದಿನದಂದು ಎಲ್ಲ ರೀತಿಯ ತಂಬಾಕಿನ ಉತ್ಪನ್ನಗಳಿಗೂ ಗುಡ್ ಬೈ ಹೇಳೋಣ. ಅವುಗಳ ದುಷ್ಪರಿಣಾಮವನ್ನು ಅರಿತುಕೊಳ್ಳೋಣ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ.
|
10 ರಲ್ಲಿ ಒಬ್ಬರು ಸಾವು!
ತಂಬಾಕು ಸೇವನೆಯಿಂದಾಗಿ ಹತ್ತರಲ್ಲಿ ಒಬ್ಬ ಹೃದ್ರೋಗಿ ಸಾಯುತ್ತಿದ್ದಾರೆ. ನಿಮ್ಮ ಹೃದಯವನ್ನೂ, ಆ ಮೂಲಕ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಧೂಮಪಾನ ಬಿಟ್ಟುಬಿಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಮನವಿ ಮಾಡಿಕೊಂಡಿದೆ.
|
ಮರಳಿನಲ್ಲಿ ಜಾಗೃತಿ
ಕಿಲ್ಲರ್ ಟೊಬ್ಯಾಕೋ ಎಂಬ ಹೆಸರಿನಲ್ಲಿ ಮರಳು ಶಿಲ್ಪ ರಚಿಸಿ ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ಮರಳು ಶಿಲ್ಪದಲ್ಲಿ ಚಿತ್ರಸಿದ್ದಾರೆ ಖ್ಯಾತ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್.
|
ತಂಬಾಕು ನಿಮ್ಮನ್ನು ಕೊಲ್ಲುವ ಮೊದಲು ಅದನ್ನು ತ್ಯಜಿಸಿ!
ತಂಬಾಕು ನಿಮ್ಮನ್ನು ಕೊಲ್ಲುವ ಮೊದಲು ಅದನ್ನು ತ್ಯಜಿಸಿಬಿಡಿ. ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯದಿರಿ. ನಿಮ್ಮ ಕುಟುಂಬ, ಸ್ನೇಹಿತರು ಮತ್ತು ನಿಮ್ಮ ದೇಶ ನೀವು ಆರೋಗ್ಯವಂತರಾಗಿರುವುದನ್ನು ಬಯಸುತ್ತದೆ ಎಂದಿದ್ದಾರೆ ಶ್ರೀನಿವಾಸ್ ಬಿ ವಿ.
|
ತಂಬಾಕು ನಿಮ್ಮ ಬದುಕನ್ನು ಕಸಿಯದಿರಲಿ
ತಂಬಾಕು, ನಿಮ್ಮ ಆರೋಗ್ಯಕರ ಮತ್ತು ಸಂತಸದ ಬದುಕನ್ನು ಕಸಿಯಲು ಬಿಡಬೇಡಿ. ಈ ವಿಶ್ವ ತಂಬಾಕು ರಹಿತ ದಿನದಂದು ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ಕೆಲಸ ಮಾಡೋಣ ಎಂದಿದ್ದಾರೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications