ಮೊಸಳೆ ಬುದ್ಧಿಯ ಪಾಕ್ ಏಜೆಂಟರು 'ಮೀನು ತಿಂದೆ' ಅಂದರೆ ಏನರ್ಥ?
ಗೂಢಚಾರಿಕೆಯಲ್ಲಿ ಸಂಕೇತಾಕ್ಷರಗಳನ್ನು ಬಳಸುವುದು ಬಹಳ ಹಿಂದಿನಿಂದ ಇರುವ ತಂತ್ರ. ಬಿಸಿ, ತಣ್ಣಗೆ ಹಾಗೂ ಗಾಳಿ ಎಂಬೆಲ್ಲ ಪದಗಳನ್ನು ಬಿಎಸ್ ಎಫ್, ಸೈನ್ಯ ಹಾಗೂ ವಾಯು ಸೇನೆ ಎಂಬರ್ಥದಲ್ಲಿ ಐಎಸ್ ಐ ಏಜೆಂಟರು ಬಳಸುತ್ತಾರೆ ಎಂಬ ಸಂಗತಿ ನಿಮಗೆ ಗೊತ್ತೆ?
ಪಾಕಿಸ್ತಾನದ ಐಎಸ್ ಐ ಏಜೆಂಟರು ಭಾರತದಲ್ಲಿ ಕೆಲಸ ಮಾಡುವಾಗ ತಮ್ಮನ್ನು ನಿಯಂತ್ರಿಸುವ ಅಧಿಕಾರಿಯ ಜೊತೆಗೆ ನಡೆಸುವ ಸಂಭಾಷಣೆಗೆ ಭಾರತದ ಗುಪ್ತಚರ ಇಲಾಖೆಯ ಕಿವಿಗಳು ತೆರೆದುಕೊಂಡಿರುತ್ತವೆ. ಗೂಢಚಾರಿಕೆ ಮಾಡುವವರ ಸಂಭಾಷಣೆ ಬಿಡಿಸುವಷ್ಟು, ತಿಳಿಯುವಷ್ಟು ಸರಳವಾಗಿರುವುದಿಲ್ಲ.
ಭಾರತದಲ್ಲಿ ಕೆಲಸ ಮಾಡುವ ಐಎಸ್ ಐ ಏಜೆಂಟರು ಬಳಸುವ ಸಂಕೇತಗಳು ಬಹಳ ಆಸಕ್ತಿಕರವಾಗಿವೆ. ದೇಶದ ಗುಪ್ತಚರ ದಳಕ್ಕೆ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ಈ ರೀತಿಯ ರಹಸ್ಯವಾದ ಪದಗಳು ಬಳಸಲಾಗುತ್ತವೆ.
ಎರಡು ವರ್ಷದ ಹಿಂದೆ ಪ್ರಕರಣವೊಂದನ್ನು ಭೇದಿಸುವಾಗ ತುಂಬ ಅಪರೂಪ ಎನಿಸುವಂಥ ಸಂಕೇತಗಳು ಗುಪ್ತಚರ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದವು. ಆ ಸಂಭಾಷಣೆಯನ್ನು ಮೊದಲ ಬಾರಿ ಕೇಳಿಸಿಕೊಂಡ ಅಧಿಕಾರಿಯೇ ಹೇಳಿದಂತೆ, 'ಮೊದಲಿಗೆ ಆ ವ್ಯಕ್ತಿಗೆ ಗಂಭೀರ ಸಮಸ್ಯೆ ಇದೆ" ಎಂದುಕೊಂಡರಂತೆ.

ವೈದ್ಯರು, ತೊಂದರೆ...ಏನಿದು?
ಆ ಸಂಭಾಷಣೆ ಹೀಗಿತ್ತು: "ನಾನು ವೈದ್ಯರ ಹತ್ತಿರ ಹೋಗಿದ್ದೆ. ತುಂಬ ತೊಂದರೆಯಲ್ಲಿದ್ದೀನಿ. ಸರ್ಜನ್ ನೇ ಭೇಟಿ ಆಗಿದ್ದೀನಿ. ಎಕ್ಸ್ ರೇ ಆಗಿದೆ". ಈ ಸಂಭಾಷಣೆಯನ್ನು ಭೇದಿಸುವುದಕ್ಕೆ ಅಧಿಕಾರಿಗೆ ಸ್ವಲ್ಪ ಸಮಯ ಹಿಡಿಸಿದೆ. ವೈದ್ಯರು ಅಂದರೆ ಸೇನೆ. ಸಮಸ್ಯೆ ಅಂದರೆ ಮಾಹಿತಿ ಕಳಿಸುವುದಕ್ಕೆ ಸಮಸ್ಯೆ. ಸರ್ಜನ್ ಅಂದರೆ ಬಿಎಸ್ ಎಫ್ ಗೆ ಸಂಬಂಧಿಸಿದ ಮಾಹಿತಿ.

ಮೀನು ತಿಂದಿದ್ದೀನಿ ಅಂದರೆ ಸುಮ್ನೆ ಅಲ್ಲ
ಇನ್ನು ಎಕ್ಸ್ ರೇ ಆಗಿದೆ ಅಂದರೆ ಮಾಹಿತಿಯನ್ನು ಕಳಿಸಿದ್ದೀನಿ ಎಂದರ್ಥ. ಇದೇ ಸಂಭಾಷಣೆಯಲ್ಲಿ, ಸೋದರ ನಾನು ಮೀನು ತಿಂದಿದ್ದೀನಿ ಎಂದಿದ್ದನಂತೆ. ಭಾರತದ ಯುದ್ಧ ನೌಕೆಗಳ ಬಗ್ಗೆ ಮಾಹಿತಿ ಕಳಿಸಿದ್ದೀನಿ ಎಂದು ಅದರರ್ಥ. ಇನ್ನಷ್ಟು ಸಂಕೇತಗಳನ್ನು ಇತ್ತೀಚೆಗೆ ಜೈ ಸಲ್ಮೇರ್ ನಲ್ಲಿ ಸಿಕ್ಕಿಬಿದ್ದ ಏಜೆಂಟನಿಂದ ಬಾಯಿ ಬಿಡಿಸಲಾಗಿದೆ.

ಹವಾಮಾನದ ಮಾತಾಯಿತೇ!
ಆತನಿಗೆ ಬಿಎಸ್ ಎಫ್, ಸೇನೆ ಹಾಗೂ ವಾಯು ಸೇನೆ ಬಗ್ಗೆ ಮಾಹಿತಿ ಕಳಿಸುವುದಕ್ಕೆ ನೇಮಿಸಲಾಗಿತ್ತು. ಭಾರತದ ಗುಪ್ತಚರ ಇಲಾಖೆ ಅಧಿಕಾರಿಗೆ ಈತನೇನೋ ವಾತಾವರಣದ ಬಗ್ಗೆ ಮಾತನಾಡುತ್ತಿದ್ದಾನೆ ಅನ್ನಿಸಿದೆ. ಪಾಕ್ ನ ಏಜೆಂಟ್ ಪದೇಪದೇ, ಇಲ್ಲಿ ಮಳೆ, ಬಿಸಿ ಅಥವಾ ತಂಪು ಎಂಬ ಪದ ಬಳಸಿದ್ದಾನೆ.

ಸಂಕೇತದ ಸುಳಿವು ಹೀಗೆ...
ಅದನ್ನು ಬಿಡಿಸಿದಾಗಲೇ ಗೊತ್ತಾಗಿರುವುದು: ಮಳೆ ಅಂದರೆ ವಾಯು ಸೇನೆ, ತಂಪು ಅಂದರೆ ಬಿಎಸ್ ಎಫ್, ಬಿಸಿ ಅಂದರೆ ಸೇನೆ ಎಂಬ ಅರ್ಥ. ಪಾಕ್ ನ ಐಎಸ್ ಐ ಏಜೆಂಟಗಳ ಸಂಕೇತದ ಮಾತುಕತೆಗಳನ್ನು ಭಾರತೀಯ ಅಧಿಕಾರಿಗಳು ಎಷ್ಟು ಶ್ರಮಪಟ್ಟು ಅರ್ಥೈಸಿಕೊಳ್ಳುತ್ತಾರೆ ನೋಡಿ.
-
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ












Click it and Unblock the Notifications