ವಿಡಿಯೋ: ನಡುರಸ್ತೆಯಲ್ಲಿ ಕಾನ್ಸ್ಟೇಬಲ್ಗೆ ಥಳಿಸಿದ ಯುವಕರ ಗುಂಪು
ಲಕ್ನೋ ಅಕ್ಟೋಬರ್ 27: ಬೈಕ್ ತಡೆದಿದ್ದಕ್ಕಾಗಿ ಯುವಕರ ಗುಂಪೊಂದು ಪೊಲೀಸ್ ಕಾನ್ಸ್ಟೇಬಲ್ಗೆ ಥಳಿಸಿದ ಘಟನೆ ಉತ್ತರಪ್ರದೇಶ ಲಕ್ನೋನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜಧಾನಿ ಲಕ್ನೋದಲ್ಲಿ ನಾಲ್ವರು ಯುವಕರು ನಡುರಸ್ತೆಯಲ್ಲಿ ಓಡಿ ಪೊಲೀಸ್ ಕಾನ್ಸ್ಟೇಬಲ್ಗೆ ಥಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಓಡುತ್ತಿದ್ದರೆ ಕೆಲವು ಯುವಕರು ಅವನನ್ನು ಹಿಂಬಾಲಿಸಿದ್ದಾರೆ. ಅವರನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಅಲ್ಲಿದ್ದ ಮತ್ತೊಬ್ಬ ವ್ಯಕ್ತಿ ಈ ಘಟನೆಯ ಸಂಪೂರ್ಣ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಈ ಘಟನೆ ಲಕ್ನೋದ ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಬಂಟ್ರಾ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ದಿವಾನ್ ಶ್ರೀಕಾಂತ್ ಅವರು ಬುಧವಾರ ತಡರಾತ್ರಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ನಾಲ್ವರು ಯುವಕರು ಗಲಾಟೆ ಮಾಡಿರುವುದು ಕಂಡು ಬಂದಿದೆ. ದಿವಾನ್ ಶ್ರೀಕಾಂತ್ ಅವರನ್ನು ತಡೆದು ರಸ್ತೆಯಲ್ಲಿ ಗಲಾಟೆ ಮಾಡದಂತೆ ನಿರ್ಬಂಧ ಹೇರಿದರು. ಇದಾದ ನಂತರ ನಾಲ್ವರು ಯುವಕರು ದಿವಾನ್ ಶ್ರೀಕಾಂತ್ಗೆ ನಿಂದಿಸಲು ಪ್ರಾರಂಭಿಸಿದರು. ಬಳಿಕ ನಾಲ್ವರು ಯುವಕರು ಓಡಿ ಬಂದು ದಿವಾನರಿಗೆ ರಸ್ತೆ ಮಧ್ಯ ಥಳಿಸಿದ್ದಾರೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೇಳೆ ವ್ಯಕ್ತಿಯೊಬ್ಬ ಮಧ್ಯ ಪ್ರವೇಶಿಸಿ ಪೊಲೀಸ್ ಪೇದೆ ಶ್ರೀಕಾಂತ್ ಅವರನ್ನು ರಕ್ಷಿಸಲು ಯತ್ನಿಸಿದ್ದಾನೆ. ಆದರೂ ಸುಮ್ಮನಾಗದ ಯುವಕರ ಗುಂಪು ಪೊಲೀಸ್ ಕಾನ್ಸ್ಟೇಬಲ್ಗೆ ಥಳಿಸಿದೆ. ಸ್ವಲ್ಪ ಸಮಯದ ನಂತರ ಆ ನಾಲ್ವರು ಹುಡುಗರು ಅಲ್ಲಿಂದ ಹೊರಟು ಹೋಗಿದ್ದಾರೆ. ನಂತರ ದಿವಾನ್ ಪೊಲೀಸ್ ಠಾಣೆಗೆ ತೆರಳಿ ನಾಲ್ವರು ಯುವಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ದಿವಾನ್ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸಿಪಿ ಕಾಕೋರಿ ಅನಿಧ್ಯ ವಿಕ್ರಮ್ ಸಿಂಗ್ ಮಾತನಾಡಿ, 'ದಿವಾನ್ ಶ್ರೀಕಾಂತ್ ಪರವಾಗಿ ದೂರು ನೀಡಲಾಗಿದ್ದು, ವಿಡಿಯೋ ಆಧಾರದ ಮೇಲೆ ಹಲ್ಲೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಾಗೂ ಇತರೆ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದರು.

ವಿಡಿಯೋ ವೈರಲ್ ಆದ ನಂತರ ಯುವಕರ ಪತ್ತೆಗೆ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಲ್ಲಿ ಒಬ್ಬನನ್ನು ಸೇಲಂಪುರ ಪಟೋರಾ ನಿವಾಸಿ ಅನಿಲ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಲು ಪೊಲೀಸ್ ತಂಡ ನಿರತವಾಗಿದೆ. ಇದರೊಂದಿಗೆ ಇತರರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಪೊಲೀಸರು ಅನಿಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
यूपी के राजधानी लखनऊ का यह वीडियो वायरल हो रहा है। तस्वीरें साफ हैं की मनचलों द्वारा पुलिसकर्मी की पिटाई हो रही है। सवाल बनता है की क्या सचमुच यूपी से गुंडा राज खत्म है? जवाब अगर हां है तो राजधानी में ऐसी हिमाकत कैसे? #Lucknow @Uppolice @dgpup @CMOfficeUP @adgzonelucknow pic.twitter.com/C8UZWEXkhr
— Pyare Mohan Tripathi (@JournalistPyare) October 27, 2022












Click it and Unblock the Notifications