ಅಸರಾಂ ಬಾಪು ಪ್ರಕರಣದಲ್ಲಿ ಗುಜರಾತ್ ಸರಕಾರಕ್ಕೆ 'ಸುಪ್ರಿಂ' ತರಾಟೆ
ನವದೆಹಲಿ, ಆಗಸ್ಟ್ 28: ಸ್ವಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೈಲು ಪಾಲಾಗಿದ್ದಾನೆ. ಆದರೆ ಅದೇ ರೀತಿಯ ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿರುವ ಇನ್ನೊರ್ವ ಸ್ವಘೋಷಿತ ದೇವಮಾನವ ಅಸರಾಂ ಬಾಪು ಇನ್ನೂ ಜೈಲು ಶಿಕ್ಷೆಗೆ ಗುರಿಯಾಗಿಲ್ಲ. ಇದಕ್ಕೆ ಕಾರಣ ನಿಧಾನಗತಿಯ ವಿಚಾರಣೆ.
ಇದೇ ಕಾರಣಕ್ಕೆ ಸುಪ್ರಿಂ ಕೋರ್ಟ್ ಗುಜರಾತ್ ಸರಕಾರವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿದೆ.

ಅಸರಾಂ ಬಾಪು ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ವಿಳಂಬ ಧೋರಣೆ ತಾಳುತ್ತಿರುವ ರಾಜ್ಯ ಸರಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನ್ಯಾಯಾಲಯ, "ಇಲ್ಲಿಯವರೆಗೆ ಸಂತ್ರಸ್ತರನ್ನು ಯಾಕೆ ಪರೀಕ್ಷೆಗೆ ಒಳಪಡಿಸಿಲ್ಲ? ವಿಚಾರಣೆಯಲ್ಲಿ ಯಾಕೆ ತಡವಾಗುತ್ತಿದೆ? ಇಲ್ಲಿಯವರೆಗಿನ ಪ್ರಗತಿ ಏನು ಎಂದು ತಕ್ಷಣ ಅಫಿಡವಿಟ್ ಸಲ್ಲಿಸಿ," ಎಂದು ಗುಜರಾತ್ ಸರಕಾರಕ್ಕೆ ಕಟುವಾಗಿ ಹೇಳಿದೆ.
ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿರುವ ಅಸರಾಂ ಬಾಪು ಗುಜರಾತ್ ನ ಗಾಂಧಿನಗರ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
1997 ರಿಂದ 2006ರ ಮಧ್ಯೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸೂರತ್ ಮೂಲದ ಮಹಿಳೆ ದೂರು ನೀಡಿದ್ದರು. ಆಶ್ರಮ ಇರುವ ಅಹಮದಾಬಾದ್ ಹೊರವಲಯದಲ್ಲಿ ತಾವು ವಾಸವಾಗಿದ್ದಾಗ ಈ ದೌರ್ಜನ್ಯ ನಡೆದಿರುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದರು. ಇದೇ ಹಿನ್ನಲೆಯಲ್ಲಿ ಆಗಸ್ಟ್ 3, 2013ರಲ್ಲಿ ಅಸರಾಂ ಬಾಪು ಬಂಧಿತರಾಗಿದ್ದರು. ಸದ್ಯ ಬಾಪು ಜೈಲಿನಲ್ಲಿದ್ದಾರೆ.












Click it and Unblock the Notifications