Get Updates
Get notified of breaking news, exclusive insights, and must-see stories!

Akhilesh Yadav: ಭಾರತ ತಂಡ ವಿಶ್ವಕಪ್‌ ಸೋಲಿಗೆ ಕಾರಣವೇನು? ಅಖಿಲೇಶ್ ಯಾದವ್ ಹೇಳಿದ್ದು ಹೀಗೆ...

ಇಟಾವಾ ನವೆಂಬರ್ 22: 2023ರ ಏಕದಿನ ವಿಶ್ವಕಪ್‌ನ ಅಂತಿಮ ಪಂದ್ಯವನ್ನು ಗುಜರಾತ್‌ನ ಬದಲಿಗೆ ಲಕ್ನೋದಲ್ಲಿ ಆಯೋಜಿಸಿದ್ದರೆ ಆಸ್ಟ್ರೇಲಿಯ ವಿರುದ್ಧ ಟೀಂ ಇಂಡಿಯಾ ಗೆಲ್ಲುತ್ತಿತ್ತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಭಾನುವಾರ ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಕ್ರಿಕೆಟ್ ಫೈನಲ್ ಪಂದ್ಯ ನಡೆಯಿತು. ಭಾರತವು ಫೈನಲ್‌ಗೆ ತಲುಪಲು ಸತತ 10 ಪಂದ್ಯಗಳನ್ನು ಗೆದ್ದಿತ್ತು. ಆದರೆ ಫೈನಲ್ ಪಂದ್ಯವನ್ನು ಗೆಲ್ಲಲು ಮಾತ್ರ ಸಾಧ್ಯವಾಗಲಿಲ್ಲ.

What is the reason for the defeat of the Indian team in the World Cup? Akhilesh Yadav had this to say…

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಖಿಲೆಶ್ ಯಾದವ್, "ಗುಜರಾತ್‌ನಲ್ಲಿ ನಡೆದ ಪಂದ್ಯ (ವಿಶ್ವಕಪ್ 2023 ಫೈನಲ್) ಲಕ್ನೋದಲ್ಲಿ ನಡೆದಿದ್ದರೆ, ಅವರಿಗೆ (ಟೀಮ್ ಇಂಡಿಯಾ) ಅನೇಕರ ಆಶೀರ್ವಾದ ಸಿಗುತ್ತಿತ್ತು ... ಪಂದ್ಯ ಇಲ್ಲಿ (ಲಕ್ನೋ) ನಡೆದಿದ್ದರೆ, ಟೀಂ ಇಂಡಿಯಾ ವಿಷ್ಣು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಆಶೀರ್ವಾದವನ್ನು ಪಡೆದಿದ್ದರೆ ಭಾರತ ಖಂಡಿತಾ ಗೆಲ್ಲುತ್ತಿತ್ತು. ಆದ್ದರಿಂದ ಸ್ವಲ್ಪ ಸಮಸ್ಯೆ ಆಗಿದೆ ಎಂದು ಕೇಳಬಹುದು" ಎಂದು ಅಖಿಲೆಶ್ ಯಾದವ್ ಅವರು ಹೇಳಿದ್ದಾರೆ.

ಫೈನಲ್ ಪಂದ್ಯಕ್ಕೆ ಆಗಮಿಸಿದ ಭಾರತ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್ ಆಯಿತು. ಕಠಿಣ ಬ್ಯಾಟಿಂಗ್ ನೀಡುವ ನಾಯಕ ರೋಹಿತ್ ಶರ್ಮಾ (31 ಎಸೆತಗಳಲ್ಲಿ 4 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 47 ರನ್), ವಿರಾಟ್ ಕೊಹ್ಲಿ (63 ಎಸೆತಗಳಲ್ಲಿ 4 ಬೌಂಡರಿ ಸಹಿತ 54 ರನ್) ಮತ್ತು ಕೆಎಲ್ ರಾಹುಲ್ (107 ಎಸೆತಗಳಲ್ಲಿ 1 ಬೌಂಡರಿ ಸಹಿತ 66 ರನ್) ಅವರಿಗೆ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

