ಮೋದಿ, ಶಾ ಜೋಡಿಗೆ ಜೇಟ್ಲಿ ಅತ್ಯಾಪ್ತರಾಗಿದ್ದು ಹೇಗೆ?
ನವದೆಹಲಿ, ಆಗಸ್ಟ್ 24: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಅರುಣ್ ಜೇಟ್ಲಿ ನಿಧನ ವೈಯಕ್ತಿಕ ನಷ್ಟವಾಗಿದೆ.
ಗುಜರಾತ್ ರಾಜಕೀಯ ದಿನಗಳಿಂದಲೂ ಮೋದಿ ಹಾಗೂ ಶಾ ಗೆ ಜೇಟ್ಲಿ ಅತ್ಯಾಪ್ತರು ಹಾಗೂ ಅಪ್ತತ್ಕಾಲದಲ್ಲಿ ಬೆನ್ನೆಲುಬಾಗಿ ನಿಂತ ಬಿಜೆಪಿ ಮುಖಂಡ.
2002ರ ಗುಜರಾಜ್ ಹಿಂಸಾಚಾರದ ಬಳಿಕ ಮೋದಿಯನ್ನು ಕಟ್ಟಿ ಹಾಕಲು ಬಿಜೆಪಿಯಲ್ಲೇ ಸಾಕಷ್ಟು ಜನ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮೋದಿ ಪರವಾಗಿ ನಿಂತು ಮುಖ್ಯಮಂತ್ರಿ ಗಾಧಿಯಲ್ಲೇ ಮುಂದುವರೆಯುವಂತೆ ಕೆಲಸ ಮಾಡಿದವರು ಜೇಟ್ಲಿ, ಆ ಸಂದರ್ಭದಲ್ಲಿ ಜೇಟ್ಲಿ ಗುಜರಾತ್ ಉಸ್ತುವಾರಿ ವಹಿಸಿಕೊಂಡಿದ್ದರು.

ನಂತರ ಯುಪಿಎ ಸರ್ಕಾರ ಬಂದ ಮೇಲೆ ಮೋದಿ ವಿರುದ್ಧ ಕಾನೂನು ಹೋರಾಟಗಳು ಆರಂಭವಾದಾಗಲೂ ಜೇಟ್ಲಿ ದೆಹಲಿ ಮಟ್ಟದಲ್ಲಿ ಎಲ್ಲಾ ರೀತಿಯ ನೆರವನ್ನೂ ನೀಡಿದ್ದರು. ಸೊಹರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿಯೂ ಅಮಿತ್ ಶಾ ಜೈಲು ಪಾಲಾದಾಗ ಹಾಗೂ ರಾಜ್ಯದಿಂದ ಗಡಿ ಪಾರಾದಾಗ ಕಾನೂನು ಹೋರಾಟಕ್ಕೆ ಕಾನೂನು ಹೋರಾಟಕ್ಕೆ ನೆರವಾಗಿದ್ದು ಇದೇ ಜೇಟ್ಲಿ.
ಹೀಗಾಗಿ ರಾಷ್ಟ್ರಮಟ್ಟದಲ್ಲಿ ಮೋದಿ ಶಾ ಜೋಡಿ ಹೆಸರು ಮಾಡುವ ಮುನ್ನವೇ ಅರುಣ್ ಜೇಟ್ಲಿ ಅವರಿಬ್ಬರಿಗೆ ಹತ್ತಿರದವರಾಗಿದ್ದರು.2014ರ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಪ್ರಧಾನಿಯಾದ ಬಳಿಕ ಈ ಸಂಬಂಧ ಪ್ರಖರವಾಗಿ ಗೋಚರಿಸಲು ಆರಂಭಿಸಿತು. ಮೋದಿಯ ಮೊದಲ ಅವಧಿಯಲ್ಲಿ ಅರುಣ್ ಜೇಟ್ಲಿ ನಂಬರ್ 2 ಆಗಿದ್ದರು. ಸರ್ಕಾರಕ್ಕೆ ಯಾವುದೇ ಸಂದರ್ಭದಲ್ಲಿ ನೆರವು ಬೇಕಾದಾಗ ಪ್ರತಿಪಕ್ಷಗಳ ಟೀಕೆಯಿಂದ ಬಚಾವಾಗಬೇಕಾದಾಗ ಮೋದಿ, ಅಮಿತ್ ಶಾ ಮುಖಮಾಡುತ್ತಿದ್ದಿದ್ದು ಜೇಟ್ಲಿ ಕಡೆಗೆ.
ಇದನ್ನು ನಿರೀಕ್ಷಿಸಿದ್ದರಿಂದಲೇ ಲೋಕಸಭಾ ಚುನಾವಣೆ ಸೋತಿದ್ದ ಜೇಟ್ಲಿಗೆ ಪ್ರಭಾವಿ ಖಾತೆಯನ್ನು ನೀಡಲಾಗಿತ್ತು. 2019ರಲ್ಲಿ ಅನಾರೋಗ್ಯದ ಕಾರಣದಿಂದ ಸಂಪುಟದಿಂದ ಹೊರಗುಳಿಯುತ್ತೇನೆ ಎಂದು ಖುದ್ದು ಜೇಟ್ಲಿಯೇ ಹೇಳಿದರೂ ಕೂಡ ಖಾತೆರಹಿತರಾಗಿ ಸಚಿವರಾಗಿ ಮುಂದುವರೆಯುರಿ ಎಂದು ಮೋದಿ, ಶಾ ಮನವಿ ಮಾಡಿದ್ದರು.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ












Click it and Unblock the Notifications