Budget 2024: ಪ್ರತ್ಯೇಕ ರೈಲ್ವೆ ಬಜೆಟ್ಗೆ ಬ್ರೇಕ್ ಬಿದ್ದದ್ದು ಏಕೆ ಮತ್ತು ಯಾವಾಗ..?
ನವದೆಹಲಿ, ಜುಲೈ. 23: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23 ರಂದು ಕೇಂದ್ರ ಬಜೆಟ್ 2024 ಅನ್ನು ಮಂಡಿಸುತ್ತಿದ್ದಾರೆ. ಈ ಬಜೆಟ್ನಲ್ಲಿಯೇ ರೈಲ್ವೆ ಬಜೆಟ್ ಕೂಡ ಸೇರಿದೆ. ಆದರೆ, ಕೆಲವು ವರ್ಷಗಳ ಹಿಂದೆ ರೈಲ್ವೆಗೆ ವಿಶೇಷ ಬಜೆಟ್ ಮಂಡಿಸಲಾಗುತ್ತಿತ್ತು.
ಹೌದು.. 2016-17ನೇ ಹಣಕಾಸು ವರ್ಷಕ್ಕೆ ಮೊದಲು, ಕೇಂದ್ರ ಬಜೆಟ್ಗಿಂತ ಕೆಲವು ದಿನಗಳ ಮುಂಚಿತವಾಗಿ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗಿತ್ತು. ಆದರೆ, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2017-18ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸುವಾಗ ಅದರಲ್ಲಿಯೇ ರೈಲ್ವೇ ಬಜೆಟ್ ಅನ್ನು ಕೂಡ ವಿಲೀನಗೊಳಿಸಲಾಗಿತ್ತು. ಹೀಗಾಗಿ 92 ವರ್ಷಗಳ ರೈಲ್ವೆ ಬಜೆಟ್ ಅಧ್ಯಾಯಕ್ಕೆ ಫುಲ್ ಸ್ಟಾಪ್ ಬಿದ್ದಿತ್ತು. ಈಗ ಸಾಮಾನ್ಯ ಬಜೆಟ್ನಲ್ಲಿ ರೈಲ್ವೆ ಬಜೆಟ್ ಅನ್ನು ಸೇರಿಸಿಕೊಳ್ಳಲಾಗಿದೆ.

"ನಾವು ಕೇಂದ್ರ ಬಜೆಟ್ ಅನ್ನು ರೈಲ್ವೆ ಬಜೆಟ್ನೊಂದಿಗೆ ವಿಲೀನಗೊಳಿಸುತ್ತಿದ್ದೇವೆ. ಇನ್ನು ಮುಂದೆ ಒಂದೇ ಬಜೆಟ್ ಇರುತ್ತದೆ. ರೈಲ್ವೆಯ ಕ್ರಿಯಾತ್ಮಕ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲಾಗುವುದು" ಎಂದು ಕೇಂದ್ರ ಹಣಕಾಸು ಸಚಿವ ದಿವಂಗತ ಅರುಣ್ ಜೇಟ್ಲಿ ಹೇಳಿದ್ದರು. ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ನೊಂದಿಗೆ ವಿಲೀನಗೊಳಿಸಲು ಡೆಬ್ರಾಯ್ ಸಮಿತಿಯು ಶಿಫಾರಸು ಮಾಡಿದೆ ಎಂದು ಅವರು ಉಲ್ಲೇಖಿಸಿದ್ದರು.
ಪ್ರತ್ಯೇಕ ರೈಲ್ವೇ ಬಜೆಟ್ ನಿಂತಿದ್ದು ಏಕೆ?
1924ರಲ್ಲಿ ಆರಂಭವಾದ ಸುಮಾರು ಶತಮಾನದಷ್ಟು ಹಳೆಯದಾದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುವ ಪದ್ಧತಿ, 2017 ರಲ್ಲಿ, ಮೊದಲ ಬಾರಿಗೆ ಸಾಮಾನ್ಯ ಬಜೆಟ್ನೊಂದಿಗೆ ವಿಲೀನಗೊಳಿಸಲಾಯಿತು ಮತ್ತು ಈ ಅಭ್ಯಾಸವು ಇಂದಿಗೂ ಮುಂದುವರೆದಿದೆ. ನೀತಿ ಆಯೋಗದ ಶಿಫಾರಸಿನ ಪ್ರಕಾರ ವಿಭಿನ್ನ ರೈಲ್ವೇ ಬಜೆಟ್ ಅನ್ನು ಕೊನೆಗೊಳಿಸಬೇಕು ಎನ್ನಲಾಗಿತ್ತು.

ಈ ಸಮಯದಲ್ಲಿ ರೈಲ್ವೆ ಸಚಿವರಾಗಿದ್ದ ಸುರೇಶ್ ಪ್ರಭು ಶಿಫಾರಸನ್ನು ಸ್ವೀಕರಿಸಿ, ಭಾರತೀಯ ಆರ್ಥಿಕತೆ ಮತ್ತು ರೈಲ್ವೆಯ ಅನುಕೂಲಕ್ಕಾಗಿ ರೈಲ್ವೆ ಮತ್ತು ಕೇಂದ್ರ ಬಜೆಟ್ ಅನ್ನು ಸಂಯೋಜಿಸುವಂತೆ ದಿವಂಗತ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದು ವಿನಂತಿಸಿದ್ದರು. ಅವರ ಪ್ರಸ್ತಾಪವನ್ನು ಅರುಣ್ ಜೇಟ್ಲಿ ಅವರು 2016 ರಲ್ಲಿ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು, ಇದು ಎರಡು ಬಜೆಟ್ಗಳ ಏಕೀಕರಣವನ್ನು ಯೋಜಿಸಲು ವಿಶೇಷ ಸಮಿತಿಯ ರಚನೆಗೆ ಕಾರಣವಾಯಿತು.
ಬ್ರಿಟಿಷ್ ಸರ್ಕಾರದ ವಸಾಹತುಶಾಹಿ ಯುಗದ ನೀತಿ, ಅಕ್ವರ್ತ್ ಸಮಿತಿಯ ಶಿಫಾರಸುಗಳನ್ನು ಆಧರಿಸಿ, ಪ್ರತ್ಯೇಕ ರೈಲ್ವೇ ಬಜೆಟ್ನ ಮಂಡನೆಯನ್ನು ಕಡ್ಡಾಯಗೊಳಿಸಿತು. ಮೊದಲ ರೈಲ್ವೇ ಬಜೆಟ್ 1924 ರಲ್ಲಿ ಪ್ರಕಟವಾದಾಗ, ಭಾರತವು ಎಲ್ಲಾ ಇತರ ಆಡಳಿತಾತ್ಮಕ ಘಟಕಗಳಿಗೆ ಖರ್ಚು ಮಾಡಿದ್ದಕ್ಕಿಂತ ಹೆಚ್ಚಿನ ಹಣದ ಅಗತ್ಯವಿತ್ತು.
ಬಜೆಟ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಪ್ರತ್ಯೇಕ ರೈಲ್ವೇ ಬಜೆಟ್ ನಿಲ್ಲಿಸಲಾಗಿದೆ. ವಿಲೀನವು ಭಾರತೀಯ ರೈಲ್ವೆಯ ಆರ್ಥಿಕ ಆರೋಗ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಏಕೀಕೃತ ಬಜೆಟ್ ಉತ್ತಮ ದೀರ್ಘಕಾಲೀನ ಯೋಜನೆ ಮತ್ತು ಮೂಲಸೌಕರ್ಯದಲ್ಲಿ ಹೂಡಿಕೆಗೆ ಅವಕಾಶ ನೀಡುತ್ತದೆ. ಇದು ಸಾರಿಗೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಸಮಗ್ರವಾದ ವಿಧಾನವನ್ನು ಶಕ್ತಗೊಳಿಸುತ್ತದೆ.
ಸಾಮಾನ್ಯ ಬಜೆಟ್ನೊಂದಿಗೆ ರೈಲು ಬಜೆಟ್ ಅನ್ನು ಸಂಯೋಜಿಸುವುದು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ. ಇದು ಇತರ ವಲಯಗಳೊಂದಿಗೆ ರೈಲ್ವೆ ಹಣಕಾಸುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ ಎಂದು ಖಚಿತಪಡಿಸುತ್ತದೆ. ವಿಲೀನವು ರೈಲ್ವೆ ಮತ್ತು ರಸ್ತೆಗಳು ಮತ್ತು ಜಲಮಾರ್ಗಗಳಂತಹ ಇತರ ಸಾರಿಗೆ ವಿಧಾನಗಳ ನಡುವೆ ಉತ್ತಮ ಸಮನ್ವಯವನ್ನು ಸುಗಮಗೊಳಿಸುತ್ತದೆ.
-
Opinion - Kalyana Karnataka Train: ಕೇಂದ್ರ ಸಚಿವ ವಿ ಸೋಮಣ್ಣ ಅವರೇ ಕನ್ನಡಿಗರ ಸಂಕಷ್ಟ ಸ್ವಲ್ಪ ನೋಡಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ












Click it and Unblock the Notifications