ಭಾರತ ತಂಡ ಸೋಲಿಕೆ ಕಾರಣ:-

ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು ತಂಡದ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಿತು. ಗಿಲ್, ರೋಹಿತ್ ಹಾಗೂ ಶ್ರೇಯಸ್ ಅಯ್ಯರ್ ವಿಕೆಟ್ ಪತನದ ಬಳಿಕ ವಿರಾಟ್ ಕೊಹ್ಲಿ-ಕೆ ಎಲ್ ರಾಹುಲ್ ಜತೆಯಾಟ ನಿಭಾಯಿಸಿದರಾರೂ ಸ್ಪೋಟಕ ಇನಿಂಗ್ಸ್‌ ಕಟ್ಟಲು ವಿಫಲವಾದರು. ಇದು ದೊಡ್ಡ ಮೊತ್ತ ಕಲೆಹಾಕುವ ಯತ್ನಕ್ಕೆ ಹಿನ್ನಡೆಯಾಯಿತು. ಮೊದಲು 47 ರನ್‌ ಗಳಿಸುವಷ್ಟರಲ್ಲಿ ಆಸ್ಟ್ರೇಲಿಯಾದ ಮೂರು ವಿಕೆಟ್ ಕಬಳಿಸಿದ್ದ ಟೀಂ ಇಂಡಿಯಾ ವೇಗಿಗಳು ಆ ಬಳಿಕ ಅದೇ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಇದು ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಎನಿಸಿತು.

ಇನ್ನು ಪಿಚ್‌ ಕೂಡಾ ಭಾರತೀಯ ಬೌಲಿಂಗ್ ಕಾಂಬಿನೇಷನ್‌ಗೆ ನೆರವಾಗುವಂತಿರಲಿಲ್ಲ. ಫೈನಲ್‌ನಲ್ಲಿ ಕೇವಲ 5 ಬೌಲರ್‌ಗಳೊಂದಿಗೆ ಕಣಕ್ಕಿಳಿದ ರೋಹಿತ್ ಶರ್ಮಾ ಪಡೆಯ ತಂತ್ರ ಯಶಸ್ಸು ಕಾಣಲಿಲ್ಲ.ಆಸ್ಟ್ರೇಲಿಯಾ ಎದುರು ಅಪಾಯಕಾರಿ ಬೌಲರ್ ಎನಿಸಿಕೊಂಡಿರುವ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಬೆಂಚ್ ಕಾಯಿಸುವಂತೆ ಮಾಡಿದ್ದು ಕೂಡಾ ಭಾರತದ ಮಾಡಿದ ಯಡವಟ್ಟು ಎನಿಸಿಕೊಂಡಿತು.

ಆಸ್ಟ್ರೇಲಿಯಾ ಗೆಲುವಿಗೆ ಕಾರಣ:-

ಮಿಚೆಲ್ ಸ್ಟಾರ್ಕ್ (3/55) ಆಸ್ಟ್ರೇಲಿಯಾದ ಉತ್ತಮ ಬೌಲರ್‌ ಆಗಿ ಆಯ್ಕೆಯಾದರು. ನಾಯಕ ಪ್ಯಾಟ್ ಕಮ್ಮಿನ್ಸ್ (2/34) ಮತ್ತು ಜೋಶ್ ಹ್ಯಾಜಲ್‌ವುಡ್ (2/60) ಕೂಡ ಉತ್ತಮ ಬೌಲಿಂಗ್ ಮಾಡಿದರು. ಆಡಮ್ ಝಂಪಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಒಂದು ವಿಕೆಟ್ ಪಡೆದರು. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ (120 ಎಸೆತಗಳಲ್ಲಿ 137, 15 ಬೌಂಡರಿ ಮತ್ತು 4 ಸಿಕ್ಸರ್) ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ (110 ಎಸೆತಗಳಲ್ಲಿ 4 ಬೌಂಡರಿ ಸಹಿತ 58 ರನ್) ಅವರ ಉತ್ತಮ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ಆರು ವಿಕೆಟ್‌ಗಳಿಂದ ಗೆದ್ದಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+