ತಮಿಳುನಾಡಿನಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನ ತಡೆದರೆ ಏನಾಗಬಹುದು: ಎನ್ಟಿಕೆ ಮುಖ್ಯಸ್ಥ ಸೀಮಾನ್ ಕಿಡಿ
ಚೆನ್ನೈ, ಸೆಪ್ಟೆಂಬರ್ 30: ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಬಂದ್ ನಡೆಯುತ್ತಿದ್ದ ವೇಳೆ ತಮ್ಮ ಸಿನಿಮಾ ಚಿತ್ತ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ತಮಿಳು ನಟ ಸಿದ್ಧಾರ್ಥ ಅವರು ನಡೆಸುತ್ತಿದ್ದ ಪತ್ರಿಕಾಗೋಷ್ಟಿಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಅವರಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ತಮಿಳುನಾಡಿನ ರಾಜಕಾರಣಿ ಸೀಮಾನ್ ಅವರು ಕಿಡಿಕಾರಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ನಟ ಸಿದ್ಧಾರ್ಥ್ ಅವರ ಪತ್ರಿಕಾಗೋಷ್ಠಿಯನ್ನು ಮಧ್ಯದಲ್ಲಿ ಅಡ್ಡಿಪಡಿಸಿದ ಕನ್ನಡ ಪರ ಹೋರಾಟಗಾರರ ವಿರುದ್ಧ ತಮಿಳು ಪರ ಸಂಘಟನೆಯಾದ ನಾಮ್ ತಮಿಳರ್ ಕಚ್ಚಿ (ಎನ್ಟಿಕೆ) ಮುಖ್ಯ ಸಂಯೋಜಕ ಸೀಮಾನ್ ಶನಿವಾರ ವಾಗ್ದಾಳಿ ನಡೆಸಿದ್ದಾರೆ

ನಟ ಸಿದ್ಧಾರ್ಥ್ ಒಬ್ಬ ಕಲಾವಿದ. ಅವರಿಗೂ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ಅವರು ಕಾವೇರಿ ನೀರು ಕೇಳಲಿಲ್ಲ. ಕಾವೇರಿ ವಿಚಾರದಲ್ಲಿ ಕರ್ನಾಟಕದಲ್ಲಿ ಎಲ್ಲರೂ ತಮಿಳುನಾಡಿನ ವಿರುದ್ಧ ಇದ್ದಾರೆ. ಈ ಬಗ್ಗೆ ರಾಜಕೀಯ ಮುಖಂಡರು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ವಿಷಯಕ್ಕೆ ಸಂಬಂಧಿಸಿದಂತೆ ಕಲಾವಿದನನ್ನು ನಿರ್ಬಂಧಿಸುವುದು ನ್ಯಾಯವೇ? ಸೀಮಾನ್ ಪ್ರಶ್ನಿಸಿದ್ದಾರೆ.
ಸೆಪ್ಟೆಂಬರ್ 28 ರಂದು ಕಾವೇರಿ ಜಲ ವಿವಾದದ ಬಗ್ಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಿಂದಾಗಿ ಸಿದ್ಧಾರ್ಥ್ ಅವರು ತಮಿಳು ಚಲನಚಿತ್ರ ಚಿತ್ತ ಪ್ರಚಾರಕ್ಕೆ ನಡೆಸಲಾಗುತ್ತಿದ್ದ ಪತ್ರಿಕಾಗೋಷ್ಠಿಯನ್ನು ಪ್ರತಿಭಟನೆ ಕಾರಣ ಕೈಬಿಡಲಾಯಿತು. ಈ ಘಟನೆಯನ್ನು ಖಂಡಿಸಿರುವ ಮಾಜಿ ನಟರೂ ಆಗಿರುವ ಸೀಮಾನ್, ತಮಿಳುನಾಡಿನಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನವನ್ನು ನಿಲ್ಲಿಸಲು ನಮಗೆ ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
Actor #Siddharth was forced to leave a press conference he was attending of #Tamil movie "#Chiththa" on #September 28, due to angry #protestors over the #Cauverywater dispute. pic.twitter.com/qviXRWcgLM
— Madhuri Adnal (@madhuriadnal) September 28, 2023
ಕನ್ನಡ ನಟ ಯಶ್ ಅಭಿನಯದ ಕೆಜಿಎಫ್ ಇಲ್ಲಿ ಎರಡು ಭಾಗಗಳನ್ನು ಬಿಡುಗಡೆ ಮಾಡಿದೆ. ಇದಕ್ಕೆ ತಮಿಳುನಾಡಿನಲ್ಲಿ ನಾವು ಮಧ್ಯಪ್ರವೇಶಿಸಲಿಲ್ಲ, ಬದಲಾಗಿ ಆತ್ಮೀಯ ಸ್ವಾಗತ ನೀಡಿದ್ದೇವೆ. ಕನ್ನಡದ ಯಾವುದಾದರೂ ಚಿತ್ರ ತಮಿಳುನಾಡಿನಲ್ಲಿ ತೆರೆ ಕಾಣುವುದಿಲ್ಲ ಎಂದು ಹೇಳಿಕೆ ನೀಡಿದರೆ ಬಿಡುಗಡೆ ಮಾಡಲು ಸಾಧ್ಯವೇ? ಎಂದು ಪ್ರಚೋಧನಕಾರಿ ಹೇಳಿಕೆ ನೀಡಿದ್ದಾರೆ.
ಕಾವೇರಿ ಸಮಸ್ಯೆ ರಾಜಕೀಯ ಪಕ್ಷಗಳ ಮುಖಂಡರು ಚರ್ಚಿಸಿ ಬಗೆಹರಿಸಿಕೊಳ್ಳಬೇಕಾದ ವಿಚಾರ. ಆದರೆ ಈ ವಿಷಯದಲ್ಲಿ ಒಬ್ಬ ಕಲಾವಿದನಿಗೆ ಹಾಗೆ ವರ್ತಿಸಿದರೆ ಹೇಗೆ? ಸಭಾಂಗಣದ ಒಳಗೆ ಕಾವಲುಗಾರರಿದ್ದರೂ ಪ್ರತಿಭಟನಾಕಾರರನ್ನು ಏಕೆ ತಡೆಯಲಿಲ್ಲ? ಒಂದು ವೇಳೆ ತಮಿಳುನಾಡು ರಾಜ್ಯದಲ್ಲಿ ಈ ರೀತಿ ನಡೆದಿದ್ದರೆ ಅವರನ್ನು ಈಗಲೇ ಬಂಧಿಸಲಾಗುತ್ತಿತ್ತು. ಯಾವುದೇ ದ್ವೇಷದ ಕೃತ್ಯಗಳಿಗೆ ಪೊಲೀಸರು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಘಟನೆಯ ನಂತರ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕನ್ನಡ ಚಿತ್ರರಂಗದ ಪರವಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಟ ಶಿವರಾಜ್ಕುಮಾರ್ ಅವರು ಸಿದ್ಧಾರ್ಥ್ಗೆ ಕ್ಷಮೆಯಾಚಿಸಿದ್ದರು.












Click it and Unblock the Notifications