ಮೋದಿ, ಶಾ ಜೋಡಿಗೆ ಜೇಟ್ಲಿ ಅತ್ಯಾಪ್ತರಾಗಿದ್ದು ಹೇಗೆ?
ನವದೆಹಲಿ, ಆಗಸ್ಟ್ 24: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಅರುಣ್ ಜೇಟ್ಲಿ ನಿಧನ ವೈಯಕ್ತಿಕ ನಷ್ಟವಾಗಿದೆ.
ಗುಜರಾತ್ ರಾಜಕೀಯ ದಿನಗಳಿಂದಲೂ ಮೋದಿ ಹಾಗೂ ಶಾ ಗೆ ಜೇಟ್ಲಿ ಅತ್ಯಾಪ್ತರು ಹಾಗೂ ಅಪ್ತತ್ಕಾಲದಲ್ಲಿ ಬೆನ್ನೆಲುಬಾಗಿ ನಿಂತ ಬಿಜೆಪಿ ಮುಖಂಡ.
2002ರ ಗುಜರಾಜ್ ಹಿಂಸಾಚಾರದ ಬಳಿಕ ಮೋದಿಯನ್ನು ಕಟ್ಟಿ ಹಾಕಲು ಬಿಜೆಪಿಯಲ್ಲೇ ಸಾಕಷ್ಟು ಜನ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮೋದಿ ಪರವಾಗಿ ನಿಂತು ಮುಖ್ಯಮಂತ್ರಿ ಗಾಧಿಯಲ್ಲೇ ಮುಂದುವರೆಯುವಂತೆ ಕೆಲಸ ಮಾಡಿದವರು ಜೇಟ್ಲಿ, ಆ ಸಂದರ್ಭದಲ್ಲಿ ಜೇಟ್ಲಿ ಗುಜರಾತ್ ಉಸ್ತುವಾರಿ ವಹಿಸಿಕೊಂಡಿದ್ದರು.

ನಂತರ ಯುಪಿಎ ಸರ್ಕಾರ ಬಂದ ಮೇಲೆ ಮೋದಿ ವಿರುದ್ಧ ಕಾನೂನು ಹೋರಾಟಗಳು ಆರಂಭವಾದಾಗಲೂ ಜೇಟ್ಲಿ ದೆಹಲಿ ಮಟ್ಟದಲ್ಲಿ ಎಲ್ಲಾ ರೀತಿಯ ನೆರವನ್ನೂ ನೀಡಿದ್ದರು. ಸೊಹರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿಯೂ ಅಮಿತ್ ಶಾ ಜೈಲು ಪಾಲಾದಾಗ ಹಾಗೂ ರಾಜ್ಯದಿಂದ ಗಡಿ ಪಾರಾದಾಗ ಕಾನೂನು ಹೋರಾಟಕ್ಕೆ ಕಾನೂನು ಹೋರಾಟಕ್ಕೆ ನೆರವಾಗಿದ್ದು ಇದೇ ಜೇಟ್ಲಿ.
ಹೀಗಾಗಿ ರಾಷ್ಟ್ರಮಟ್ಟದಲ್ಲಿ ಮೋದಿ ಶಾ ಜೋಡಿ ಹೆಸರು ಮಾಡುವ ಮುನ್ನವೇ ಅರುಣ್ ಜೇಟ್ಲಿ ಅವರಿಬ್ಬರಿಗೆ ಹತ್ತಿರದವರಾಗಿದ್ದರು.2014ರ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಪ್ರಧಾನಿಯಾದ ಬಳಿಕ ಈ ಸಂಬಂಧ ಪ್ರಖರವಾಗಿ ಗೋಚರಿಸಲು ಆರಂಭಿಸಿತು. ಮೋದಿಯ ಮೊದಲ ಅವಧಿಯಲ್ಲಿ ಅರುಣ್ ಜೇಟ್ಲಿ ನಂಬರ್ 2 ಆಗಿದ್ದರು. ಸರ್ಕಾರಕ್ಕೆ ಯಾವುದೇ ಸಂದರ್ಭದಲ್ಲಿ ನೆರವು ಬೇಕಾದಾಗ ಪ್ರತಿಪಕ್ಷಗಳ ಟೀಕೆಯಿಂದ ಬಚಾವಾಗಬೇಕಾದಾಗ ಮೋದಿ, ಅಮಿತ್ ಶಾ ಮುಖಮಾಡುತ್ತಿದ್ದಿದ್ದು ಜೇಟ್ಲಿ ಕಡೆಗೆ.
ಇದನ್ನು ನಿರೀಕ್ಷಿಸಿದ್ದರಿಂದಲೇ ಲೋಕಸಭಾ ಚುನಾವಣೆ ಸೋತಿದ್ದ ಜೇಟ್ಲಿಗೆ ಪ್ರಭಾವಿ ಖಾತೆಯನ್ನು ನೀಡಲಾಗಿತ್ತು. 2019ರಲ್ಲಿ ಅನಾರೋಗ್ಯದ ಕಾರಣದಿಂದ ಸಂಪುಟದಿಂದ ಹೊರಗುಳಿಯುತ್ತೇನೆ ಎಂದು ಖುದ್ದು ಜೇಟ್ಲಿಯೇ ಹೇಳಿದರೂ ಕೂಡ ಖಾತೆರಹಿತರಾಗಿ ಸಚಿವರಾಗಿ ಮುಂದುವರೆಯುರಿ ಎಂದು ಮೋದಿ, ಶಾ ಮನವಿ ಮಾಡಿದ್ದರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications